ಗುರುವಾರ, ಜನವರಿ 2, 2014

ಪಕ್ಷ ಸಂಘಟಿಸಲು ಕಾರ್ಯಕರ್ತರಿಂದ ಸಾಧ್ಯ: ಬಿ.ನಾರಾಯಣರಾವ

ಬೀದರ ಲೋಕಸಭಾ ಚುನಾವಣಾ ಸ್ಪರ್ಧಿಯಾಗಿ ಎನ್. ಧರ್ಮಸಿಂಗ್


ಚಿತ್ರ ವಿವರ: ಬಸವಕಲ್ಯಾಣ ನಗರದ ಕಾಂಗ್ರೇಸ್ ಪಕ್ಷದ ಕಾರ್ಯಾಲಯದಲ್ಲಿ ಶನಿವಾರ ಏರ್ಪಡಿಸಿದ್ದ ಲೋಕಸಭಾ ಚುನಾವಣೆ ಪೂರ್ವಭಾವಿ ಸಭೆಯಲ್ಲಿ ಕಾರ್ಯಕರ್ತರನ್ನು ಸಭೆಯಲ್ಲಿ ಕೆಪಿಸಿಸಿ ರಾಜ್ಯ ಕಾರ್ಯದರ್ಶಿ ಬಿ.ನಾರಾಯಣರಾವ ಮಾತನಾಡುತ್ತಿರುವುವುದು. ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಬಸೀರೋದ್ದೀನ್ ಹಾಲಹಿಪ್ಪರಗಾ, ನೀಲಕಂಠ ರಾಠೋಡ, ಅಜರಲಿ ನವರಂಗ, ತಹಸೀನ್ ಅಲಿ ಜಮಾದಾರ್ ಮುಂತಾದವರು ಉಪಸ್ಥಿತರಿದ್ದರು.


ಬಸಕಲ್ಯಾಣ: ಇದೇ ಬರುವ ಜನವರಿ 26 ರಂದು ಕಾಂಗ್ರೆಸ್ ಕಾರ್ಯಕರ್ತರ ಸಭೆ ಕರೆಯಲಾಗಿದ್ದು, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಯಾಗಿ ಮಾಜಿ ಮುಖ್ಯಮಂತ್ರಿ ಎನ್. ಧರ್ಮಸಿಂಗ್ ಅವರನ್ನೇ ಟಿಕೇಟ್ ನೀಡಬೇಕೆಂದು ಹೈಕಮಾಂಡ್‍ಗೆ ಒತ್ತಾಯಿಸುತ್ತೇವೆ. ಧರ್ಮಸಿಂಗ್ ಅವರನ್ನಲ್ಲದೇ ಬೇರೆಯವರನ್ನು ಟಿಕೇಟ್ ನೀಡುವುದರೆ ಪಕ್ಷದ ಕಾರ್ಯಕರ್ತನಾಗಿ ನಾನು ಸಹಿಸುವುದಿಲ್ಲ ಎಂದು ಕೆಪಿಸಿಸಿ ರಾಜ್ಯ ಕಾರ್ಯದರ್ಶಿ ಬಿ. ನಾರಾಯಣರಾವ ನುಡಿದರು.
ಬಸವಕಲ್ಯಾಣ ನಗರದ ಕಾಂಗ್ರೇಸ್ ಪಕ್ಷದ ಕಾರ್ಯಾಲಯದಲ್ಲಿ ಶನಿವಾರ ಏರ್ಪಡಿಸಿದ್ದ ಲೋಕಸಭಾ ಚುನಾವಣೆ ಪೂರ್ವಭಾವಿ ಸಭೆಯಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿ, ಪಕ್ಷವನ್ನು ಬಲಪಡಿಸಬೇಕಾದರೆ ಮೊಟ್ಟ ಮೊದಲಿಗೆ ಬೂತ್ ಮಟ್ಟದಲ್ಲಿ ಕಾರ್ಯಕರ್ತರ ಸಮಿತಿ ರಚಿಸಲಾಗುವುದು. ಇದರಿಂದ ಪಕ್ಷ ಸಂಘಟಿಸಲು ಸಾಧ್ಯವಾಗುತ್ತದೆ. ಈ ಹಿಂದಿನ ವಿಧಾನ ಸಭಾ ಚುನಾವಣೆಯಲ್ಲಿ ನನಗಾದ ಸೋಲು ನನ್ನದಲ್ಲ. ಕಾಂಗ್ರೇಸ್‍ನ ಎಲ್ಲಾ ಕಾರ್ಯಕರ್ತರದ್ದಾಗಿದೆ ಎಂದು ಹೇಳಿದರು.
ಕಳೆದ 30 ವರ್ಷಗಳಿಂದ ಕಾಂಗ್ರೇಸ್ ಪಕ್ಷದಲ್ಲಿ ಪ್ರಾಮಾಣಿಕತೆಯಿಂದ ದುಡಿಯುತ್ತಿರುವ ಫಲವಾಗಿ ವಿಧಾನ ಸಭೆ ಚುನಾವಣೆಗೆ ಟಿಕೇಟ್ ಸಿಕ್ಕಿತ್ತು. ಆದರೆ ಪಕ್ಷದಲ್ಲಿರುವ  ಒಗ್ಗಟುತನ ಕೆಲವರಿಂದ ಒಡೆದು ಹಾಳಾಗಿರುವುದರಿಂದ ನನ್ನ ಕನಸು ಕನಸಾಗಿಯೇ ಉಳಿದಿದೆ. ಮತ್ತೆ ಉತ್ತಮ ಕಾರ್ಯಕರ್ತರಿಂದ ಪಕ್ಷ ಬಲಪಡಿಸುವ ಉದ್ದೇಶ ಹೊಂದಿದ್ದೇನೆ ಎಂದರು.
ಬರುವ ಜನವರಿ 19, 2014ಕ್ಕೆ ಆಟೋ ನಗರ ಪಾರ್ಕ ನಿರ್ಮಾಣಕ್ಕೆ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ನೇತೃತ್ವದಲ್ಲಿ ಚಾಲನೆ ನೀಡಲಾಗುವುದು. ಅದಕ್ಕಾಗಿ ಈಗಾಗಲೇ 2 ಕೋಟಿ ರೂಪಾಯಿ ಅನುದಾನ ಮೀಸಲಿಡಲಾಗಿದೆ. ಹಳೇ ಆಟೋ ನಗರ ನಿರ್ಮಾಣ ಹಾಗೂ ರಿಂಗ್ ರಸ್ತೆ ನಿರ್ಮಾಣಕ್ಕೂ ಜ. 19ಕ್ಕೆ ಚಾಲನೆ ದೊರೆಯಲಿದೆ. ಆರೋಗ್ಯ ಘಟಕದ ಕಾಮಗಾರಿ ಸಹ ಶೀಘ್ರವೆ ಆರಂಭಿಸಲಾಗುವುದು ಎಂದು ಭರವಸೆ ನೀಡಿದರು.
ಕಾಂಗ್ರೇಸ್ ಪಕ್ಷದಲ್ಲಿ ಪ್ರಾಮಾಣಿಕತೆಯಿಂದ ದುಡಿಯುವ ಯಾರನ್ನೂ ಕೂಡ ಬಲಿ ಕೊಡುವುದಿಲ್ಲ. ದುಡಿದಿರುವವರಿಗೆ ತಕ್ಕ ಪ್ರತಿಫಲ ನೀಡುವ ಉದ್ದೇಶ ನನಗಿದೆ. ನಾನು ಪಕ್ಷಕ್ಕಾಗಿ ಜೀವ ಕೊಟ್ಟರೂ ಕಾರ್ಯಕರ್ತರನ್ನು ಸಾಯಲು ಬಿಡುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಧರ್ಮ ಅವರು ಗೆದ್ದರೆ ನಾನು ಮುಂಬರುವ ವಿಧಾನಸಭಾ ಚುನಾವಣೆಗೆ ಗೆಲ್ಲುತ್ತೇನೆ ಎಂಬ ಆತ್ಮವಿಶ್ವಾಸ ಹೊಂದಿದ್ದೇನೆ ಎಂದು ಅಭಿಪ್ರಾಯ ಪಟ್ಟರು.
ಇದೇ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೇಸ್ ಉಪಾಧ್ಯಕ್ಷ ಹಾಗೂ ಜಿಲ್ಲಾ ಉಸ್ತುವಾರಿ ಬಸಿರೋದ್ದೀನ್ ಹಾಲಹಿಪ್ಪರ್ಗಾ ಮಾತನಾಡಿ, ವಿಧಾನಸಭಾ ಚುನಾವಣೆಯಲ್ಲಿ ಬಿ.ನಾರಾಯಣರಾವ ಅವರು ಸೋತಿದ್ದರೂ ಗೆದ್ದ ಶಾಸಕರಿಂದ ಆಗದ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಜನಸಾಮಾನ್ಯರ ನಡುವಿದ್ದು ಜನರ ಸಮಸ್ಯೆಗಳಿಗೆ ಸ್ಪಂಧಿಸುವ ನಿಟ್ಟಿನಲ್ಲಿ ಬಸವಕಲ್ಯಾಣ ತಾಲೂಕಿನಲ್ಲಿರುವ ಬಡ ಜನರ ಕೆಲಸ ಕಾರ್ಯಗಳನ್ನು ಮಾಡಿಸಿ ಕೊಡುತಿದ್ದಾರೆ. ಜನಪ್ರತಿನಿಧಿ ಆದವರು ಜನರಿಗಾಗಿಯೇ ಹೊರತು ಜನರಿಂದ ದೂರವಿರಲು ಶಾಸಕನಾಗಬಾರದು ಎಂದು ಕಿವಿ ಮಾತು ಹೇಳಿದರು.
ಪ್ರತಿಯೊಂದು ಪಂಚಾಯತ್ ಮಟ್ಟದಿಂದ ವಾರ್ಡ ಸಭೆಗಳನ್ನು ನಡೆಸಿ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಕಾಟಾಚಾರಕ್ಕೆ ಪಕ್ಷದಲ್ಲಿ ದುಡಿಯುವವರು ದೂರ ಸರಿದು ಸಹಕರಿಸಬೇಕು. ಅಂಥವರಿಂದ ಉತ್ತಮ ನಡವಳಿಕೆಯ ಕಾರ್ಯಕರ್ತರು ಕೂಡ ಹಾಳಾಗುತ್ತಾರೆ ಎಂದು ಖಾರವಾಗಿ ನುಡಿದರು.
ಇದೇ ವೇಳೆ ತಾಲೂಕಾ ಕಾಂಗ್ರೇಸ್ ಅಧ್ಯಕ್ಷ ನೀಲಕಂಠ ರಾಠೋಡ ಮಾತನಾಡಿ, ಪಕ್ಷದ ಹಿರಿಯ ಕಾರ್ಯಕರ್ತ ಬಿ.ನಾರಾಯಣರಾವ ಅವರು ಸೋತಿದ್ದರೂ ಜನರ ಸಂಪರ್ಕದಲ್ಲಿದ್ದುಕೊಂಡು ಪಕ್ಷ ಬಲಪಡಿಸಲು ಶ್ರಮಿಸುತಿದ್ದಾರೆ. ಜನರ ಸಾರ್ಥಕತೆಗೆ ಹಗಲಿರುಳು ದುಡಿಯುತಿದ್ದಾರೆ. ಕಾಂಗ್ರೇಸ್ ಪಕ್ಷದಲ್ಲಿ ಪ್ರಾಮಾಣಿಕವಾಗಿ ದುಡಿಯುವವರನ್ನು ಮನ್ನಣೆ ಸ್ಥಾನಮಾನ ಇದ್ದೇ ಇರುತ್ತದೆ. ಈ ಹಿಂದಿನ ವಿಧಾನಸಭಾ ಚುನಾವಣೆ ಅಷ್ಟೇನು ಕಳಪೆ ಮಟ್ಟದ್ದಾಗಿಲ್ಲ. ಇದೀಗ ಪ್ರತಿಯೊಬ್ಬ ಕಾರ್ಯಕರ್ತನು ಮಾನಸಿಕ ಸೀಮಿತದಲ್ಲಿದ್ದು ಕೆಲಸ ಮಾಡಬೇಕಾಗಿದೆ ಎಂದು ಕರೆ ನೀಡಿದರು.
ಬಡವರಿಗಾಗಿ ಇರುವ ಯಾವುದೇ ಸರ್ಕಾರಿ ಸೌಲಭ್ಯಗಳನ್ನು ಜನಸಾಮಾನ್ಯರ ಮನೆ ಬಾಗಿಲಿಗೆ ತಲುಪಬೇಕು. ಜನರ ಕುಂದು ಕೊರತೆಗಳಿಗೆ ಸ್ಪಂಧಿಸುವದರೊಂದಿಗೆ ಪರಿಹಾರವನ್ನು ಒದಗಿಸಲು ಶ್ರಮಿಸುತ್ತೇವೆ. ಪಕ್ಷದ ಕಾರ್ಯಕರ್ತರು ತಮ್ ತಮ್ಮ ಊರುಗಳಲ್ಲಿ ಉತ್ತಮ ಚಾರಿತ್ರ್ಯ ಹೊಂದಿದ್ದಾಗ ಮಾತ್ರ ಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷಕ್ಕೆ ಬಹುಮತ ಸಿಗಲು ಸಾಧ್ಯವಾಗುತ್ತದೆ ಎಂದು ರಾಠೋಡ ವಿವರಿಸಿದರು.
ನಗರ ಘಟಕದ ಅಧ್ಯಕ್ಷ ಅಜರ ಅಲಿ ನವರಂಗ ಮಾತನಾಡಿದರು. ಅಶೋಕ ಗುತ್ತೇದಾರ್, ರೈಲ್ವೆ ಸಮಿತಿ ಸದಸ್ಯ ದಿಲೀಪ ಶಿಂಧೆ, ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ಘಟಕದ ಅಧ್ಯಕ್ಷ ಅಶೋಕ ಢಗಳೆ, ತಹಸೀನ್‍ಅಲಿ ಜಮಾದಾರ್, ಯುವರಾಜ ಭೆಂಡೆ, ಅಜೀಜ್ ಅಟ್ಟೂರ್, ರಾಜಕುಮಾರ ಗುಂಡೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಭೆಯಲ್ಲಿ ನೂರಾರು ಕಾರ್ಯಕರ್ತರು ಹಾಜರಿದ್ದರು.

ವರದಿ: ವೀರಣ್ಣ ಮಂಠಾಳಕರ್
ಬಸವಕಲ್ಯಾಣ, ಬೀದರ ಜಿಲ್ಲೆ
ಮೊ. ಸಂಖ್ಯೆ: 8105783103


ಬುಧವಾರ, ಏಪ್ರಿಲ್ 17, 2013

ಸಮಾನತೆ ತರಲು ಪ್ರಯತ್ನಿಸಿದ ಏಕೈಕ ನಾಡು ಕಲ್ಯಾಣವಾಗಿದೆ:ಬಿ.ನಾರಾಯಣ

           ಕಾಂಗ್ರೆಸ್್ ಪಕ್ಷದ ಅಭ್ಯಥಿ೯ ಹಾಗೂ ಹಿರಿಯ
                   ಮುಖಂಡ ಬಿ.ನಾರಾಯಣ ಅ


ಸಾಮಾಜಿಕ ನ್ಯಾಯಕ್ಕಾಗಿ 12ನೇ ಶತಮಾನದಲ್ಲಿ ನಡೆದ ಶರಣರ ಕ್ರಾಂತಿ ಭೂಮಿ ಬಸವಕಲ್ಯಾಣ
ಕ್ಷೇತ್ರದಿಂದ ವಿಧಾನಸಭೆ ಚುನಾವಣೆಗೆ ಸ್ಪಧಿ೯ಸಲು ಸಿಕ್ಕಿರುವ ಅವಕಾಶ ಅದು ನನ್ನ
ಸೌಭಾಗ್ಯವಾಗಿದೆ. ಜನರ ಸೇವೆಗಾಗಿ ನಾನು ಸದಾ ಕಂಕಣಬದ್ಧನಾಗಿದ್ದೇನೆ ಎಂದು
ಕಾಂಗ್ರೆಸ್್ ಅಭ್ಯಥಿ೯ ಬಿ.ನಾರಾಯಣ ಅಭಿಪ್ರಾಯಪಟ್ಟಿದ್ದಾರೆ.

ಬುಧುವಾರ ಅವರು ಕಾಂಗ್ರೆಸ್್ ಪಕ್ಷದಿಂದ ನಾಮ ಪತ್ರ ಸಲ್ಲಿಸಿದ ಬಳಿಕ
ಮಾತನಾಡಿ, ವಿಶ್ವಗುರು ಬಸವಣ್ಣನವರು ಸವ೯ಧಮ೯ ಸಮಾನತೆಗಾಗಿ
ಹೋರಾಡಿದ ಚಿತ್ರಣ ನನ್ನ ಕಣ್ಣೆದುರಿಗಿದೆ. ಬಡವ, ದಲಿತರ, ಶೋಷಿತರ, ಹಿಂದುಳಿದವರ
ಏಳ್ಗೆ ನನ್ನ ಗುರಿಯಾಗಿದೆ ಎಂದರು.

ಕೇಂದ್ರ ಸಕಾ೯ರದ ಸಾಧನೆ ಜನಸಾಮಾನ್ಯರು ಅರಿತುಕೊಂಡಿದ್ದಾರೆ. ಆ ನಿಟ್ಟಿನಲ್ಲಿ ಜನರ
ಆಶೋತ್ತರಗಳಿಗೆ ಸ್ಪಂಧಿಸುವ ಮನೋಭಾವ ಹೊಂದಿರುವ ನನಗೆ ಮತದಾರರು ಒಲಿದರೆ ಬಸವಕಲ್ಯಾಣ
ತಾಲೂಕಿನ ಸಮಗ್ರ ಅಭಿವೖದ್ಧಿ ಮತ್ತು ಸವ೯ಧಮ೯ದವರನ್ನು ಸಮಾನತೆಯಿಂದ ಕಾಣುವುದೇ ನನ್ನ
ಧ್ಯೇಯವಾಗಿದೆ ಎಂದು ಸ್ಪಷ್ಟಪಡಿಸಿದರು.

ಬಸವಣ್ಣನವರು ಅಂತಜಾ೯ತಿ ವಿವಾಹ, ಸಮಾನತೆ ತರಲು ಪ್ರಯತ್ನಿಸಿದ ಏಕೈಕ ನಾಡು
ಕಲ್ಯಾಣವಾಗಿದೆ. ಅಂತಹ ನಾಡಿನಿಂದ ಸ್ಪಧಿ೯ಸುವುದು ಪುಣ್ಯವೆಂದು ಭಾವಿಸಿದ್ದೇನೆ.
ಸಮಾಜದಲ್ಲಿ ತುಳಿತಕ್ಕೆ ಒಳಗಾದ ಜನರ ಬದುಕು ಸ್ವಾಭಿಮಾನದಿಂದ ಬದುಕುವಂಥ ವಾತಾವರಣ
ನಿಮಾ೯ಣಗೊಳ್ಳಬೇಕಾದ್ದು ಅವಶ್ಯವಾಗಿದೆ ಎಂದು ಅಭಿಮತಪಟ್ಟರು.

ಸವ೯ರಿಗೂ ಸಮಪಾಲು ಸಮಬಾಳು ನೀಡುವಂಥ ಸಿದ್ಧಾಂತ ಬಸವಣ್ಣನವರ ನಾಡಿನಿಂದ ಆಗಬೇಕು. ಅಂತಹ
ಯೋಚನೆಗಳು ಜಾರಿಗೆ ತರುವಂಥ ಉದ್ದೇಶ ಎಲ್ಲರದ್ದಾಗಬೇಕು. ಸ್ವಾತಂತ್ರ್ಯ ಸಿಕ್ಕು 65
ವಷ೯ ಕಳೆದರೂ ಯಾರೂ ಕೂಡ ಶೋಷಿತರ ಪರವಾಗಿ ಹೋರಾಟ ಮಾಡಲು ಮುಂದಾಗುತ್ತಿಲ್ಲ ಎಂದು
ವಿಷಾದಿಸಿದರು.

ಹಿಂದುಳಿದ ಜನರ ಶ್ರೇಯೋಭಿವೖದ್ಧಿ ನನ್ನ ಗುರಿಯಾಗಿದೆ. ಸಮಾಜದಲ್ಲಿ ಸಾಮರಸ್ಯದಿಂದ
ಬಾಳಿ, ರಾಜಕೀಯದಲ್ಲಿ ಸಾಮಾಜಿಕ ಚಿಂತನೆ ನಡೆಸುತ್ತಾ ಪ್ರಾಮಾಣಿಕವಾಗಿ ಜನರ ನೋವು,
ಸಮಸ್ಯೆಗಳಿಗೆ ಸ್ಪಂಧಿಸುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಗುರುವಾರ, ಮಾರ್ಚ್ 21, 2013

ಜಾತಿ, ಮತ, ಧಮ೯ ಮೀರಿ ಆಚರಿಸುವ ಹಬ್ಬ : ಮೈ ಮನಕ್ಕೆ ರಂಗೋಲಿ ಹಾಕುವ ಹೋಳಿಯಿದು

  21,302013 ರಂದು ಕನ್ನಡಪ್ರಭದಲ್ಲಿ ಪ್ರಕಟವಾದ ವರದಿ ಲೇಖನದ ಸ್ಕ್ಯಾನ್
 ವೀರಣ್ಣ ಮಂಠಾಳಕರ್
ಬಸವಕಲ್ಯಾಣ, ಮಾ.21,ಎಲ್ಲರೂ ಕುಣಿದು ಕುಪ್ಪಳಿಸುವ ಬಣ್ಣದೋಕುಳಿಯ ಹಬ್ಬ ಹೋಳಿ ರಂಗಿನಾಟದಲ್ಲಿ ವಯಸ್ಸಿನ ಭೇದಭಾವವಿಲ್ಲದೇ ಸಂಭ್ರಮಿಸುವ ಕ್ಷಣ ಇನ್ನೇನು ಬಂದೇ ಬಿಟ್ಟಿತ್ತು. ಇದೇ ಮಾ.26ರಂದು ಹಿಂದೂಗಳ ಹಬ್ಬವೆಂದೇ ಆಚರಿಸಲ್ಪಡುವ ಬಣ್ಣದೋಕುಳಿಯ ಹೋಳಿ ಹಬ್ಬ ಉತ್ತರ ಭಾರತ ಸೇರಿದಂತೆ ದೇಶದ ವಿವಿಧೆಡೆ ಜಾತಿ-ಮತ, ಧರ್ಮ ಮೀರಿ ಆಚರಿಸುವ ಹೋಳಿ ಹಬ್ಬವಾಗಿದೆ.

ಇತ್ತೀಚೆಗೆ ಕಾಲ ಬದಲಾಗುತ್ತಿದ್ದಂತೆ, ಮತ್ತು ಪ್ರತಿ ಪರ್ವವೂ ಪರಿವರ್ತನೆ ಆಗುತ್ತಿರುವ ಸಂದಭ೯ಗಳಲ್ಲಿ ಹೋಳಿ ಹಬ್ಬ ಕೂಡ ರಂಗು ರಂಗಿನಾಟವಾಗಿ ಮಾರ್ಪಟ್ಟು, ದಕ್ಷಿಣ ಭಾರತೀಯರನ್ನೂ ಸೆಳೆಯತೊಡಗಿದೆ. ಓಕುಳಿಯಾಡುವ ಮೋಜಿಗಾಗಿ ಮತ್ತು ಅದೊಂದು ರೀತಿಯ ಫ್ಯಾಶನ್್ ಆಗಿ ಈ ಫಾಲ್ಗುಣದ ಶುಕ್ಲ ಪಕ್ಷದ ಹುಣ್ಣಿಮೆಯಂದು ಹೇಳಲಾಗುತ್ತದೆ.

ಭಾರತೀಯರ ಹಬ್ಬವಾಗಿ ಟಿವಿ, ಸಿನಿಮಾಗಳು ಕೂಡ ಹೋಳಿಯನ್ನು ಮೋಜಿನ ಹಬ್ಬವೆಂದು ಪ್ರತಿಬಿಂಬಿಸುತ್ತಾ ಬಂದಿವೆ. ಇದರಿಂದ ಜನಮನದಲ್ಲಿ ಅಚ್ಚಳಿಯದೇ ಉಳಿದ ಹೋಳಿ ಹಬ್ಬದಾಚರಣೆ ನೆಪವೊಡ್ಡಿ, ಪಿಚಕಾರಿ ಮೂಲಕ ರಂಗು ಎರಚುವಿಕೆ, ಕೈಮೈಗಳಿಗೆ ಬಣ್ಣ ಮೆತ್ತುವುದು. ಅಟ್ಟಾಡಿಸಿಕೊಂಡು ಹೋಗಿ ಬಣ್ಣ ಹಚ್ಚಿ ಬಿಡುವುದೆಂದರೆ ಒಂಥರಾ ಖುಷಿಯಾಗಿರುತ್ತದೆ.

ಪ್ರತಿಯೊಂದು ಹಬ್ಬಗಳಿಗೂ ಪೌರಾಣಿಕ ಹಿನ್ನೆಲೆ ಇರುವಂತೆ ಹೋಳಿ ಕೂಡ ಹಿರಣ್ಯಕಶ್ಯಪು ಮತ್ತು ಪುತ್ರ ಪ್ರಹ್ಲಾದನ ನಡುವಿನ ಕಥೆಯೊಂದು ಸಾರುತ್ತದೆ. ಇದು ಶೈವ-ವೈಷ್ಣವ ಹೊಯ್ದಾಟದ ತಿರುಳನ್ನು ಹೊಂದಿದ್ದು, ಆ ಕಾರಣಕ್ಕಾಗಿ ಹೋಳಿ ಪ್ರಮುಖವಾಗಿ ಉತ್ತರ ಭಾರತದಲ್ಲಿ ಅದ್ಧೂರಿಯಾಗಿ ಅಚರಿಸುತ್ತಾರೆ.

ಮಂಗಳೂರು, ಉಡುಪಿ ಜಿಲ್ಲೆಗಳಲ್ಲಿ ಹೋಳಿ ಮೀನುಗಾರ (ಖಾರ್ವಿ) ಹಾಗೂ ಬುಡಕಟ್ಟಿನ ಕುಡುಬಿ ಜನಾಂಗಕ್ಕೆ ಮಾತ್ರ ಸೀಮಿತವಾಗಿದ್ದ ಹಬ್ಬ ಇತ್ತೀಚಿನ ಕೆಲ ವಷ೯ಗಳಲ್ಲಿ ಬಣ್ಣದೋಕುಳಿ ಎರಚುವಿಕೆ ಹೆಚ್ಚಿನ ಶಾಲಾ-ಕಾಲೇಜುಗಳಲ್ಲಿ ಮಹತ್ವ ಪಡೆದಿದೆ. ಗ್ರಾಮಾಂತರ ಹಾಗೂ ನಗರ ಪ್ರದೇಶಗಳ ಜನರ ವಿಶಿಷ್ಟ ಹಬ್ಬವಾಗಿ ಸಹ ರೂಪುಗೊಂಡಿದೆ.

ಏನೆಲ್ಲ ಮನರಂಜನೆ ನೀಡುವ ಹೋಳಿ ಹಬ್ಬದ ಹಿಂದೆ ಒಂದೆರಡು ಪೌರಾಣಿಕ ಕಥೆಗಳೂ ಇವೆ. ಅದರಲ್ಲಿ ಪ್ರಮುಖವಾದದ್ದು ಪುರಾಣದಲ್ಲಿ ಉಲ್ಲೇಖವಿರುವ ಕಾಮ ದಹನ. ತಾರಕಾಸುರನೆಂಬ ರಾಕ್ಷಸ ರಾಜನ ಉಪಟಳ ತಾಳದೆ, ಬ್ರಹ್ಮನ ವರಬಲದ ಸೊಕ್ಕಿನಿಂದ ಲೋಕದಲ್ಲಿ ಆತನಿಂದಾಗಿ ಅನ್ಯಾಯ ಹೆಚ್ಚಾಗಿತೆನ್ನಲಾಗುತ್ತದೆ.

ಆದ್ದರಿಂದ ಅವನ ಸಂಹಾರಕ್ಕೆ ದೇವತೆಗಳು ಉಪಾಯ ಹೂಡಿ, ಶಿವನಿಗೆ ಜನಿಸಿದ ಏಳು ದಿನದ ಮಗುವಿನಿಂದ ಮಾತ್ರವೇ ತನಗೆ ಸಾವು ಎಂಬ ವರಬಲವೇ ಆತನ ಮದಕ್ಕೆ ಕಾರಣ. ಆದರೆ ಶಿವನು ಆ ಸಂದರ್ಭ ಭೋಗಸಮಾಧಿಯಲ್ಲಿದ್ದ ಕಾರಣ, ಪಾರ್ವತಿಯನ್ನು ಕೂಡುವಂತಿರಲಿಲ್ಲ. ದೇವತೆಗಳು ಕಾಮ (ಮನ್ಮಥ)ನ ಮೊರೆ ಹೋಗುವ ಪುರಾಣ ಕಥೆ ಮುಂದೊರೆಯುತ್ತದೆ.

ಲೋಕಕಲ್ಯಾಣವೆಂಬ ಅತಿಶಯದಿಂದ ಪರೋಪಕಾರ್ಥವಾಗಿ ಕಾಮನು ತನ್ನ ಹೂಬಾಣಗಳಿಂದ ಶಿವನನ್ನು ಬಡಿದೆಬ್ಬಿಸಿ, ತಪೋಭಂಗ ಮಾಡುತ್ತಾನೆ. ಕೆರಳಿ ಮೂರನೇ ಕಣ್ಣು ತೆರೆದ ಈಶ್ವರನ ಕ್ರೋಧಾಗ್ನಿಗೆ ಕಾಮನು ಸುಟ್ಟು ಭಸ್ಮವಾಗುತ್ತಾನೆ ಎಂಬುದು ಪ್ರತೀತಿ ಇದೆ.

ಕಾಮನರಸಿ ರತಿದೇವಿಯು ಪರಿಪರಿಯಾಗಿ ಶಿವನಲ್ಲಿ ಪತಿಭಿಕ್ಷೆ ಯಾಚಿಸಲು, ಕಾಮನು ಅನಂಗನಾಗಿಯೇ ಇರುತ್ತಾನೆ, ಆದರೆ ಪತ್ನಿಗೆ ಮಾತ್ರ ಶರೀರಿಯಾಗಿ ಕಾಣಿಸುತ್ತಾನೆ. ಶಿವನು ರತಿದೇವಿಗೆ ಅಭಯ ನೀಡಿದನೆಂಬುದು ಪುರಾಣದಲ್ಲಿ ಹೇಳುವ ಕಥನವಾಗಿದೆ.

ನವನೀತಚೋರ ಶ್ರೀಕೃಷ್ಣನು ಗೋಪಿಕೆಯರಿಗೆ ಪಿಚಕಾರಿ ಮೂಲಕ ಓಕುಳಿ ಹಾರಿಸುತ್ತಾ, ರಂಗು ರಂಗಾಗಿಸುತ್ತಿದ್ದ ಮತ್ತು ಬೇಕೆಂದೇ ಆತನ ರಂಗಿನೆರಚಾಟಕ್ಕೆ ತುತ್ತಾಗಲು ಹವಣಿಸುತ್ತಿದ್ದ ಗೋಪಿಕೆಯರ ದೃಶ್ಯಗಳು ಕಣ್ಮುಂದೆ ಬಂದು ಹೋಗುವ ನೆನಪು ಸುಳಿದು ಹೋಗುವಂಥದ್ದು..

ಹೋಳಿ ನೆಪದಲ್ಲಿ ಮೋಜು, ಮಜಾ ಮಾಡುವುದೆಂದು ಬಹುತೇಕರು ಭಾವಿಸಿದ್ದಾರೆ. ನಿಜಾಥ೯ದಲ್ಲಿ ಹೋಳಿ ಹಬ್ಬದ ಆಚರಣೆ ಐತಿಹಾಸಿಕ ಎನ್ನಬಹುದು. ಖಾರ್ವಿ ಜನಾಂಗ ಹೋಳಿ ಹಬ್ಬ ವೈಶಿಷ್ಟ್ಯವಾಗಿ ಆಚರಿಸುವಂತೆ ಕುಡುಬಿ ಜಾತಿಯವರು ಕೂಡ ವಿಶಿಷ್ಟ ಜಾನಪದ ಹಾಡು, ಸಾಂಪ್ರದಾಯಿಕ ಉಡುಗೆ-ತೊಡುಗೆ, ನರ್ತನದ ಮೂಲಕ ಆಚರಿಸುತ್ತಾರೆ.

ಉತ್ತರ ಕರ್ನಾಟಕದಲ್ಲಿ ಕುರುಬ ಜನಾಂಗವೂ ಕೂಡ ಕೊರಳಿಗೆ ಡೋಲು ಕಟ್ಟಿಕೊಂಡು ಹೋಳಿಯ ದಿನದಂದು ತಮ್ಮ ಇಷ್ಟದ ದೈವ ಬೀರಲಿಂಗೇಶ್ವರ ದೇವರನ್ನು ಆರಾಧಿಸುತ್ತಾ, ಡೊಳ್ಳು ಕುಣಿತ ವಿಶಿಷ್ಟವಾಗಿರುತ್ತದೆ. ಆದರೆ ಈ ಪರಂಪರೆ ಇತ್ತೀಚಿಗೆ ಮರೀಚಿಕೆಯಾಗಿದೆ.

ಕುರುಬರು ಹೋಳಿಯಂದು ಬೀರೇಶ್ವರನನ್ನು ಸ್ತುತಿಸುತ್ತಾ ಡೊಳ್ಳು ಕುಣಿತದೊಂದಿಗೆ ಆಕರ್ಷಕ ಜನಪದ ನರ್ತನ ಪ್ರದಶಿ೯ಸುವ ಆಸಕ್ತಿದಾಯಕ ಹಬ್ಬ ಇದಾಗಿದೆ. 12ಜನರ ತಂಡದೊಂದಿಗೆ ತಾಳ, ತಪ್ಪಾಡಿ, ಡೋಲು,ಕೊಳಲಿನ ಸುಶ್ರಾವ್ಯ ಸಂಗೀತದೊಂದಿಗೆ ಹೋಳಿಯ ನರ್ತನ ಸಾಗುತ್ತದೆ.

ಇದರಲ್ಲಿ ಡೊಳ್ಳು ಹಾಡು ಮತ್ತು ಡೋಲು ಹಾಡು ಎಂಬ ಎರಡು ವಿಧಗಳಲ್ಲಿ ನರ್ತನ ನಡೆಯುತ್ತದೆ. ಕೈಪಟ್ಟಿನೊಂದಿಗೆ ಡೋಲು ಬಾರಿಸುವ ಮೂಲಕ ಹಾಡುತ್ತ ನರ್ತಿಸುವುದು ಪ್ರಮುಖವಾದ ಅಂಶ ಕೂಡ. ಈ ಸಂದರ್ಭದಲ್ಲಿ ಹಾಲುಮಾತ ಪುರಾಣವನ್ನು ಕೂಡ ಹಾಡುತ್ತ ನರ್ತಿಸುವುದು ಕುರುಬ ಜನಾಂಗದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ.

ಇನ್ನುಳಿದಂತೆ ಬೀದರ್ ,ಗುಲ್ಬರ್ಗಾ, ರಾಯಚೂರು, ಬಳ್ಳಾರಿ, ಮುಂಬೈ, ಹೈದರಾಬಾದ ಕನಾ೯ಟಕದಲ್ಲಿ ಹೋಳಿಯನ್ನು ಹಿಂದೂ-ಮುಸ್ಲಿಮ್್ ಎನ್ನುವ ಬೇಧವಿಲ್ಲದೆ ಹೋಳಿ ಆಚರಿಸಲ್ಪಡುತ್ತದೆ. ಧಾರ್ಮಿಕ ಆಚರಣೆಯ ಹಿನ್ನೆಲೆಯಲ್ಲಿ ನಡೆಯುವ ಹೋಳಿಯ ಬಣ್ಣದೋಕುಳಿ ಎರಚುವಿಕೆ ಇಂದು ಕೇವಲ ಸಂಭ್ರಮವಾಗಿ ಉಳಿದಿಲ್ಲ.

ಹೋಳಿ ಹಬ್ಬ ನೆಪದ ಹಿಂದೆ ವಿಕೃತ ಮನಸ್ಸುಗಳು ಕೂಡ ಸೇರಿಕೊಂಡಿರುತ್ತವೆ. ಇದರಿಂದಾಗಿ ಅಪಾಯವೂ ಹೆಚ್ಚಿದೆ. ಬಣ್ಣಕ್ಕೆ ವಿವಿಧ ರಾಸಾಯನಿಕ ಸೇರಿಸುವುದು ಇಲ್ಲವೇ ದುರುದ್ದೇಶದಿಂದ ಆಸಿಡ್‌್ನಂತಹ ದ್ರವ್ಯ ಸೇರಿಸಿ ಮುಖಕ್ಕೆ ಎರಚಿದ ಘಟನೆ ಸಾಕಷ್ಟು ಬಾರಿ ಎಲ್ಲಡೆ ವರದಿಯಾಗಿರುತ್ತವೆ.

ಆ ಒಂದು ನಿಟ್ಟಿನಲ್ಲಿ ಪ್ರತಿಯೊಬ್ಬರೂ ಕಟ್ಟೆಚ್ಚರ ವಹಿಸಿ ಜಾತ್ಯತೀತವಾಗಿ ನಡೆಯುವ ಬಣ್ಣದೋಕುಳಿಯ ನಡುವೆ ರಕ್ತದೋಕುಳಿ ಹರಿಯದಂತೆ ನೋಡಿಕೊಳ್ಳಬೇಕಾಗಿದೆ. ಶಾಲಾ-ಕಾಲೇಜುಗಳಲ್ಲಿ ಮೋಜಿಗಾಗಿ ಮುಖಕ್ಕೆ ಬಣ್ಣ, ಸುನಾರಿಯಂತಹ ಪುಡಿ,ಪುಡಿಗಳನ್ನು ಹಚ್ಚಲಾಗುತ್ತದೆ. ಆದರೂ ವಿಕೖತ ಮನಸ್ಸಿನ ಅಪಾಯ ತಡೆಗಟ್ಟಲು ಎಚ್ಚರ ಅಗತ್ಯವಾಗಿದೆ.


 ಕನ್ನಡಪ್ರಭ ಕೖಪೆ.....
ರಂಗಿನೆರಚಾಟದಲ್ಲಿ ತೊಡಗಿರುವ ಚಿಣ್ಣರು

ಸೋಮವಾರ, ಮಾರ್ಚ್ 18, 2013

ಯುವ ಉತ್ಸಾಹಿ ಸಕ್ರೀಯ ರಾಜಕಾರಣಿ ಸೂರ್ಯಕಾಂತ ಚಿಲ್ಲಾಬಟ್ಟೆ


                                                (ರಾಜಕೀಯ ಪ್ರತಿಭಾನ್ವೇಷಣೆ)

ಸೂರ್ಯಕಾಂತ ಚಿಲ್ಲಾಬಟ್ಟೆ
ಲೇಖಕರು: ವಿ.ಎಚ್.ವೀರಣ್ಣ ಮಂಠಾಳಕರ್
ಮೂಲ ವಕೀಲ ವೃತ್ತಿಯನ್ನು ಪ್ರಾರಂಭಿಸಿ ರಾಜಕೀಯ ಕ್ಷೇತ್ರದೆಡೆ ವಿಶೇಷ ಆಸಕ್ತಿ ತೋರಿರುವ ಸೂರ್ಯಕಾಂತ ಚಿಲ್ಲಾಬಟ್ಟೆ ಅವರು ಯುವ ಉತ್ಸಾಹಿಯಾಗಿ ಸಣ್ಣ ವಯಸ್ಸಿನಲ್ಲಿಯೇ ಬಿಜೆಪಿ ನಗರ ಘಟಕದ ಅಧ್ಯಕ್ಷರಾಗಿ ಪಕ್ಷದಿಂದ ಏಕೈಕ ನಗರ ಸಭೆ ಸದಸ್ಯರಾಗಿ ಆಯ್ಕೆಗೊಂಡಿರುವ ಇವರು ನಿಷ್ಠಾವಂತ ಕಾರ್ಯಕರ್ತರಾಗಿ ಸೇವೆ ಸಲ್ಲಿಸುತ್ತಲೆ ಅನೇಕ ರಾಜಕೀಯ ಮುಖಂಡರೊಂದಿಗೆ ಗುರುತಿಸಿಕೊಂಡಿರುವ ಚಿಲ್ಲಾಬಟ್ಟೆ ಚಿಲ್ಲರೆ ರಾಜಕೀಯವನ್ನು ಮಾಡದೇ ಜನಪರವಾದ ಹತ್ತು ಹಲವು ಕಾರ್ಯಕ್ರಮಗಳನ್ನು ಮಾಡಿಕೊಂಡು ಬರುತಿದ್ದಾರೆ.

ಈ ಎಲ್ಲಾ ಹಿನ್ನೆಲೆಯ ಅನುಭವದಿಂದ ತಮ್ಮನ್ನು ತಾವು ಸಕ್ರೀಯವಾಗಿ ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದಾರೆ. ನಗರ ಸಭೆಯ ಸದಸ್ಯರಾಗಿಯೂ ಕಾರ್ಯಪ್ರವೃತ್ತರಾಗಿದ್ದಾರೆ. ಭಾಜಪ ನಗರ ಘಟಕದ ಅಧ್ಯಕ್ಷರಾಗಿ ಮತ್ತೆ ಸಲ್ಲಿಸುತ್ತಿರುವ ಇವರ ಸೇವೆ ಅನನ್ಯವಾದದ್ದು. ಸಂಘಟನಾಪರ ಚತುರರಾಗಿ ಬಿಎಎಲ್‍ಎಲ್‍ಬಿ ಪದವಿಧರರಾಗಿ, ರಾಜಕೀಯ ಪ್ರವೇಶಕ್ಕಿಂತ ಮುಂಚೆ ವಕೀಲರಾಗಿ ಸೇವೆ ಸಲ್ಲಿಸುತಿದ್ದಾರೆ. ನಂತರದ ದಿನಗಳಲ್ಲಿ ರಾಜಕೀಯವೆಂಬುದು ಇವರ ವ್ಯಕ್ತಿತ್ವಗನುಗುಣವಾಗಿ ಒಲಿದು ಬಂದಿದೆ.

ಬಸವಕಲ್ಯಾಣ ತಾಲೂಕಿನ ಬೇಲೂರು ಎಂಬ ಗ್ರಾಮದಿಂದ ಬಂದಿರುವ ಚಿಲ್ಲಾಬಟ್ಟೆಯವರು ಶಿಕ್ಷಣ ಸಂಸ್ಥೆಗಳ ಹಲವು ಬಡ ಮಕ್ಕಳಿಗೆ ಉಚಿತವಾದ ಬಟ್ಟೆ, ವಿದ್ಯಾಭ್ಯಾಸ ಪೂರೈಕೆ ಮಾಡುವುದೆಂದರೆ ಎಲ್ಲಿಲ್ಲಸ ಖುಷಿಯನ್ನನುಭವಿಸುತ್ತಾರೆ. ಜನಪರ ಸೇವೆಗೆ ಎಲ್ಲಿದ್ದರೂ ಧಾವಿಸಿ ಬರುವ ಸರಳ ಸ್ವಭಾವದ ಸೌಮ್ಯ ವ್ಯಕ್ತಿತ್ವ ರೂಪಿಸಿಕೊಂಡಿರುವ ಅಪರೂಪದ ಯುವ ನಾಯಕನೆಂದರೆ ತಪ್ಪಾಗಲಾರದು.

ಬಸವಕಲ್ಯಾಣ ತಾಲೂಕಿನ ಅನೇಕ ಹಳ್ಳಿಗಳ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಉಚಿತ ನೇಗಿಲು ವಿತರಣೆ, ಬೆಳೆಗಳಿಗೆ ಮದ್ದು ಸಿಂಪಡಿಸುವ ಯಂತ್ರೋಪಕರಣಗಳು ದಾನವಾಗಿ ನೀಡುವುದರಿಂದ ಅದೇನೋ ತೃಪ್ತಿ ಭಾವವನ್ನು ಅನುಭವಿಸುತ್ತಾರೆ. ಬೀಜ ಬಿತ್ತನೆ, ಮುಂತಾದ ರೈತಪರ ಉಪಯೋಗಿ ಸಾಮಾಗ್ರಿಗಳು ಇಂದಿಗೂ ಕೊಡುತ್ತಲೇ ಬಂದಿದ್ದಾರೆ.
ಅನ್ನದಾತನ ಸೇವೆಯಿಂದ ಸಮೃದ್ಧ ಸಮಾಜ ನಿರ್ಮಾಣಕ್ಕೆ ಒಂದು ಪ್ರೇರಣೆ ಎಂಬ ಭಾವನೆ ಮೂಡಿಸಿಕೊಂಡಿರುವ ಇವರು, ಯಾವುದೇ ಹಬ್ಬ ಹರಿದಿನಗಳಲ್ಲಿ ಅನೇಕ ಬಡ ಮಹಿಳೆಯರಿಗೆ ಸೀರೆ ವಿತರಣೆ ಮಾಡುತ್ತ ಬಂದಿದ್ದಾರೆ.

ಜನಪರಯೋಗಿ, ಜನಪ್ರಿಯ ಕಾರ್ಯ ಯೋಜನೆಗಳನ್ನು ಹಾಕಿಕೊಂಡಿರುವ ಇವರು ಮಹತ್ವದ ಅಭಿವೃದ್ಧಿ ಕನಸಗಳನ್ನು ಹೊತ್ತಿರುವ ಚಿಲ್ಲಾಬಟ್ಟೆ ಒಂದು ಹೊಸ ಯುವಪಡೆಯೊಂದಿಗೆ ಮುಂದಡಿ ಇಡುತಿದ್ದಾರೆ. ಗ್ರಾಮ ಪಂಚಾಯತ್ ಚುನಾವಣೆ, ತಾಲೂಕಾ ಪಂಚಾಯತ್ ಚುನಾವಣೆ ಸಂದರ್ಭದಲ್ಲಿ ಚುನಾವಣಾ ಕಣದಲ್ಲಿದ್ದು ಸ್ಪರ್ಧಿಸುವ ಅಭ್ಯರ್ಥಿಗಳಿಗೆ ಪಂಚಾಯತ್ ಚುನಾವಣೆ ಸೇರಿದಂತೆ ವಿಧಾನಸಭಾ ಚುನಾವಣೆಗಳಲ್ಲಿ ಸಹ ತಮ್ಮ ಪಕ್ಷದ ಅಭ್ಯರ್ಥಿಗಳು ಚುನಾವಣಾ ಸ್ಪರ್ಧಾ ಕಣದಲ್ಲಿದ್ದವರಿಗೆ ಸದಾ ಸಾಥ್ ನೀಡುತ್ತಲೇ ಬಂದು, ಅವರ ಗೆಲುವಿಗೆ ಪ್ರಮುಖ ಪಾತ್ರ ವಹಿಸಿರುವ ಅನೇಕ ಉದಾಹರಣೆಗಳಿವೆ.

ಇವರ ಸಹಕಾರದಿಂದ ಹಲವರು ಅಧಿಕಾರದ ಗದ್ದುಗೆಯನ್ನೇರಿದ್ದಾರೆ. ಮುಂಬರುವ ದಿನಗಳಲ್ಲಿ ರಾಜಕೀಯ ಕ್ಷೇತ್ರದಲ್ಲಿ ಉತ್ತಮ ನಾಯಕರಾಗಿ ಗುರುತಿಸಿಕೊಳ್ಳುವ ಸ್ವಭಾವಉಳ್ಳ ಸೂರ್ಯಕಾಂತ ಚಿಲ್ಲಾಬಟ್ಟೆ ಸದಾ ಪ್ರಕಾಶಿಸುವ ಸೂರ್ಯನಂತೆ. ಬಡವ, ಬಲ್ಲಿದ, ನೊಂದವರ ಜೀವನಕ್ಕೆ ಆಶ್ರಯವಾಗಿ, ಅಂಧಕಾರದ ಬದುಕನ್ನು ನಡೆಸುತ್ತಿರುವವರ ಪಾಲಿಗೆ ಸದಾ ಬೆಳಕನ್ನು ತೋರುವ ಲವಲವಿಕೆಯಿಂದ ಹತ್ತು ಹಲವು ಅಭಿವೃದ್ಧಿಪರ ಯೋಜನೆಗಳು ಇವರ ಚಿಂತನೆಗಳಾಗಿವೆ.

ಅನ್ಯಾಯಕ್ಕೆ ಸಿಡಿದೇಳುವ, ನ್ಯಾಯಕ್ಕೆ ಮೌನ ತಾಳುವ ಸೌಮ್ಯ ವ್ಯಕ್ತಿತ್ವ ರೂಢಿಸಿಕೊಂಡಿರುವ ಕೆಚ್ಚೆದೆಯ ಧೀರನಂತೆ ಅಸಮಾನತೆ ಕಂಡು ಬಂದಲ್ಲಿ ಅದಕ್ಕೆ ಪ್ರತಿಭಟಿಸುವ ಮನೋಭಾವ. ಸಮಾನತೆಗಾಗಿ ಹೋರಾಟ ನಡೆಸುವ ಉತ್ತಮ ಸಂಘಟಕರಾಗಿಯೂ, ಬಂಡಾಯ ವ್ಯಕ್ತಿತ್ವ ಇವರಲ್ಲಿ ಕಂಡು ಬರುವ ವಿಶಿಷ್ಟ ಗುಣ ಎದ್ದು ಕಾಣುತ್ತದೆ. ಎಲ್ಲರನ್ನು ಸರಿಸಮಾನವಾಗಿ ಕಾಣಬೇಕು. ಯಾರನ್ನೂ ಮೇಲು ಕೀಳು ಭಾವನೆಯಿಂದ ಕಾಣಬಾರದು ಎಂಬ ತತ್ವ ಇವರದ್ದಾಗಿದೆ.

ಚಿಲ್ಲಾಬಟ್ಟೆಯವರ ಸಹೋದರ ಚಂದ್ರಕಾಂತ ಚಿಲ್ಲಾಬಟ್ಟೆ ಪ್ರಸ್ತುತ ಎಪಿಎಂಸಿ ಸದಸ್ಯರಾಗಿದ್ದಾರೆ. ರಾಜ್ಯ ಬಿಜೆಪಿ ಉಪಾಧ್ಯಕ್ಷರಾಗಿ ತಂದೆ ಜಗನ್ನಾಥ ಚಿಲ್ಲಾಬಟ್ಟೆ ಸೇರಿದಂತೆ ಇವರ ಕುಟುಂಬವೇ ರಾಜಕೀಯ ಹಿನ್ನೆಲೆಯಿಂದ ಬಂದಿದ್ದಾಗಿದೆ. ದಿ.ಓಂಕಾರ ಚಿಲ್ಲಾಬಟ್ಟೆಯವರ ನೆರಳಲ್ಲಿ ರಾಜಕೀಯ ಜೀವನ ಮುಂದೊರೆಸಿಕೊಂಡು ಸಾಗುತ್ತಿರುವ ಇವರು ಅಪಾರ ಜನರ ಬೆಂಬಲದೊಂದಿಗೆ ಸದಾ ಜನಮನದಲ್ಲಿ ಉಳಿಯುವಂಥ ಕಾರ್ಯಗಳನ್ನು ಮಾಡುತ್ತಲೇ ಬರುತಿದ್ದಾರೆ.

ಚಿಲ್ಲಾಬಟ್ಟೆಯವರ ಕೌಟುಂಬಿಕ ಹಿನ್ನೆಲೆಯನ್ನರಿತು ಭಾರತೀಯ ಜನತಾ ಪಕ್ಷದಿಂದೊಮ್ಮೆ ಬಸವಕಲ್ಯಾಣ ವಿಧಾನಸಭಾ ಚುನಾವಣೆ-1999ರಲ್ಲಿ ಟಿಕೇಟ್ ಸಿಕ್ಕಿದ್ದು ಮರೆಯಲಾಗದ ಸಂಗತಿ ಎನ್ನುವ ಇವರು, ರಾಜಕೀಯವೆಂದರೆ ಏಳು ಬೀಳುಗಳು ಸಹಜವಾದದ್ದು, ಗೆದ್ದಾಗ ಸಂಭ್ರಮಿಸುವುದು, ಸೋತಾಗ ಮೂಲೆಗುಂಪಾಗುವುದು ಸರಿಯಲ್ಲ. ಏನಿದ್ದರೂ ಸೋಲು-ಗೆಲುವು ಸರಿಸಮವಾಗಿ ಸ್ವೀಕರಿಸಿ ಸ್ಪರ್ಧೆಗಿಳಿದರೆ ಜಯವೆಂಬುದು ತಾನಾಗಿಯೇ ಒಲಿದು ಬರುತ್ತದೆ. ನಮ್ಮ ವಯಕ್ತಿಯ ಹಿನ್ನೆಲೆ, ಉತ್ತಮ ಜನಸಂಪರ್ಕ ಹೊಂದಿದ್ದರೆ ಯಾವುದೇ ಕ್ಷೇತ್ರದಲ್ಲಿ ಮುನ್ನುಗ್ಗಲು ಅಸಾಧ್ಯವಾದುದ್ದೇನು ಇಲ್ಲ. ಮನುಷ್ಯನಾಗಿ ಹುಟ್ಟಿದ ಮೇಲೆ ನಮಗೆ ನಮ್ಮ ಮೇಲೆ ಮೊಟ್ಟ ಮೊದಲ ಆತ್ಮ ವಿಶ್ವಾಸ ಬೆಳೆಸಿಕೊಳ್ಳಬೇಕೆಂಬ ಭರವಸೆಯ ಮಾತುಗಳನ್ನಾಡುತ್ತಾರೆ. ಇವರ ಆಸೆ, ಕನಸು, ಯೋಜನೆಗಳು ಸಾಕಾರಗೊಳ್ಳಲಿ.

ಲೇಖಕರು: ವಿ.ಎಚ್.ವೀರಣ್ಣ ಮಂಠಾಳಕರ್

ಶನಿವಾರ, ಮಾರ್ಚ್ 2, 2013

ಅಭಿವೖದ್ಧಿ ಚಿಂತನೆ ಉಳ್ಳವರಿಗೆ ಚುಮಾವಣೆಯಲ್ಲಿ ಗೆಲ್ಲಿಸಿಃ ಖೂಬಾ

ಮಾಜಿ ಶಾಸಕ, ಜೆಡಿಎಸ್ ರಾಜ್ಯ ಯುವ ಕಾಯ೯ದಶಿ೯ ಮಲ್ಲಿಕಾಜು೯ನ ಖೂಬಾ
ಬಸವಕಲ್ಯಾಣ, ಮಾ.1

ಪ್ರಸ್ತುತ ನಗರಸಭೆ ಚುನಾವಣೆಯಲ್ಲಿ ಸ್ಪಧಿ೯ಸುವ ಅಭ್ಯಥಿ೯ಗಳು ಜನಸಾಮಾನ್ಯರ ಕುಂದು ಕೊರತೆಗಳಿಗೆ ಸ್ಪಂಧಿಸುವ ಮನೋಭಾವ ಇರುವವರನ್ನು ಗೆಲ್ಲಿಸಬೇಕೆ ಹೊರತು ಸ್ವಾರ್ಥಕ್ಕಾಗಿ ರಾಜಕೀಯ ಪ್ರವೇಶಿಸುವರನ್ನು ದೂರವಿಡಬೇಕು ಎಂದು ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ಹೇಳಿದರು.

ನಗರದ ಖೂಬಾ ನಿವಾಸದಲ್ಲಿ ಶುಕ್ರವಾರ ಕರೆದಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ ಅವರು, ಸಧ್ಯದ ಚುನಾವಣೆ ಪ್ರಚಾರದ ನಿಮಿತ್ಯ ಮತದಾರರನ್ನು ಕೊಂಡುಕೊಳ್ಳುವ ಉದ್ದೇಶದಿಂದ  ಆಮೀಷಕೊಳಗಾಗಿಸುವ ಪ್ರಯತ್ನವನ್ನು ಮಾಡುತಿದ್ದಾರೆ ಎಂದು ಆರೋಪಿಸಿದರು.

ಜನರ ಭಾವನೆಗಳನ್ನು ಖರಿದಿಸುವ ನಿಟ್ಟಿನಲ್ಲಿ ರಾಜಕೀಯದಲ್ಲಿ ಹೇರಳವಾದ ದುಡ್ಡು ಖರ್ಚು ಮಾಡುವುದು ಸರಿಯಲ್ಲ. ದುಡ್ಡು ಕೊಟ್ಟವರನ್ನು ದೂರವಿರಿಸಿ ಯಾವುದೇ ಪಕ್ಷದ ಅಭ್ಯರ್ಥಿಯಾಗಿರಲಿ ಮತದಾರರು ಉತ್ತಮ ಅಭ್ಯರ್ಥಿಗಳನ್ನು ಗೆಲ್ಲಿಸಿ ತರಬೇಕು ಎಂದು ಕರೆ ನೀಡಿದರು.

ತಾಲ್ಲೂಕಿನ ಸಮೀಪದಲ್ಲೇ ಐದು ಕೆರೆಗಳಿದ್ದರೂ 22 ಕಿ.ಮೀ ಅಂತರದಲ್ಲಿನ ಕೋಂಗಳಿ ಬ್ಯಾರೇಜಿನಿಂದ ತಾಲೂಕಿಗೆ ನೀರು ತರುವ ಉದ್ದೇಶ ಹೊಂದಿದ್ದ ಮಾಜಿ ಶಾಸಕ ಬಸವರಾಜ ಪಾಟೀಲ ಅಟ್ಟೂರ್ ಅವರು ತಮ್ಮ ಸ್ವಾರ್ಥಕ್ಕಾಗಿ ಇಂತಹ ಯೋಜನೆ ಹಾಕಿ ಕೊಂಡಿರುವುದು ಸರಿಯಲ್ಲ.

ಅಟ್ಟೂರ್ ಅವಧಿಯಲ್ಲಿ ನಿರ್ಗತಿಕರಿಗಾಗಿ ಮಂಜೂರಾದ ಆಶ್ರಯ ಮನೆಗಳು ಬಡವರ ಪಾಲಾಗದೇ ಶ್ರೀಮಂತರಿಗೆ ಶ್ರೀಮಂತರ ಪಾಲಾಗಿರುವುದು ನೋಡಿದರೆ ಅವರಲ್ಲಿರುವ ಸಾಮಾಜಿಕ ಚಿಂತನೆ ಎಂತಹದ್ದೆಂಬುದು ಗೊತ್ತಾಗುತ್ತದೆ ಎಂದು ದೂರಿದರು.

ಇನ್ನೋವ೯ ಮಾಜಿ ಶಾಸಕ ಎಂ.ಜಿ.ಮೂಳೆ ಅವರ ಕೈಯಲ್ಲಿರುವ ಗಡಿಯಾರದಲ್ಲಿ ಮಾಜಿ ಸಚಿವ ಹಾಗೂ ಕೆಜೆಪಿ ಮುಖಂಡ ಗುರುಪಾದಪ್ಪ ನಾಗಮಾರಪಳ್ಳಿ ಅವರ ಭಾವಚಿತ್ರವಿದ್ದು, ಮುಳೆ ಅವರ ಕಾರಿನ ಹಿಂದೆ ಬಿಎಸ್್ಆರ್್ ಶ್ರೀರಾಮುಲು ಅವರ ಭಾವಚಿತ್ರ ಇರುವುದರಿಂದ ಇವರು ಯಾವ ಪಕ್ಷದಲ್ಲಿದ್ದಾರೆ ಎಂಬುದು ಜನರಿಗೆ ತಿಳಿಯದಾಗಿದೆ ಎಂದು ವ್ಯಂಗ್ಯವಾಡಿದರು.

ಚುನಾವಣೆಗಳು ಸಮೀಪಿಸುತಿದ್ದಂತೆ ಸ್ಪರ್ಧಿಸಲು ನಾ ಮುಂದು ತಾ ಮುಂದು ಎಂದು ಎಲ್ಲಿಂದಲೋ ಧಾವಿಸಿ ಬರುತ್ತಿರುವ ರಾಜಕೀಯ ನಾಯಕರುಗಳು ಇಲ್ಲಿನ ಸ್ಥಳೀಯ ಜನರ ಸಮ್ಸಯೆಗಳೇನು ಎಂಬುದೇ ಗೊತ್ತಿರದೇ ಸ್ಥಳೀಯವಾಗಿದ್ದವರನ್ನು ಅವಕಾಶ ವಂಚಿತರಾಗಿಸುತಿದ್ದಾರೆ. ಗೊತ್ತಿಲ್ಲದ ಓಣಿ, ಜನರ ಸಮಸ್ಯೆಗಳನ್ನು ಇವರು ಹೇಗೆ ನಿಭಾಯಿಸುತ್ತಾರೆ ಎಂದು ಪ್ರಶ್ನಿಸಿದರು.

ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಯಾವುದೇ ಪಕ್ಷದ ಅಭ್ಯರ್ಥಿಗಳಲ್ಲಿ ಅಭಿವೖದ್ಧಿ ಚಿಂತನೆಗಳಿದ್ದಲ್ಲಿ ಮಾತ್ರ ಮತದಾರರು ಗೆಲ್ಲಿಸಿ ತರಬೇಕು. ಸ್ವಾರ್ಥಕ್ಕಾಗಿ ಚುನಾವಣೆ ಸ್ಪಧಿ೯ಸುತ್ತಿರುವ  ರಾಜಕೀಯ ಪಕ್ಷದವರನ್ನು ಮತದಾರರು ತಕ್ಕ ಪಾಠ ಕಲಿಸಬೇಕು ಎಂದು ಮತಬಾಂಧವರಿಗೆ ಕರೆ ನೀಡಿದರು.

ಶುಕ್ರವಾರ, ಫೆಬ್ರವರಿ 1, 2013

ಮತದಾನದ ಹಕ್ಕು ಚಲಾಯಿಸುವವರ ಮೇಲೆ ಸದೖಢ ಸಮಾಜದ ಕನಸು ಅಡಗಿ ಕುಳಿತಿದೆ.


ಲೇಖಕರುಃ ವೀರಣ್ಣ ಮಂಠಾಳಕರ್


ಬಸವಕಲ್ಯಾಣ, ಫೆಬ್ರವರಿ-01, 2013
ಇಂದಿನ ರಾಜಕೀಯ ಇಚ್ಛಾಶಕ್ತಿಗಳಿಗೆ ದೇಶದ ಅಭಿವೖದ್ಧಿಯ ಚಿಂತನೆಗಳಿಲ್ಲ. ತಮ್ಮ ಸ್ವಾಥ೯ಕ್ಕಾಗಿ ರಾಜಕಾರಣ ಮಾಡುವ ದುರುದ್ದೇಶ, ತಮ್ಮ ಕುಟುಂಬ ಶ್ರೇಯೋಭಿವೖದ್ಧಿಗೆ ಮಾತ್ರ ಜನರ ಕಣ್ಣೀರೊರೆಸುವ ತಂತ್ರ, ಮೊಸಳೆ ಕಣ್ಣೀರಿಟ್ಟು ಪ್ರಚಾರ ಗಿಟ್ಟಿಸುವ ಕಾಯ೯ರೂಪಕ್ಕೆ ಸಿದ್ಧರಾಗುತ್ತಿರುವ ನಾಯಕರೇ ಸಮಾಜದಲ್ಲಿ ಬೆಳೆಯುತಿದ್ದಾರೆ.

ಜನಸಾಮಾನ್ಯರ ಹಬ್ಬ ಹರಿದಿನಗಳಲ್ಲಿ, ಜಾತ್ರಾ ಸಮಾರಂಭಗಳಲ್ಲಿ ಪ್ರತ್ಯಕ್ಷಗೊಳ್ಳುವ ರಾಜಕೀಯ ಮುಖಂಡರಿಗೆ ಅಲ್ಲಿನ ಜನಜೀವನದ ಬಗ್ಗೆ ನಿಗಾ ಇಡುವುದಕ್ಕಿಂತ ಹೆಚ್ಚಾಗಿ ಒಂದು ಸಮಾರಂಭಗಳಲ್ಲಿ ಭಾಗವಹಿಸಿ ಮರುದಿನದ ಪತ್ರಿಕೆಗಳಲ್ಲಿ ಕಾಣಿಸಕೊಳ್ಳುವುದೇ ಹೇಗೆಂಬುದು ಮುಖ್ಯ ಉದ್ದೇಶವಾಗಿದೆ.

ಹಲವು ಗ್ರಾಮೀಣ ಪ್ರದೇಶಗಳಲ್ಲಿ ನೀರಿಗೆ ತಾತ್ಸಾರ, ರಸ್ತೆಗಳ ದುರಸ್ಥಿ ಇಲ್ಲ. ವ್ಯವಸ್ಥಿತವಾಗಿ ಚರಂಡಿ ನೀರು ಹರಿದು ಹೋಗುವುದಿಲ್ಲ. ಮುಂತಾದ ಸಮಸ್ಯೆಗಳತ್ತ ಗಮನ ಹರಿಸದೇ ರಾಜಕೀಯ ಪ್ರಚಾರ ಸಭೆಗಳಲ್ಲಿ ತಮ್ಮ ಕಾಯ೯ ಚಟುವಟಿಕೆ ಜನಪರವಾಗಿತ್ತು ಎನ್ನುವ ಹಾಗೆ ಪ್ರತಿಬಿಂಬಸಲು ಹವಣಿಸುವವರೇ ಹೆಚ್ಚಾಗಿದ್ದಾರೆ.

ಮುಂಬರುವ ವಿಧಾನಸಭಾ ಚುನಾವಣೆಗೆ ಮುನ್ನ ಪುಕ್ಕಟೆ ಪ್ರಚಾರಕ್ಕೆ ರಾಜಕಾರಣಿಗಳು ರೂಪಿಸುತ್ತಿರುವ ಕಾಯ೯ತಂತ್ರ ಹೇಸಿಗೆಯುಂಟು ಮಾಡಿದರೆ, ಇನ್ನೂ ಕೆಲವರ ವತ೯ನೆ ಮಾಧ್ಯಮಗಳಿಗೆ ಕಂಟಕವಾಗಿ ಪರಿಣಮಿಸುವುದರಲ್ಲಿ ಅಚ್ಚರಿಯೇನಿಲ್ಲ. ಪತ್ರಕತ೯ರಿಗೆ ರಾಜಕಾರಣಿಗಳ ಕಾಟಾಚಾರ ಒಂದೆಡೆ ಸಹಿಸಲಸಾಧ್ಯ ಆಗುವುದರಲ್ಲಿ ಸಂಧೇಹವಿಲ್ಲ.

ಕಾರಣ ವಷ೯ವಿಡೀ ಪತ್ರಿಕೆಗಳಿಗೆ ಜಾಹಿರಾತು ನೀಡುತ್ತೇವೆಂಬ ಬಿಗುಮಾನ ಅವರಲ್ಲಿರುತ್ತದೆ. ಕೆಲವರು ಯಾವುದೇ ಪತ್ರಿಕೆಗಳಿಗೆ ಜಾಹಿರಾತು ಕೊಡದವರಿದ್ದರೂ ಕೂಡ ದಬ್ಬಾಳಿಕೆ ನಡೆಸುವ ಚಿಲ್ಲರೆ ರಾಜಕಾರಣಿಗಳು ಎಲ್ಲೆಡೆ ಇದ್ದಾರೆ. ನೀವು ಪತ್ರಕತ೯ರಾಗಿ ಇರುವುದ್ಯಾಕೆ,? ನಿಮಗೆ ನಾವು ಕೊಟ್ಟಿದ್ದೇ ಸುದ್ಧಿಯಲ್ಲವಾ ಎಂಬ ಉದ್ಧಟತನದ ಪ್ರಶ್ನೆ ಎದುರಿಸಬೇಕು.

ಅವರು ಕೊಟ್ಟಿದ್ದೆಲ್ಲ ಪತ್ರಿಕೆಗಳಲ್ಲಿ ಸುದ್ಧಿಯಾಗಬೇಕು ಎಂಬುದು ಅವರಲ್ಲಿರುವ ಮೊಂಡುತನ ಪ್ರದಶಿ೯ಸುತ್ತದೆ. ಯಾವುದೇ ಪಕ್ಷದ ಜನನಾಯಕರು ಸಮಾರಂಭಗಳ ವೇದಿಕೆಗಳಲ್ಲಿ ಠೀಕು ಠಾಕಾಗಿಯೇ ಬಂದು ಜನರ ಮಧ್ಯೆ ಭಾಗವಹಿಸಿರುತ್ತಾರೆ. ಅವರು ಹೇಳಿದ್ದನ್ನು ಬರೆದುಕೊಂಡು ಪ್ರಕಟಿಸುವುದೇ ಮುದ್ರಣ ಮಾಧ್ಯಮದ ಧಮ೯ವೆ ಎಂಬ ಪ್ರಶ್ನೆ ಎದುರಾಗುತ್ತದೆ.

ವೇದಿಕೆಯಲ್ಲಿ ನಾಲ್ಕಾರು ಮಾತುಗಳನ್ನುದುರಿಸಿದ್ದೇ ಮಹಾತ್ಮರ ತತ್ವಾದಶ೯ಗಳು ಪಾಲಿಸಿದಷ್ಟೇ ಹೆಮ್ಮೆ ಪಡುವವರು ಮೈಕಿನ ಮುಂದೆ ಕಿರುಚಿ ಬಂದಿರುತ್ತಾರೆ. ಅದೇ ಮಾತನ್ನು ಮಾಣಿಕ್ಯವೆಂಬಂತೆ ಮರುದಿನ ಪತ್ರಿಕೆಯಲ್ಲಿ ಪ್ರಕಟವಾಗಬೇಕು ಎಂಬ ಹಠ ಅವರಲ್ಲಿರುವುದು ಸಹಜ. ಆದರೆ ಅದನ್ನು ಯಥಾವತ್ತಾಗಿ ಪ್ರಕಟಿಸಬೇಕು ಎಂಬ ಮಾನದಂಡ ಇದೆಯೇ..?

ಪ್ರಚಾರಪ್ರಿಯತೆಯ ಹಪಾಹಪಿತನ ಬಹುತೇಕ ರಾಜಕಾರಣಿಗಳಲ್ಲಿ ಇತ್ತೀಚಿಗೆ ಮನೆ ಮಾಡಿಕೊಂಡಿರುವುದರಿಂದ ಜನರ ಸಮಸ್ಯೆಗಳು ಅವರು ಯಾವ ರೀತಿ ನಿಭಾಯಿಸುತ್ತಾರೆ ಎಂಬುದನ್ನು ಜನಸಾಮಾನ್ಯರು ಚಿಂತಿಸಬೇಕು. ಇವರಿಂದ ಸವಾ೯ಂಗೀಣ ಸಮಾಜ ಅಭಿವೖದ್ಧಿ ಹೊಂದಲು ಸಾಧ್ಯವೆ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ.

ಮಾಧ್ಯಮಗಳ ಮೂಲಕವಷ್ಟೇ ತಾವು ಉತ್ತಮರೆಂದು ಸಾಬೀತು ಪಡಿಸಲು ಮುಂದಾಗುವ ರಾಜಕಾರಣ ಹೆಚ್ಚಾಗಿದೆ. ವಾಸ್ತವಿಕ ಬದುಕಿನಲ್ಲಿ ಜನರ ಮೂಲ ಸಮಸ್ಯೆಗಳಿಗೆ ಸ್ಪಂಧಿಸುವ ನಿಟ್ಟಿನಲ್ಲಿ ಉತ್ತಮ ನಾಯಕರಾಗಬೇಕು. ಸಕಾ೯ರದ ಸೌಲಭ್ಯಗಳು ಒದಗಿಸುವುದರೊಂದಿಗೆ ಸನ್ನಡತೆಯ ಮನೋಭಾವ ಬೆಳೆಸಿಕೊಂಡಾಗ ಮಾತ್ರ ಪ್ರಗತಿ ಸಾಧ್ಯ.

ಮತಬ್ಯಾಂಕ್್ ಸ್ಥಾಪಿಸುವ ಹುನ್ನಾರದಲ್ಲಿ ಆಯಾ ಜಾತಿ ಜನಾಂಗದವರ ಹಬ್ಬ ಹರಿದಿನಗಳ ಸಡಗರದಲ್ಲಿ, ಜಾತ್ರಾ ಮಹೋತ್ಸವಗಳಲ್ಲಿ ಸಾಮಾನ್ಯ ಜನರೊಂದಿಗೆ ಬೆರೆಯುವುದು ಯಾವ ನ್ಯಾಯ. ಆಯಾ ಸಂದಭ೯ಗಳಲ್ಲಿ ಭಾರಿ ಗಾತ್ರದ ಕಟೌಟ್್ಗಳು ನೇತಾಕಿದ ಮಾತ್ರಕ್ಕೆ ಜನಗಳ ಸಂಕಟಗಳು, ನೂರಾರು ಸಮಸ್ಯೆಗಳು ಬಗೆ ಹರಿಯುವುದಿಲ್ಲ.

ಜನರ ಕಣ್ಣಿಗೆ ರಾಜಕೀಯ ನಾಯಕರ ಭಾವಚಿತ್ರಗಳು ರಾರಾಜಿಸುವ ಹಾಗೆ ಎಲ್ಲೆಡೆ ರಸ್ತೆ, ಕಟ್ಟಡಗಳ ಅಂದವನ್ನು ಕೆಡಿಸಿರುತ್ತಾರೆ. ಕಟೌಟ್್ಗಳಲ್ಲಿ ಚಂದವಾಗಿ ಕಾಣಿಸಿದರೆ ಹಸಿದವರ ಹೊಟ್ಟೆ ತುಂಬುವುದಿಲ್ಲ. ಸಿದ್ಧ ಕಟೌಟ್್ಗಳಲ್ಲಿ ಕಾಣಿಸಿಕೊಂಡ ಮಾತ್ರಕ್ಕೆ ಜನನಾಯಕರಾಗಲು ಸಾಧ್ಯವಿಲ್ಲ.

ಪ್ರಜ್ಞಾವಂತ ನಾಗರಿಕರು ರಾಜಕೀಯ ನಾಟಕೀಯಕ್ಕೆ ಮಾರಿ ಹೋಗದೇ, ಚುನಾವಣೆಗಳಲ್ಲಿ ರಾಜಕೀಯ ದಾಳಕ್ಕೆ ಸಿಲುಕಿ ಆಸೆ, ಆಮಿಷಗಳಿಗೆ ಬಲಿಯಾಗದೇ ಇರುವುದರಿಂದ ಸಾಮಾಜಿಕ ಚಿಂತನೆಯುಳ್ಳ ನಾಯಕರನ್ನು ನಾವು ಆಯ್ಕೆ ಮಾಡಿಕೊಳ್ಳಬಹುದು. ಪ್ರಚಾರದಿಂದ ಸಮಾಜದ ಅಭಿವೖದ್ಧಿಯ ಕನಸು ನನಸಾಗಿಸಲು ಸಾಧ್ಯವಿಲ್ಲ.

ಜನಸಾಮಾನ್ಯರು ಗಮನಿಸಬೇಕಾದ ಪ್ರಮುಖ ವಿಚಾರವೆಂದರೆ ಕೆಲವೇ ತಿಂಗಳಲ್ಲಿ ನಡೆಯಲಿರುವ ವಿಧಾನ ಸಭಾ ಚುನಾವಣೆಗಾಗಿ ರಾಜ್ಯ ರಾಜಕಾರಣದಲ್ಲಿ ಏನೆಲ್ಲಾ ಬದಲಾವಣೆಗಳಾಗುತ್ತಿವೆ. ರಾಷ್ಟ್ರೀಯ, ಪ್ರಾದೇಶಿಕ ಪಕ್ಷಗಳಲ್ಲಿ ಭುಗಿಲೆದ್ದಿರುವ ಗೊಂದಲಗಳಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ.

ಜನಗಳ ಅಭಿವೖದ್ಧಿಯ ಕನಸು ನನಸಾಗದೇ ಸಮಸ್ಯೆಗಳು ನಿಂತ ನೀರಾಗಿದೆ. ಗೊಂದಲದ ರಾಜಕೀಯ ವಾತಾವರಣ ನಿಮಾ೯ಣವಾಗಿದೆ. ಇದರಿಂದ ಸಮಾಜ ಕಲುಷಿತಗೊಳ್ಳುತ್ತಿದೆ. ಸಕಾ೯ರದ ಮೂಲ ಸೌಲಭ್ಯಗಳಿಂದ ವಂಚಿತರಾದ ಜನರ ತಲ್ಲಣದ ಬದುಕು ಮುಂದೆ ಸಾಗದಂತಾಗಿದೆ.

ಈ ಬಾರಿ ಮತ ಕೇಳಲು ಬಂದವರನ್ನು ಮಾತಿನ ಮಂಟಪಕ್ಕೊಯ್ಯಲು ಸನ್ನದ್ಧರಾಗಬೇಕು. ಪಕ್ಷ ಭೇದ ಮರೆತು ವ್ಯಕ್ತಿ ನಿಷ್ಠ, ಸಾಮಾಜಿಕ ಸವಾ೯ಂಗೀಣ ಅಭಿವೖದ್ಧಿಗಾಗಿ ಶ್ರಮಿಸುವ ಪಕ್ಷಗಳಿಗೆ ಬೆಂಬಲಿಸಬೇಕಾದ್ದು ಅಧ್ಯ ಕತ೯ವ್ಯವಾಗಿದೆ. ಮತದಾನದ ಹಕ್ಕು ಚಲಾಯಿಸುವವರ ಮೇಲೆ ಸದೖಢ ಸಮಾಜದ ಕನಸು ಅಡಗಿ ಕುಳಿತಿದೆ.


ಬುಧವಾರ, ಜನವರಿ 16, 2013

ಸಣ್ಣ ಕಥೆ



ತರ್ಜುಮೆ


ಒಂದು ವಾರದಿಂದ ಅವಳ ಕಣ್ತಪ್ಪಿಸಿ ಓಡಾಡುತಿದ್ದನು. ಅಕಸ್ಮಾತ್ ಅವಳನ್ನು ನೋಡಿಯೂ ನೋಡದಂತೆ ಓಡಾಡಿದರೂ ಖುದ್ದಾಗಿ ಅವಳೇ ಅವನೆದುರಿಗೆ ಬಂದು ಮಾತಾಡಿಸುವ ತವಕದಲ್ಲಿ ಇದ್ದಳು.!

ಸುಮ್ ಸುಮ್ಮನೆ ಸುಳ್ಳು ಹೇಳಿದನು. ಇದರಿಂದ ಫಜೀತಿಗೆ ಸಿಲುಕಿಕೊಂಡಂತಾಗಿತ್ತು. ಹೀಗಿದ್ದ ಅವನ ಪರಿಸ್ಥಿತಿ, ಆ ಸುಳ್ಳು ಸೃಷ್ಟಿ ತಿಳಿಗೊಳಿಸಲು ಏನಾದರೊಂದು ನೆಪ ಹೇಳಿ, ಜಾರಿಕೊಳ್ಳುವ ಸಿದ್ಧತೆ ಮಾಡಿಕೊಳ್ಳುತ್ತಲೇ ಇದ್ದ. ಆದರೆ ಎಂದಾದರೊಂದು ದಿನ ತಾನು ಹೇಳಿದ್ದನ್ನು ಮತ್ತೆ ನೆನಪು ಕೊಡುತ್ತಾಳೆ. ನನ್ನಲಿಲ್ಲದ ಆ ಪುಸ್ತಕ ತಂದು ಕೊಡುವವರೆಗೆ ಕೇಳದೆ ಇರಲಾರಳು ಎಂದು ಆತಂಕಕೊಳಗಾಗಿದ್ದನು. ಮನೆಯಿಂದ ಆಚೆ ತಿರುಗಾಡುವಾಗ ಚಕ್ಕನೆ ಎದುರಾಗುವಳು ಎಂಬ ವಿಚಾರ ಲಹರಿಯಲ್ಲಿ ತೇಲಾಡುತ್ತಾ ಗ್ರಂಥಾಲಯದ ಕಡೆ ಹೆಜ್ಜೆ ಹಾಕಿದನು.

“ಅದಕ್ಕಾಗಿ ಒಂದು ವ್ಯವಸ್ಥೆ ಮಾಡಲೇಬೇಕು. ಎಲ್ಲಿಂದಾದರೂ ಸರಿಯೇ ಆ ಪುಸ್ತಕ ಹುಡುಕಿ ತಂದು ಕೊಡಬೇಕು. ತಂದು ಕೊಟ್ಟ ಮೇಲೆ?” ಎಂಬ ಪ್ರಶ್ನೆಗೆ ಉತ್ತರ ನಿಗೂಢವೆಂಬಂತೆ ರಸ್ತೆಯುದ್ದಕ್ಕೂ ಸಾಗುವಾಗ ಚಿಂತನ ಮಂಥನ ಮಾಡಿಕೊಳ್ಳುತ್ತಲೇ ಇದ್ದನು.

ತನ್ನಲಿಲ್ಲದ ಆ ಪುಸ್ತಕ ಅವಳಿಗೆ ಕೊಡುವ ಭರವಸೆ? ಮೇಲಾಗಿ ಅವನೇ ಅರಿಯದ ಅಕ್ಷರಗಳು. ಆ ಉರ್ದು ಭಾಷೆಯ ಪುಸ್ತಕವನ್ನು ತಂದು ಕೊಡುವುದಾಗಿಯೂ, ಅದರ ತರ್ಜುಮೆ ಮಾಡಿ ಹೇಳಿ ಕೊಡ್ತಿರಾ? ಎಂದು ಕೇಳಿದನು. ಅದಕ್ಕವಳು ತಕ್ಷಣಕ್ಕೆ ಒಪ್ಪಿಕೊಂಡಿದ್ದಳು. ಆ ಕ್ಷಣದಲ್ಲಿ ಮತ್ತೊಂದು ಸಬೂಬು ಹೇಳಿ ಜಾರಿಕೊಂಡಿದನು. ಅವಳೋ....ಕುತೂಹಲ, ಕಾತರದಲ್ಲಿ ಅವನನ್ನೇ ನುಂಗಿ ಬಿಡುವಂತೆ ಆಕರ್ಷಿಸಿದಳು. ಅವಳ ದೃಷ್ಠಿಯಲ್ಲೊಮ್ಮೆ ರತಿ-ಮನ್ಮಥರ ದೃಶ್ಯ ಕಾವ್ಯ ಮಿಂಚಿ ಮರೆಯಾಗಿತ್ತು. ಆ ಪುಸ್ತಕದ ಹುಡುಕಾಟದಲ್ಲಿ ಮುಂದೆ ಮುಂದೇ ಸಾಗಿದನು.

ಅವಳೊಂದಿಗೆ ಈ ರೀತಿಯ ಸಖ್ಯ ಬೆಳೆಸಿಕೊಳ್ಳಲು ಒಂದು ಬಲವಾದ ಕಾರಣವೇ ಇತ್ತು. ಅವರಿಬ್ಬರ ಧರ್ಮ ಬೇರೆ ಬೇರೆಯಾದರೂ, ಮನಸ್ಸಿನ ಆಸೆ, ಭಾಷೆ, ಒಂದೇ ಆಗಿತ್ತು. ಎರಡು ದೇಹದಂಗಾಂಗಗಳಲ್ಲಿ ಚಲನ-ವಲನದ ರೀತಿಯೇ ಬದಲಾಗಿ ಸಂಚಲನ ಮೂಡಿಸಿತು.
ಅವನು ತನ್ನ ಒಂಟಿತನದ ಬೇಸರವನ್ನು ಕಳೆಯಲು ಅವಳನ್ನು ಆಪ್ತ ಸಂಗಾತಿಯನ್ನಾಗಿ ಮಾಡಿಕೊಳ್ಳಲೋ ಅಥವಾ ಅವಳ ಯೌವ್ವನ, ರೂಪ, ಆ ಚೆಲುವೆಯ ಮುಗ್ಧತೆಯಲ್ಲಿರುವ ರಸಿಕತನವನ್ನು ಕಂಡು, ಹೆಣ್ಣಿನಂತರಂಗದ ಸೂಕ್ಷ್ಮ ಭಾವನೆಗಳನ್ನು ಯಾವ ರೀತಿಯಲ್ಲಿ ಪಲ್ಲಟಗೊಳ್ಳುತವೆ? ಎಂಬುದನ್ನರಿಯಲೋ ಒಂದೂ ತಿಳಿಯದೆ ಗೊಂದಲದಲ್ಲಿ ಸಿಲುಕಿದನು.

ಅವಳ ದೃಷ್ಠಿಗೆ ದೃಷ್ಠಿ ಬೆರೆಸಿ ಮಾತಾಡಲು ಆಗದೇ, ಅಪರಾಧಿ ಭಾವನೆಯಲ್ಲಿ ಕೆಲವೊಮ್ಮೆ ಪಶ್ಚಾತ್ತಾಪಕ್ಕೆ ಈಡಾಗುತ್ತಿದ್ದನು.

ಅವನ ಹೆಂಡತಿ ಮನೆಯಲ್ಲಿ ಇಲ್ಲದ ಸಮಯದಲ್ಲಿ ಈ ಎಲ್ಲಾ ಘಟನೆಗಳು ನಡೆದಿದ್ದವು. ಹೆಂಡತಿಯ ನೆನಪುಗಳ ವಿರಹವನ್ನು ಮರೆಯುವದಕ್ಕೋಸ್ಕರ, ಪುಸ್ತಕದ ನೆಪದಲ್ಲಿ ಅವಳಿಗೆ ಮಾತಾಡಿಸುವ ಉತ್ಕಟ, ಆಸೆಯನ್ನು ಚಿಗುರೊಡೆದಿತ್ತು.

ಅಲ್ಲೊಂದಿಷ್ಟು ಸ್ವಾರ್ಥ ಕೂಡ ಇತ್ತು ಎಂದೆನಿಸುತ್ತದೆ. ಯಾಕೆ? ಅವನಂಥವರಿಗೆ ಈ ರೀತಿಯ ಕೀಳುಮಟ್ಟದ ವಿಚಾರಗಳು ಬರಲು ಸಾಧ್ಯವೆ?! ಹೆಣ್ಣೆಂಬ ವಿಷಯದಲ್ಲಿ ಯಾರೇ ಆಗಿರಲಿ ದುರ್ಬಲರಾಗಿ ವರ್ತಿಸುತ್ತಾರೆ ಎಂಬುದಕ್ಕೆ ಅವನೇ ತಾಜಾ ಉದಾಹರಣೆಯಾಗಿದ್ದನು.

ಅವನೇನು ಸಾಮಾನ್ಯ ವ್ಯಕ್ತಿಯಾಗಿ ಬಾಳುತಿರಲಿಲ್ಲ. ಕವಿ, ಸಾಹಿತಿ, ಚಿಂತಕನೆಂಬ ಹೆಸರಿನಲ್ಲಿ ಗುರುತಿಸಿಕೊಂಡಿದನು. ಅವನ ಹಲವಾರು ಕವಿತೆಗಳು, ಕತೆ, ಲೇಖನಗಳು ಮೆಚ್ಚಿ ನೂರಾರು ಅಭಿಮಾನಿಗಳು ಮೆಚ್ಚುಗೆಯ ಪತ್ರಗಳನ್ನು ಬರೆದಿದ್ದರು. ಆದರೆ ಯಾರನ್ನೂ ಅವನು ಅಷ್ಟಾಗಿ ತೀರಾ ಹತ್ತಿರದಿಂದ ಪರಿಚಯಿಸಿಕೊಳ್ಳುವ ಮನಸ್ಸು ಮಾಡಲಿಲ್ಲ. ಆದರೆ ಇದ್ದಕ್ಕಿದಂತೆ ಒಬ್ಬ ಚೆಲುವೆಯನ್ನು ನೋಡಿ ಆಕರ್ಷಿತನಾಗಿದ್ದು ಸೂಜಿಗದ ಸಂಗತಿ.

ಯಾರದೇ ಪ್ರೇಮ ಪತ್ರಕ್ಕೂ, ಪ್ರೀತಿ-ಪ್ರೇಮ ನಿವೇದನೆಗೆ ಕ್ಯಾರೆ ಎನ್ನದೆ ಈತ ಬುರ್ಕಾ ತೊಡುವವಳ ಆಕರ್ಷಣೆಗೆ ಒಳಗಾಗಿದ್ದು ವಿಪರ್ಯಾಸ! ಹತ್ತು ಹಲವು ಪ್ರಶ್ನೆಗಳಿಗೆ ಉತ್ತರವಾಗುಳಿಯದೇ, ಅನೇಕ ಬಾರಿ ಚಿಂತಿಸುತ್ತಿದ್ದನು. ಆವಾಗಾವಾಗ ನಡೆದ ತಪ್ಪುಗಳೆಲ್ಲ ಅವನಿಂದಲೇ ಎಂಬುದು ಒಪ್ಪಿಕೊಳ್ಳುವ ಹಾಗೆ ಅವ£ರಲಿಲ್ಲ. ಇದಕ್ಕೆಲ್ಲ ಕಾರಣ ಆತನ ಹೆಂಡತಿಯೇ ಆಗಿದ್ದಳು.

ಈಗ ಅವನ ಮನಸ್ಸೊಮ್ಮೆ ಹಗುರವಾದಂತಾಗಿತ್ತು. “ಈ ಜಗತ್ತಿನಲ್ಲಿ ಯಾರೂ ಮಾಡದ ತಪ್ಪು ನಾನೇನು ಮಾಡುತ್ತಿಲ್ಲ. ಎಲ್ಲರೂ ಬಯಸುವಂಥದ್ದೇ ನಾನು ಬಯಸಿರಬಹುದು” ಎಂದು ಬಲವಾಗಿ ನಂಬಿದನು. ಅವಳಿಗೆ ಹೇಳಿದ ಸುಳ್ಳೊಂದು £ಜ ಮಾಡಿ ತೋರಿಸುವ ಛಲ ಅವನೊಳಗಿತ್ತು. ಅವಳಿಂದ ಸಿಗುವ ಸುಖ, ನೆಮ್ಮದಿಯನ್ನು ಯಾಕೆ ಬಿಡಬೇಕು ಎಂಬ ಭಂಡ £ಲುವಿನ ದೃಢ ನಿರ್ಧಾರಕ್ಕೆ ಬಂದು ಬಿಟ್ಟನು.

ಆ ಪುಸ್ತಕದ ಹುಡುಕಾಟದಲ್ಲಿ ಒಂದು ದಿನವೇ ಕಳೆದು ಹೋಗಿತ್ತು. ಕೊನೆಗೂ ಒಂದಿನ ಗ್ರಂಥಾಲಯದಲ್ಲಿ ಅದು ಸಿಕ್ಕಿತು. ಒಂದು ವಾರದಲ್ಲಿ ಅವಳು ಹತ್ತು ಬಾರಿಯಾದರೂ ಕೇಳಿರಬೇಕು. “ಓ ಅಂಧೇರಾ ಕಿತಾಬ್ ಮಿಲಾ ಕ್ಯಾ?” ಎಂದು. ಘೋಷಾ ಪದ್ಧತಿಯ ದಿಗ್ಭಂಧನದಲ್ಲೂ ಅವಳು ಆತನೊಂದಿಗೆ ಇಟ್ಟುಕೊಂಡ ಸಲುಗೆ ಕೂಡ ಅವನ ಆಸೆಗೆ ಪ್ರೇರಣೆ ಕೊಟ್ಟಿರಬಹುದು.

ಅವನ ಮದುವೆಯಾಗಿ ನಾಲ್ಕು ವರ್ಷಗಳೇ ಕಳೆದಿದ್ದವು. ಆ ಹಿನ್ನೆಲೆಯ ಸಂದರ್ಭದಲ್ಲಿ ಗಂಡ-ಹೆಂಡತಿ ಇಬ್ಬರೂ ಅನ್ಯೂನ್ಯವಾಗಿ ಬದುಕುತ್ತ, ಅಲೆಮಾರಿ ಜೀವನ ನಡೆಸಿದ್ದರು. ಕೆಲವೆಡೆ ಹೊಟ್ಟೆ ಪಾಡಿಗಾಗಿ ಸಂಸಾರ ಹೂಡಿದರು. ಅವರ ಸುಖ ದಾಂಪತ್ಯ ಜೀವನದಲ್ಲಿ ಒಬ್ಬ ಮಗನೂ ಹುಟ್ಟಿ ಬಂದನು. ಈ ಒಂದು ಸಂತೋಷದಲ್ಲಿ ಇರುವಾಗಲೇ....ಹೆಂಡತಿ ಎನಿಸಿಕೊಂಡವಳು ಒಂದೇ ಹೇರಿಗೆಯಲ್ಲಿ ವಯಸ್ಸಾದ ಮುದಕಿಯಂತೆ ನರಳುತ್ತಾ, ಗಂಡನ ದೇಹ ಸುಖ, ಸಂಪರ್ಕದಿಂದ ದೂರವೇ ಉಳಿದು ಬಿಟ್ಟಿದ್ದಳು.

ಯೌವ್ವನದ ಸಹಜ ಆಸೆಗಳು ಚಿಗುರುವ ಹೊತ್ತಿಗೆ ಅವನನ್ನು ಹೆಂಡತಿ ತಿರಸ್ಕಾರ ಬಾವದಿಂದ ನೋಡುತ್ತಿದ್ದಳು. ವರ್ಷದಲ್ಲಿ ಹತ್ತಾರು ತಿಂಗಳುಗಳವರೆಗೆ ತವರು ಮನೆಯನ್ನೇ ನೆಚ್ಚಿಕೊಂಡು ಉಳಿದು ಬಿಡುತಿದ್ದಳು. ಕಾರಣ? ಸದಾ ಅವಳು ಒಂದಿಲ್ಲೊಂದು ಜ್ವರದಲ್ಲಿ ಬಳಲುತ್ತಿದ್ದಳು.

“ನನ್ನ ಹೆಂಡತಿ ಯಾವುದೇ ಪರಿಸ್ಥಿತಿಯಲ್ಲಿ ಇದ್ದರೂ ತಂದು ಬಿಡಿ. ಅವಳ ಯೋಗಕ್ಷೇಮ ನಾನೇ ನೋಡ್ಕೊಳ್ತಿನಿ. ಅವಳಿಲ್ಲದ ಜೀವನ ನನಗೆ ಶೂನ್ಯವಾಗಿ ಬಿಟ್ಟಿದೆ” ಎಂದೆಲ್ಲ ಒಂದಿನ ಅತ್ತೆ ಮಾವನಿಗೆ ಮೊಬೈಲ್ ಪೋನಿನಲ್ಲಿ ತೋಡಿಕೊಂಡಿದನು. ಆದರೆ ಪ್ರಯೋಜನವಾಗಲಿಲ್ಲ.

ಮಗಳು ಎಂಬ ಮಮಕಾರದಲ್ಲಿ ಅಳಿಯನಿಗೆ ಒಂದಿಷ್ಟೂ ಗೌರವವನ್ನು ಕೊಡದೇ ಅವನ ಹೆಂಡತಿಯ ತವರು ಮನೆಯವರು ಹೀನಾಯವಾಗಿ ಮಾತಾಡಿದರು. “ನಮ್ಮ ಮಗಳ ಜ್ವರ ವಾಸಿ ಆಗುವವರೆಗೆ ಕಳಿಸುವುದಿಲ್ಲ. ನಿನ್ನಲ್ಲಿ ಜೋರ್ ಇದ್ದಿದ್ರೆ ಇಲ್ಲಿಗ್ಯಾಕ್ ಕಳ್ಸಬೇಕಾಗಿತ್ತು. ಎಂದೆಲ್ಲಾ ಮಾತಾಡಿದ್ದರು. ‘ಜೋರ್’ ಎಂಬ ಪದವೊಂದೇ ಅವನ ಗಂಡಸುತನಕ್ಕೆ ಸವಾಲ್ ಹಾಕಿದಂತಾಗಿತ್ತು. ಅವರ ಮಾತುಗಳಿಂದ ಅವನ ಮನಸ್ಸಿಗೆ ನೋವುಂಟು ಮಾಡಿತ್ತಲ್ಲದೇ, ಅವನ ಶಕ್ತಿ-ಸಾಮಥ್ರ್ಯಕ್ಕೆ ಅಣಕಿಸುವಂತಿತ್ತು. ಆ ರೀತಿ ಮಾತಾಡಿದ್ದರಿಂದ ಅವನು ತೀರಾ ತಲೆ ಕೆಡಿಸಿಕೊಂಡಿದನು.

ಹೆಂಡತಿಯಿಲ್ಲದ ಸಮಯದಲ್ಲಿ ಮಾನಸಿಕವಾಗಿ ಬಳಲುತಿದ್ದನು. ಇಲ್ಲ ಸಲ್ಲದ ವಿಚಾರಗಳನ್ನೆಲ್ಲ ಮಾಡಿದನು. ಹೆಂಡತಿಯ ಸಾಮಿಪ್ಯವನ್ನು ಮರೆಯುವದಕ್ಕೋಸ್ಕರ ಆ ಪುಸ್ತಕದ ನೆಪ ಮಾಡಿಕೊಂಡು ಅವನ ಮನಸ್ಸೆಲ್ಲ ಆ ಚೆಲುವೆಯ ಜಪದಲ್ಲಿಯೇ ಬಂಧಿಯಾಗಿತ್ತು.

ಅವಳ ಮೋಹದ ಸೆಳೆತಕೊಳಗಾಗಿ ಹೆಂಡತಿಯ ಪ್ರೀತಿಗೆ ದ್ರೋಹ ಮಾಡುತ್ತಿರಬಹುದೆ? ಎಂದುಕೊಳ್ಳುತ್ತಾ ಕೆಲವೊಮ್ಮೆ ತೀರಾ ಯೋಚಿಸುತ್ತಿದ್ದನು. “ಹೆಂಡತಿಯಾದವಳು ನನ್ನ ಪ್ರೀತಿಗೆ ಧಿಕ್ಕರಿಸಿ, ಅವಳ ಮೇಲೆ ನಾನಿಟ್ಟಿರುವ ಲಕ್ಷ್ಯವನ್ನು ಅಲಕ್ಷಿಸಿ ತವರು ಮನೆಯಲ್ಲಿ ಕುಳಿತಿದ್ದಾಳಲ್ಲ. ಅದು ದ್ರೋಹ ಅಲ್ಲವಾ?” ಹೀಗೆ ಅವನೊಳಗೊಬ್ಬ ಬೆಂಬಲಿಗ ಇದ್ದಂತೆ ಅವನ ವಿಚಾರಗಳಿಗೆ ಸ್ಫೂರ್ತಿ ಕೊಡುತಿದ್ದವು. ಅದಕ್ಕಾಗಿ ತಾನು ಮಾಡುತ್ತಿರುವುದು ಯಾವುದೂ ತಪ್ಪೆನಿಸಲಿಲ್ಲ ಅವನಿಗೆ.

ಅವನು ತನ್ನ ಹೆಂಡತಿಯೆದುರಿಗೊಮ್ಮ ಆತ್ಮ ನಿವೇದನೆ ಮಾಡಿಕೊಂಡಿದನು. “ನೋಡೆ, ನಮ್ಮಲ್ಲಿ ಹಣ, ಆಸ್ತಿ, ಅಂತಸ್ತು ಇಲ್ಲದಿದ್ದರೇನು. ದುಡಿಯುವ ಛಲ ಇದೆ. ಬದುಕುವ ಆಸೆ ಇದೆ. ಈ ಸಮಾಜದಲ್ಲಿ ಒಂದು ಸ್ಥಾನಮಾನ ಎಂಬುದಿದೆ. ನನ್ನದೇ ಆದಂಥ ಕೆಲವು ಕನಸುಗಳು ನನ್ನೆದೆಯ ಬೆಚ್ಚನೆಯ ಗೂಡಿನಲ್ಲಿ ಇಟ್ಟುಕೊಂಡಿದ್ದೇನೆ. ಸೃಜನಶೀಲ ಬರವಣಿಗೆಯಲ್ಲೂ ತೊಡಗಿಸಿಕೊಂಡಿದ್ದೇನೆ. ನನ್ನಿಂದ ನೀನು ದೂರ ಉಳಿದರೆ? ನನ್ನ ಯಾವುದೇ ಸಾಧನೆಗೆ ಸ್ಫೂರ್ತಿ ಎಲ್ಲಿಂದ ಬರುತ್ತೆ. ನೀ£ಲ್ಲದ ಮೇಲೆ ನಾನಾಗಿ ಎಲ್ಲವನ್ನು ತ್ಯಜಿಸಿ, ಯಾರಿಗೂ ಸಿಗದಂತಾಗಿ ಬಿಡುತ್ತೇನೆ. ನನ್ನನ್ನು ಕಳೆದುಕೊಂಡ ಬಳಿಕ ಪರಿತಪಿಸುವುದು ಬೇಡ. ಯಾವುದಕ್ಕೂ ಸರಿಯಾಗಿ ಯೋಚಿಸು. ನಂತರ ನಾನು ಬೇಡವಾದರೆ ನಿನ್ನ ತವರು ಮನೆಗೆ ಹೋಗು” ಎಂದು ಹೆಂಡತಿಯ ಮೇಲಿನ ಪ್ರೀತಿಗಾಗಿ ಎಚ್ಚರಿಸಿದನು.

ಅವನ ಅಂತರಾತ್ಮದ ನಿವೇದನೆಗೆ ಹೆಂಡತಿಯ ಪಾಲಿಗೆ £ೀರಸವೆ£ಸಿದವು. ಅವಳೆದುರಿಗೆ ಪರಿಪರಿಯಾಗಿ ಬೇಡಿಕೊಂಡಿದ್ದರೂ ಹಠಮಾರಿ ಸ್ವಭಾವದ ಹೆಂಡತಿ “ತವರು ಮನೆಯಲ್ಲಿಯೇ ಉಳಿದು ಚಿಕಿತ್ಸೆ ಪಡೆಯುತ್ತೇನೆ. ಸಂಪೂರ್ಣ ಜ್ವರ ವಾಸಿಯಾದ್ಮೇಲೆ ಬರೋದು” ಎಂದು ಖಡಾಖಂಡಿತವಾಗಿ ನುಡಿದಿದ್ದಳು. ಗಂಡನ ಮನಸ್ಸನ್ನು ಅರ್ಥೈಸಿಕೊಳ್ಳಲಿಲ್ಲ ಎಂದುಕೊಂಡ ಅವನು. ಸಂಸಾರ ನಡೆಸಲು ತಾನು ಕೈಲಾಗದವನು ಎಂದು ತಿಳಿದು ಹೋಗಿರಬಹುದೆ? ಎನ್ನುತ್ತ, ಅವನು ಹೆಂಡತಿಯ ನೆನಪಲ್ಲೇ ಒಳಗೊಳಗೆ ಕೊರಗುತಿದ್ದನು. ಹೆಂಡತಿ ಮಾತ್ರ ತವರು ಮನೆಗೆ ಹೋಗಿಯೇ ಬಿಟ್ಟಿದ್ದಳು.

ಹೆಂಡತಿ ಹೋಗಿ ತಿಂಗಳುಗಳೇ ಕಳೆದವು. ಜ್ವರ ಇನ್ನು ವಾಸಿಯಾಗಿಲ್ಲ ಎಂಬ ಇತ್ಯಾದಿ ವರದಿಗಳು ಮೊಬೈಲ್ ಪೋನಿ£ಂದಲೇ ತಿಳಿದು ಬರುತಿತ್ತು. ಹೆಂಡತಿಯ ಮೇಲಿನ ಅಪಾರ ಪ್ರೀತಿ, ಮಗನ ರೂಪದಲ್ಲಿ ಬಂದಿರುವ ಹೊಸ ಅತಿಥಿಯ ಮೇಲಿಟ್ಟ ಅಕ್ಕರೆ, ಒಂಟಿತನದಲ್ಲಿ ಆತ ಅನುಭವಿಸುತ್ತಿದ್ದುದನ್ನು ಯಾರಲ್ಲಿಯೂ ಹೇಳಿಕೊಂಡಿರಲಿಲ್ಲ. ಹೀಗೆ ದಿನಗಳುರುಳಿದವು. ಒಂದಿನ ಕುಡಿತಕ್ಕೆ ಒಳಗಾಗಿ ಆ ಮತ್ತಿನಲ್ಲಿ ಹೆಂಡತಿಯ ತವರು ಮನೆಗೆ ಫೋನ್‍ಕಾಲ್ ಮಾಡಿದನು.

ಪೋನಿನ ಸಂಭಾಷಣೆಯಲ್ಲಿ ಮಾತಿಗೆ ಮಾತು ಬೆಳೆಯಿತು. ಅಲ್ಲೊಂದು ಚಿಕ್ಕದಾದ ಸಮರವೇ ನಡೆದು ಹೋಗಿತ್ತು. ಅತ್ತೆ ಮಾವನ ಮನೆಯವರಿಗೂ ಅವನಿಗೂ ಮನಸ್ತಾಪ ಹುಟ್ಟಿತು. ಅವನ ವಿಚಾರಗಳಿಗೂ ಅವರ ಮಾತುಗಳಿಗೂ ಹೋಲಿಕೆಯಾಗದೆ, ಸಂಬಂಧ ವಿಚ್ಛೇದನದವರೆಗೂ ಬಂದು ಮುಟ್ಟಿತು.

ಸಧ್ಯಕ್ಕೆ ಹೆಂಡತಿ ಮರಳಿ ಗಂಡನ ಮನೆಗೆ ಬರುವುದಕ್ಕೆ ನಿರಾಕರಿಸಿದಳು. ಅವನು ಕೆಲವು ದಿವಸಗಳ ಕಾಲಾವಕಾಶ ಮತ್ತೆ ಮತ್ತೆ £ೀಡಿದನು. “ಬರದಿದ್ದರೇ....ನೋಡು” ಎಂಬ ಉದ್ಗಾರದಲ್ಲಿ ಎಚ್ಚರಿಸಿದನು. ಕೋಪದಲ್ಲಿ ಪೋನ್ ಸಂಪರ್ಕ ಅವನಾಗಿಯೇ ಕಡಿದನು. ಗಂಡನ ಆಜ್ಞೆಯನ್ನು ಪಾಲಿಸದ ಹೆಂಡತಿ ಅವನು ನೀಡಿರುವ ಕಾಲಾವಕಾಶಕ್ಕೆ ಮೀರಿದಳು. ಕಾರಣ ಅವಳು ಕೂಡಾ ಅವನಷ್ಟೇ ಹಠದಿಂದ ತವರು ಮನೆಯಲ್ಲಿಯೇ ಉಳಿದಿದ್ದಳು.

ಇನ್ನೇನು....!? ಹೆಂಡತಿ ಬರುವುದೇ ಇಲ್ಲ ಎಂದು ಭಾವಿಸಿದ ಲೇಖಕ ಮಹಾಶಯ. ಒಂದು ವೇಳೆ ಬಂದರೂ ವಿಚ್ಛೇದನ ಪತ್ರಕ್ಕೆ ಸಹಿ ಹಾಕಲು ಬರಬೇಕಷ್ಟೇ ಎಂದುಕೊಂಡನು. ಹೆಂಡತಿಯ ನೆನಪುಗಳು ಮರೆಯುವದಕ್ಕೆ ಸಜ್ಜಾದನು. “ಹೇಗಾದರೂ ಮಾಡಿ ಪುಸ್ತಕದ ನೆಪದಲ್ಲಿ ಇವಳನ್ನಾದರೂ ಒಲಿಸಿಕೊಳ್ಳಬೇಕು” ಎಂಬ ಹಟ. ಅವನಲ್ಲಿ ಬೇರು ಬಿಟ್ಟಿತು. ಅದು ತರ್ಜುಮೆ ಮಾಡಿ ಕೊಡುವವಳ ಅಮತರಂಗದಲ್ಲೂ ಆಸೆ ರಹಸ್ಯವಾಗಿಯೇ ಬಚ್ಚಿಟ್ಟುಕೊಂಡಿದ್ದಳು. ಅವನ ವೇದನೆ ಏನೆಂಬುದನ್ನು ಸ್ಪಷ್ಟವಾಗಿ ಅರಿತುಕೊಂಡಿದ್ದಳು.
ಆ ಮೂರು ನಿಮಿಷ, ನೂರು ಕ್ಷಣದ ಸುಖಕ್ಕಾಗಿ ಇಬ್ಬರು ಹಾತೊರೆಯುತ್ತಿದ್ದರು. ಇದಕ್ಕಾಗಿ ಅವನು ಬಾಳ ಸಂಗಾತಿಗೆ ಬಿಟ್ಟು ಬಿಡಲು ಸಿದ್ಧನಾಗಿದ್ದ. ಅವಳು ಧರ್ಮವನ್ನು. ಅವನನ್ನು ಹತ್ತಿರದಿಂದ ಕಂಡು ಪುಳಕಿತಗೊಂಡಿದ್ದಳು. ಅವನಷ್ಟೇ ಕಾತುರ, ಕುತೂಹಲ, ಬಿಡುಗಡೆಯ ಭಾವ ಸ್ಪಂಧನಕ್ಕಾಗಿ ಎದುರು ನೋಡುತಿದ್ದಳು. ಅವಳೊಳಗಿನ ಬಯಕೆಗಳು ಬಯಲಿಗೆ ಬಾರದಿದ್ದರೂ, ಕಣ್ಣ ಭಾಷೆಯಲ್ಲಿಯೇ ಕಾಮದ ಹಸಿವು ಎದ್ದು ಕಾಣುತಿತ್ತು.

ಅಂತಹ ಒಂದು ಸಮಯ ಬಂದೇ ಬಿಟ್ಟಿತು. ಅವನ ಮನೆಯ ಹಿಂಬದಿಯ ಬಾಗಿಲಲ್ಲಿ ನಿಂತಿರುವ ಹೆಣ್ಣಿನ ಬೆತ್ತಲೆ £ಚ್ಚಳವಾದ ಆಕೃತಿಯೊಂದು ಅವನಿದ್ದ ರೂಮಿನೊಳಗೆ ಯಾವ ಹಂಗಿಲ್ಲದೆ ಪ್ರವೇಶಿಸಿತು.

ಈಗ ಅಲ್ಲಿ ನಾಲ್ಕು ಗೋಡೆ, ನಾಲ್ಕು ಕಣ್ಣುಗಳ ಮಧ್ಯೆ ಯಾವುದೇ ಪರದೆಗಳಿರಲಿಲ್ಲ. ಆ ಪುಸ್ತಕದ ನೆಪದಲ್ಲಿ ಅಡಗಿದ ಕಾವ್ಯ ಶೈಲಿಯ ಗಜಲ್‍ಗಳ ಸಾಲುಗಳು ಒಂದೊಂದಾಗಿ ಅವಳು ತನ್ನ ಅಂಗಸ್ಪರ್ಶದಿಂದ ತರ್ಜುಮೆ ಮಾಡಿಕೊಡುತ್ತಿದ್ದಳು.

ಭಾಷೆ ಬದಲಾವಣೆಯ ನೆಪದಲ್ಲಿ ಎರಡೂ ದೇಹಗಳ ಸಂಮ್ಮಿಲನ! ಸ್ವರ್ಗಕ್ಕೆ ಕಿಚ್ಚಿಟ್ಟಿತು. ಹಾವು ಏಣಿ ಆಟದಂತೆ ಅವರಿಬ್ಬರ ಮಧ್ಯೆ ಸ್ಪರ್ಧೆ! ಬಿರುಸಾಗಿಯೇ ನಡೆದಿತ್ತು. ಯಾರೋ ಬಾಗಿಲು ಬಡಿದ ಸದ್ದು!? ಅವನ ಹೆಂಡತಿಯ ಧ್ವನಿ ಹೊರಗಿ£ಂದ ಅಸ್ಪಷ್ಟವಾಗಿ ಕೇಳಿಸಿತು. ಒಳಗೆ ಎರಡೂ ದೇಹಗಳ ಸ್ಪರ್ಶದಿಂದ ಭಾಷೆಗಳ ತರ್ಜುಮೆ ನಡೆದಿತ್ತು. ಹೊರಗೆ ಕೂಗು, ಕಿರುಚಾಟ ಪ್ರತಿಭಟನೆಯ ರೂಪ ತಾಳಿತು.

                ***

ಶುಕ್ರವಾರ, ಜನವರಿ 4, 2013

ನೈತಿಕತೆ ಇಲ್ಲದ ರಾಜಕಾರಣಃ ಖೂಬಾ ಆರೋಪ

ಮಾಜಿ ಶಾಸಕ ಹಾಗೂ ಜೆಡಿಎಸ್ ರಾಜ್ಯ ಯುವ ಕಾಯಾ೯ಧ್ಯಕ್ಷ ಮಲ್ಲಿಕಾಜು೯ನ ಖೂಬಾ
ನೈತಿಕತೆ ಇಲ್ಲದ ರಾಜಕಾರಣಃ ಜ. 17ರಿಂದ ಜೆಡಿಎಸ್್ ಪಕ್ಷದಲ್ಲಿ ಸೇಪ೯ಡೆಃ ಪದಾಧಿಕಾರಿಗಳ ನೇಮಕಃ ಖೂಬಾ ಸ್ಪಷ್ಟನೆ
------------------------------------------
ಬಸವಕಲ್ಯಾಣ, ಜ.3,2013

ತಾಲೂಕಿನ ಸಾವಿರಾರು ಮತದಾರರ ಅಭಿಪ್ರಾಯವಾಗಲಿ, ಪ್ರಾಮಾಣಿಕ ಬಿಜೆಪಿ ಕಾಯ೯ಕತ೯ರ ವಿರುದ್ಧ ರಾಜಿನಾಮೆ ನೀಡಿ ಕೆ
ಜೆಪಿ ಸೇಪ೯ಡೆಗೂಂಡಿರುವ ಶಾಸಕ ಬಸವರಾಜ ಪಾಟೀಲ ಅಟ್ಟೂರ್್ ಅವರು ನೈತಿಕತೆ ಇಲ್ಲದ ರಾಜಕಾರಣ ಮಾಡುತಿದ್ದಾರೆ ಎಂದು ಮಾಜಿ ಶಾಸಕ ಹಾಗೂ ಜೆಡಿಎಸ್್ ರಾಜ್ಯ ಯುವ ಕಾಯಾ೯ಧ್ಯಕ್ಷ ಮಲ್ಲಿಕಾಜು೯ನ ಖೂಬಾ ಆರೋಪಿಸಿದ್ದಾರೆ.

ಈ ಕುರಿತು ಪ್ರಕಟಣೆ ಹೊರಡಿಸಿರುವ ಅವರು, ಕಳೆದ 2008ರಲ್ಲಿನ ವಿಧಾನಸಭಾ ಚುನಾವಣೆಯಲ್ಲಿ ಸಾವಿರಾರು ಮತಗಳ ಅಂತರದಲ್ಲಿ ಬಿಜೆಪಿಯಿಂದ ಗೆಲುವು ಸಾಧಿಸಿ, ಇನ್ನೂ ಸೇವಾವಧಿ ಇರುವ ಮುನ್ನವೇ ದುಡ್ಡಿನಾಸೆ ಮತ್ತು ಅಧಿಕಾರಕ್ಕಾಗಿ ಮತದಾರರ ಭಾವನೆಗಳಿಗೆ ಕೆಣಕಿದ್ದಾರೆ ಎಂದು ಖೂಬಾ ಟೀಕಿಸಿದ್ದಾರೆ.

ಮತದಾರರು ಅವರ ಮೇಲಿಟ್ಟಿರುವ ವಿಶ್ವಾಸಕ್ಕೆ ದ್ರೋಹ ಬಗೆದು, ಅಟ್ಟೂರ್್ ಅವರು ಇತ್ತೀಚಿಗೆ ಬಂಗ್ಲಾದ ಮಹಾದ್ವಾರದಲ್ಲಿನ ವಿಶ್ವಗುರು ಬಸವಣ್ಣನವರ ಮೂತಿ೯ ಅನಾವರಣ ಯಾರಿಗೂ ಗೊತ್ತಿಲ್ಲದಂತೆ, ಆಹ್ವಾನ ಪತ್ರಿಕೆಯೂ ಕಳುಹಿಸದೇ, ಕ್ಷೇತ್ರದ ಪ್ರತಿನಿಧಿಗಳಿಗೂ ಜಿಲ್ಲಾ ಸಂಸದ ಹಾಗೂ ಎಲ್ಲಾ ಶರಣರ ಭಕ್ತರಿಗೆ ಮಾಹಿತಿಯಿಲ್ಲದೇ ಉದ್ಘಾಟಿಸಿರುವುದಕ್ಕೆ ಬೇಸರಿಸಿದ್ದಾರೆ.

ಶಾಸಕ ಸ್ಥಾನಕ್ಕೆ ಅಟ್ಟೂರ್್ ರಾಜಿನಾಮೆ ನೀಡಿದ್ದಕ್ಕೆ ಸ್ವಾಗತಿಸಿದ ಖೂಬಾರವರು, ಬಿಜೆಪಿ ಸಕಾ೯ರದಲ್ಲಿದ್ದಾಗ ಬಸವಕಲ್ಯಾಣ ಅಭಿವೖದ್ಧಿಗೆ ಬಿ.ಎಸ್್.ಯಡಿಯೂರಪ್ಪನವರು ನೀಡಿದ 100 ಕೋಟಿ ರುಪಾಯಿ ಭರವಸೆ ಎಲ್ಲಿ ಹೋಯಿತು. ಮಾತಿನಂತೆ ನಡೆದುಕೊಳ್ಳದೇ ಕೇವಲ 16 ಕೋಟಿ ನೀಡಿದ್ದು ಸರಿಯೇ ಎಂದು ಪ್ರಶ್ನಿಸಿದ್ದಾರೆ.

ಅಧಿಕಾರದಲ್ಲಿದ್ದಾಗ ಬಸವಣ್ಣನವರು ನೆನಪಾಗುವುದಿಲ್ಲ. ಅಧಿಕಾರ ಕಳಚಿಕೊಂಡಾದ ಮೇಲೆ ವಿಶ್ವಗುರು ಬಸವಣ್ಣನವರು ನೆನಪಾಗುವುದಲ್ಲದೇ, ಇಲ್ಲಿಂದಲೇ ಪಾದಯಾತ್ರೆ, ಪ್ರಚಾರ ಸಭೆ ಹಮ್ಮಿಕೊಳ್ಳುವುದು ಬಿಎಸ್್ಆರ್್, ಕೆಜೆಪಿ ಸೇರಿದಂತೆ ಕಾಂಗ್ರೇಸ್್ನವರು ಕೂಡ ಇಲ್ಲಿಂದಲೇ ಪ್ರಚಾರ ಕೈಗೊಳ್ಳಲು ನಿಧ೯ರಿಸಿರುವುದು ಹಾಸ್ಯಾಸ್ಪದವಾಗಿದೆ ಎಂದು ತಿಳಿಸಿದ್ದಾರೆ.

ಕ್ಷೇತ್ರದ 41 ಹಳ್ಳಿಗಳಿಗೆ ಭೇಟಿ ನೀಡದೇ ಜನರ ಸಮಸ್ಯೆಗಳಿಗೆ ಸ್ಪಂಧಿಸದೇ ಕಾಲಹರಣದ ರಾಜಕಾರಣ ಮಾಡುತಿದ್ದಾರೆ. ಅಪೂಣ೯ವಾಗುಳಿದ ತಾಲೂಕಿನ ಅಭಿವೖದ್ಧಿಯ ಹಲವು ಕಾಮಗಾರಿಗಳ ಕಡೆ ಗಮನ ಹರಿಸದೇ ಚುನಾವಣೆಯ ಕನಸು ಕಾಣುತ್ತಿರುವವರಿಗೆ ಜನರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಸಿದ್ದಾರೆ.

ಬಿಜೆಪಿ ಸಕಾ೯ರವಿದ್ದಾಗ ಮಾಜಿ ಶಾಸಕ ಎಂ.ಜಿ.ಮುಳೆ ಅದೇ ಪಕ್ಷದಲ್ಲಿದ್ದಾಗ ಮುಸ್ಲಿಂರ ಬಗ್ಗೆ ಕಿಂಚಿತ್ತೂ ಕಾಳಜಿ ಹೊಂದಿರಲಿಲ್ಲ. ಬಿಎಸ್್ಆರ್್ ಸೇರಿದ ಕೂಡಲೇ ಮುಸ್ಲಿಂರ ಬಗ್ಗೆ ತೋರುತ್ತಿರುವ ಆಸಕ್ತಿ ಮತ್ತು ಆಟೋ ನಗರದಲ್ಲಿ ಶ್ರೀರಾಮುಲು ಕೊಟ್ಟಿರುವ ಹಣದಲ್ಲಿ ರಸ್ತೆ ನಿಮಾ೯ಣ ಕೈಗೊಂಡಿರುವುದು ಜನರ ಕಣ್ಣೀರೊರೆಸುವ ತಂತ್ರವಾಗಿದೆ ಎಂದು ದೂರಿದ್ದಾರೆ.

ತಾಲೂಕಿನ ಮುಂತಾದ ಹಳ್ಳಿಗಳಲ್ಲಿನ ರಸ್ತೆ, ಚಂರಂಡಿಗಳ ದುರಸ್ಥಿ ಮಾಡಿಕೊಳ್ಳಲಿಚ್ಛಿಸುವರು ಮುಳೆಯವರ ಬಳಿ ಹೋಗಲಿ, ಆಗ ಸಕಾ೯ರದಿಂದ ಹಣ ತಂದು ಕೆಲಸ ಮಾಡಲು ಸಮಯ ಇರಲಿಲ್ಲ. ಇದೀಗ ಚುನಾವಣೆ ಹತ್ತಿರವಾಗುತಿದ್ದಂತೆ ಬಿಎಸ್್ಆರ್್ ಹಣದಲ್ಲಿ ಕಾಮಗಾರಿ ನಡೆಸುತ್ತಿದ್ದಾರೆ. ಗ್ರಾಮಸ್ಥರು ಇದರ ಸದುಪಯೋಗ ಮಾಡಿಕೊಳ್ಳಲಿ ಎಂದು ಸೂಚಿಸಿದ್ದಾರೆ.

ತಾಲೂಕಾ ಮತದಾರರು ಅಭಿವೖದ್ಧಿ ಚಿಂತನೆಯುಳ್ಳ ಜನನಾಯಕರ ಹುಡುಕಾಟದಲ್ಲಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಸೂಕ್ತ ಅಭ್ಯಥಿ೯ಯನ್ನೇ ಆಯ್ಕೆ ಮಾಡಲಿದ್ದು, ಅದರ ಬಗ್ಗೆ ಮಾಜಿಗಳು ತಲೆ ಕೆಡಿಸಿಕೊಳ್ಳಬೇಕಿಲ್ಲ. 7 ತಿಂಗಳಿನಿಂದ ಮಾತ್ರ ಬಸವಕಲ್ಯಾಣ ಕ್ಷೇತ್ರ ಇದೆ ಎಂಬುದನ್ನು ಕಾಂಗ್ರೆಸ್್, ಕೆಜೆಪಿ, ಬಿಎಸ್್ಆರ್್ನವರಿಗೆ ಅರಿವಾಗುತ್ತಿದೆಯೆ ಎಂದು ವ್ಯಂಗ್ಯವಾಡಿದ್ದಾರೆ.

ಜೆಡಿಎಸ್್ ಪಕ್ಷದಿಂದ ತಾಲೂಕಿನಲ್ಲಿ ಈಗಾಗಲೇ 28 ಸಾವಿರ ಸದಸ್ಯತ್ವ ಮಾಡಿದ್ದೇವೆ. ಇದೇ ಜ.17ರಿಂದ ಜೆಡಿಎಸ್್ ಪಕ್ಷಕ್ಕೆ ಸೇಪ೯ಡೆ ಕಾಯ೯ಕ್ರಮ ಮತ್ತು ಪದಾಧಿಕಾರಿಗಳ ನೇಮಕ ನಡೆಸಲಾಗುತ್ತಿದೆ. ಜೆಡಿಎಸ್್, ಬಿಎಸ್್ಆರ್್, ಕೆಜೆಪಿ ಪ್ರಾದೇಶಿಕ ಪಕ್ಷವಾದರೂ ನಾವು ಈಗಾಗಲೇ 4 ಬಾರಿ ಚುನಾವಣೆ ಎದುರಿಸಿದ್ದೇವೆ ಎಂದು ತಿಳಿಸಿದ ಅವರು, ನಮ್ಮ ಸತ್ವ ಪರೀಕ್ಷೆ ಕಾಲ ಮುಗಿದಿದೆ. ಮತದಾರರು ನೀಡುವ ನಿಣ೯ಯದಂತೆ ಚುನಾವಣೆಯೆಂಬ ಸತ್ವ ಪರೀಕ್ಷೆಯಲ್ಲಿ ಉಳಿದ ಪ್ರಾದೇಶಿಕ ಪಕ್ಷದವರು ಗೆದ್ದು ಬರಲಿ ನೋಡೋಣ ಎಂದು ಸವಾಲೆಸೆದಿದ್ದಾರೆ.

ಸೋಮವಾರ, ಡಿಸೆಂಬರ್ 31, 2012

ವಿಧಾನಸಭಾ ಚುನಾವಣೆ ನಿಮಿತ್ಯ ರಾಜಕೀಯ ಮುಖಂಡರುಗಳ ಕಸರತ್ತುಃ ಪ್ರಾದೇಶಿಕ ಪಕ್ಷ ಕೆಜೆಪಿಯ ವಚ೯ಸ್ಸು-ರಾಜಕೀಯ ಲೆಕ್ಕಾಚಾರ ಸಿಗದೇ ಗೆಲ್ಲುವರ್ಯಾರು...?

ಕಾಂಗ್ರೆಸ್ ಯುವ ಮುಖಂಡ ಆನಂದ ದೇವಪ್ಪ

 ವೀರಣ್ಣ ಮಂಠಾಳಕರ್

--------------------

ಬಸವಕಲ್ಯಾಣ, ಡಿ.31, 2012

ಶಾಸಕರುಗಳ ರಾಜಿನಾಮೆ ಪವ೯ ರಾಜ್ಯದೆಲ್ಲೆಡೆ ಶುರುವಾಗುತ್ತಿದ್ದಂತೆ ಪ್ರತಿಸ್ಪಧಿಗಳು ಹುಟ್ಟಿಕೊಳ್ಳುತ್ತಿರುವುದರ ಜೊತೆಗೆ ವಿವಿಧ ಪಕ್ಷಗಳ ಮುಖಂಡರು ಕೆಜೆಪಿಯತ್ತ ಒಲವು ತೋರಿಸುತ್ತಿರಲು ಮಾಜಿ ಸಿಎಂ ಬಿಎಸ್್ವೈ ಅವರು ಹುಟ್ಟು ಹಾಕಿರುವ ಪ್ರಾದೇಶಿಕ ಪಕ್ಷ ಕೆಜೆಪಿಯತ್ತ ಜನ ಮುಖ ಮಾಡುವಂತಾಗಿದೆ.

ರಾಜ್ಯದ ಪ್ರಬಲ ರಾಜಕೀಯ ಧುರೀಣರು ಕೆಜೆಪಿಗೆ ಸಾಥ್್ ನೀಡುತ್ತಿವುದರಿಂದ ಬಿಎಸ್್ವೈ ಅವರೇ ಹುಟ್ಟು ಹಾಕಿದ್ದ ಬಿಜೆಪಿ ನಿನಾ೯ಮಕ್ಕೆ ಸಜ್ಜಾಗಿದ್ದಾರೆ. ಕಾಂಗ್ರೆಸ್್ಗೆ ನೇರ ಪೈಪೋಟಿಯಿಂದ ಜನಸ್ನೇಹಿ ಯಾತ್ರೆಯ ಮೂಲಕ ಯಡಿಯೂರಪ್ಪನವರ ಗುಡುಗು ರಾಜ್ಯದ ಪ್ರತಿ ಜೆಲ್ಲೆಗಳ ಪ್ರತಿಪಕ್ಷದ ನಾಯಕರುಗಳಿಗೆ ಇದರಿಂದ ಬಿಸಿ ತಟ್ಟಿದಂತೆ ರಾಜಕೀಯದಲ್ಲಿ ಹೊಸ ಪಲ್ಲಟ ಆರಂಭವಾಗಲಿದೆ.

ಅಭಿವೖದ್ಧಿ ಮಂತ್ರವನ್ನೇ ಊದುವ ರಾಜಕೀಯ ನಾಯಕರು ಒಂದೆಡೆ ಇದ್ದರೆ ಅಭಿವೖದ್ಧಿಯ ಕನಸಿನೊಂದಿಗೆ ಮುಂಬರುವ ವಿಧಾನಸಭಾ ಚುನಾವಣಾ ಅಖಾಡಕ್ಕಿಳಿಯಲು ಯುವ ಪಡೆ ಸೇರಿದಂತೆ ರಾಜಕೀಯ ಮುತ್ಸದ್ದಿಗಳ ನಡುವೆ ನೇರ ಪೈಪೋಟಿ, ಪ್ರತಿಸ್ಪಧೆ೯ ಏಪ೯ಟ್ಟಿದೆ. ಬಿಕ್ಕಟ್ಟಿನ ಚುನಾವಣೆ ಎದುರಿಸುವಂಥ ಪರಿಸ್ಥಿತಿ ನಿಮಾ೯ಣಗೊಂಡಿದೆ.

ಬರುವ ವಿಧಾನಸಭಾ ಚುನಾವಣೆ ಪ್ರಚಾರಕ್ಕಾಗಿ ಹಲವು ಪಕ್ಷದ ರಾಜಕೀಯ ಧುರೀಣರು ಕನಾ೯ಟಕದಲ್ಲೆಡೆ ಪ್ರವಾಸ ಕೈಗೊಂಡಿದ್ದಾರೆ. ಕೆಜೆಪಿಯ ಜನಸ್ನೇಹಿ ಕಾಯ೯ಕ್ರಗಳಂಥ ಸಮಾರಂಭಗಳು ಏಪ೯ಡಿಸುವ ಮೂಲಕ ಜನರ ಬಳಿ ಮಾಜಿ, ಹಾಜಿಗಳ ಪೈಪೋಟಿಯ ರಣರಂಗದ ವೇದಿಕೆ ಸಿದ್ಧವಾಗುತ್ತಿದೆ.

30 ವಷ೯ಗಳ ರಾಜಕೀಯ ಅನುಭವ ಹೊಂದಿರುವ ಬಸವಕಲ್ಯಾಣ ಶಾಸಕ ಬಸವರಾಜ ಪಾಟೀಲ ಅಟ್ಟೂರ್್ ಅವರು, ಶಿಕ್ಷಣ ಇಲಾಖೆಯ ಮಂತ್ರಿಗಳಾಗಿ ಪ್ರಭಾವಿ ರಾಜಕಾರಣಿಯೂ ಆಗಿದ್ದಾರೆ. ಇತ್ತೀಚಿಗಷ್ಟೇ ಅಟ್ಟೂರ್್ ಅವರು ಬಿಎಸ್್ವೈ ಸಮ್ಮುಖದಲ್ಲೇ ಬಿಜೆಪಿಗೆ ರಾಜಿನಾಮೆ ಸಲ್ಲಿಸಿ, ಕೆಜೆಪಿ ಸೇರಿರುವುದನ್ನು ಬಹಿರಂಗ ಸಮಾವೇಶದಲ್ಲಿ ಸ್ಪಷ್ಟಪಡಿಸಿದ್ದಾರೆ.

ಬಸವರಾಜ ಪಾಟೀಲ ಅಟ್ಟೂರ್್ ಅವರು, ಮಾಜಿ ಮುಖ್ಯಮಂತ್ರಿ ಕೆಜೆಪಿ ರಾಜ್ಯಾಧ್ಯಕ್ಷ ಬಿ.ಎಸ್್.ಯಡಿಯೂರಪ್ಪನವರ ಬೆಂಬಲಕ್ಕೆ ಕಟಿಬದ್ಧರಾಗಿ ನಿಂತಿದ್ದು, ಬಿಜೆಪಿ ಬೆಂಬಲಿಗರಿಗೆ ಜಿಲ್ಲೆಯಲ್ಲಿ ಬಿಸಿತಟ್ಟಿಸಿದ್ದಾರೆ. ಬೀದರ ಜಿಲ್ಲೆಯಲ್ಲಿ ಬಿಎಸ್್ವೈ  5 ಕೆಜೆಪಿ ಅಭ್ಯಥಿ೯ಗಳ ಘೋಷಣೆ ಮಾಡಿ ಔರಾದ ಕ್ಷೇತ್ರವೊಂದು ಬಾಕಿ ಉಳಿಸಿದ್ದಾರೆ.

ಅಟ್ಟೂರ್್ ಅವರು ರಾಜಕೀಯ ಅನುಭವಸ್ಥರಾಗಿ, 5 ಸಲ ಶಾಸಕರಾಗಿ, ಶಿಕ್ಷಣ ಮಂತ್ರಿಯಾಗಿ ಸೇವೆ ಸಲ್ಲಿಸಿದ ಜನಪ್ರಿಯ ನಾಯಕರೆಂದು ಗುರುತಿಸಿಕೊಂಡವರಾಗಿದ್ದಾರೆ. ಇತ್ತೀಚಿಗೆ ಅವರ ವಚ೯ಸ್ಸು ಕಡಿಮೆಯಾಗಿದೆ ಎಂಬ ಚಚೆ೯ ಕೇಳಿ ಬರುವಂತಾದರೂ ಅದನ್ನೆಲ್ಲಾ ಎದುರಿಸಲು ಸಿದ್ಧರಾಗಿ ಅನಾರೋಗ್ಯದಿಂದ ಚೇತರಿಸಿಕೊಂಡು ಜನರ ಬಳಿ ಹೋಗಿ ಅಭಿವೖದ್ಧಿಯ ಚಿಂತನೆ ಮೂಡಿಸಲಿದ್ದಾರೆ.

ಬಿಎಸ್್ಆರ್್ ಕಾಂಗ್ರೆಸ್್ ಪಕ್ಷದಿಂದ ಸ್ಪಧಿ೯ಸುವ ಎಂ.ಜಿ.ಮುಳೆ ದುಬ೯ಲವೆಂದು ಭಾವಿಸದೇ ಪ್ರಬಲ ಶಕ್ತಿ, ಜನ ಬೆಂಬಲ ಪಡೆಯುವ ಅಸಾಮಾನ್ಯ ನಾಯಕರಾಗಿ ಮತದಾರರನ್ನು ತನ್ನತ್ತ ಸೆಳೆದುಕೊಳ್ಳುವಲ್ಲಿ ಸಫಲರಾಗುವ ಎಲ್ಲಾ ಲಕ್ಷಣಗಳು ಮುಳೆ ಅವರಲ್ಲಿ ಕಂಡು ಬರುತ್ತವೆ ಎಂಬ  ಮಾತುಗಳು ಕೇಳಿ ಬರುತ್ತಿವೆ.

ಮಾಜಿ ಶಾಸಕರಾಗಿದ್ದ ಹಿರಿಯ ರಾಜಕೀಯ ಧುರೀಣ ಎಂ.ಜಿ.ಮೂಳೆ ಮೊಟ್ಟ ಮೊದಲು ಜೆಡಿಎಸ್್ ಪಕ್ಷದಿಂದ ವಿಧಾನಸಭೆಗೆ ಆಯ್ಕೆಯಾಗಿದ್ದರು. ನಂತರದ ದಿನಗಳಲ್ಲಿ ಸೇಪ೯ಡೆಗೊಂಡಿದ್ದು ಕಾಂಗ್ರೆಸ್್ ಪಕ್ಷಕ್ಕೆ, ಹಲವು ಬಾರಿ ಸೋಲನನುಭವಿಸಿ ರಾಜಕೀಯ ಬಲ್ಲವರಾಗಿದ್ದಾರೆ.

ಹಿರಿಯ ರಾಜಕಾರಣಿ ಗುರುಪಾದಪ್ಪ ನಾಗಮಾರಪಳ್ಳಿ ಅವರೊಂದಿಗೆ ಬಿಜೆಪಿಗೆ ಸೇಪ೯ಡೆಯಾಗಿದ್ದ ಮುಳೆ ಅವರು ಬಿಜೆಪಿ ಪಕ್ಷಕ್ಕೆ ರಾಜಿನಾಮೆ ನೀಡಿ, ನಾಗಮಾರಪಳ್ಳಿ ಅವರಿಂದಲೂ ಮುಳೆ ಬೇಪ೯ಟ್ಟಿದ್ದಾರೆ. ನಾಗಮಾರಪಳ್ಳಿ ಅವರು ಬೀದರ ಕ್ಷೇತ್ರದಿಂದ ಕೆಜೆಪಿ ಅಭ್ಯಥಿ೯ಯಾಗಿ ಚುನಾವಣಾ ಅಖಾಡಕ್ಕಿಳಿಯುತ್ತಿರುವುದು ಪ್ರಕಟವಾಗಿದೆ.

ಬಿಎಸ್್ವೈ ಅವರ ಕಟ್ಟಾ ಬೆಂಬಲಿಗರಾಗಿ ಅವರ ಜೊತೆಯಾಗಿಯೇ ಇದ್ದು, ಪ್ರಾಮಾಣಿಕ ಕಾಯ೯ಕತ೯ನೆಂಬ ಹೆಸರಿಗೆ ಸುಭಾಷ ಕಲ್ಲೂರ್್ ಅವರು ಕೆಜೆಪಿ ಪಕ್ಷದ ಗೆಲುವಿಗಾಗಿ ಜಿಲ್ಲೆಯಲ್ಲೆಡೆ ಶಕ್ತಿ ಪ್ರದಶ೯ನ ಮಾಡಲಿದ್ದಾರೆ. ಪ್ರಾಮಾಣಿಕ ಸೇವೆಯಿಂದ ಕಲ್ಲೂರ್್ ಅವರಿಗೆ ಮಹತ್ವದ ಸ್ಥಾನ ಸಿಗುವ ಸಂಭವ ಭರವಸೆಯೂ ಕೂಡ ವ್ಯಕ್ತವಾಗಿದೆ.

ಬಸವಕಲ್ಯಾಣ ಕ್ಷೇತ್ರ ಪ್ರಮುಖರಾದ ಬಾಬು ಹೊನ್ನಾನಾಯಕ ಸಹ ಜೆಡಿಎಸ್್ ತೊರೆದು ಬಿಎಸ್್ಆರ್್ ಕಾಂಗ್ರೆಸ್್ಗೆ ಹೋಗಿದ್ದಾರೆ. ಸ್ವಾಭಿಮಾನಿ ಶ್ರೀರಾಮುಲು ಪಕ್ಷ ಬಿಎಸ್್ಆರ್್ ಕಾಂಗ್ರೆಸ್್ಗೆ ಸೇರಿರುವ ಇವರು ಯಾವ ಸ್ಥಾನ ಪಡೆಯಲಿದ್ದಾರೆಂಬುದು ಕಾದು ನೋಡಬೇಕಷ್ಟೇ. ಇಲ್ಲಿಂದಲೇ ಚುನಾವಣಾ ತಯ್ಯಾರಿ ನಡೆಸುತ್ತಿರುವುದು ಕೇಳಿ ಬರುತ್ತಿದೆ.

ಪ್ರಥಮ ಬಾರಿಗೆ ಚುನಾವಣಾ ಅಖಾಡಕ್ಕಿಳಿದು ತಂದೆಯ ರಾಜಕೀಯ ಬಳುವಳಿ ಪಡೆದ ಬಸವಕಲ್ಯಾಣ ಕ್ಷೇತ್ರದ ಅತಿ ಕಿರಿಯ ಶಾಸಕನೆಂಬ ಖ್ಯಾತಿಗೆ ಒಳಗಾದ ದಿ.ಸಿದ್ರಾಮಪ್ಪ ಖೂಬಾ ಅವರ ಮಗ ಮಲ್ಲಿಕಾಜು೯ನ ಖೂಬಾ ಅವರು ಜನಬೆಂಬಲ, ಆಶಿವಾ೯ದದಿಂದ ಮೂರು ವಷ೯ಗಳ ಕಾಲ ಅಧಿಕಾರ ನಡೆಸಿದ್ದರು.

ಎರಡನೇ ಸಲದ ವಿಧಾನಸಭಾ ಚುನಾವಣೆಯಲ್ಲಿ ಸೋಲನನುಭವಿಸಿದ್ದ ಖೂಬಾರನ್ನು ಮತದಾರರೇ ಸೋಲಿಸಿದ್ದರು ಎಂಬ ಮಾತು ಅವರಿಂದಲೇ ಕೇಳಿ ಬರುತ್ತದೆ. ಅಧಿಕಾರವಧಿಯಲ್ಲಿ ಮಾಡಿದ ತಪ್ಪು ಮೆಲುಕು ಹಾಕಿ, ಮುಂದೆ ಹಾಗಾಗದಂತೆ ಎಚ್ಚರ ವಹಿಸಿ ಅಭಿವೖದ್ಧಿಯ ಕನಸು ಕಂಡಿದ್ದೇನೆ ಎಂಬುದು ಅವರ ಆಪ್ತ ವಲಯಗಳಿಂದ ಕೇಳಿ ಬರುವ ಮಾತಾಗಿದೆ.

ಸೋಲಿನಿಂದಾಗಿ ಇದೀಗ ಸಾಕಷ್ಟು ತಪ್ಪುಗಳನ್ನು ತಿದ್ದಿಕೊಂಡಿದ್ದೇನೆ ಎನ್ನುವ ಖೂಬಾ ಅವರು, ಮುಂದಿನ ದಿನಗಳಲ್ಲಿ ಶಾಸಕರ ಭವಿಷ್ಯ ಜನರೇ ನಿಣ೯ಯಿಸಲಿದ್ದಾರೆ. ರಾಜಕೀಯವೆಂದರೆ ಗೊತ್ತಿಲ್ಲದ ನನಗೆ ಸೋಲಿನಿಂದ ರಾಜಕೀಯ ಕಲಿತಂತಾಗಿದೆ. ಆದ್ದರಿಂದ ಮುಂದಿನ ವಿಧಾನ ಸಭಾ ಚುನಾವಣೆಗೆ ಖೂಬಾ ಸಹ ಸ್ಪಧಿ೯ಸುತ್ತಿರುವುದು ಖಚಿತ ಎಂಬುದು ಅಪ್ತರಿಂದ ಕೇಳಿ ಬುರುತ್ತಿದೆ.

ಬಿಜೆಪಿ ಮತ್ತು ಕೆಜೆಪಿಗೆ ಸೋಲಿಸುವ ಛಲ ನೇರ ಕಾಂಗ್ರೆಸ್್ಗೆ ಪೈಪೋಟಿಯಾಗಿ ಚುನಾವಣಾ ಅಖಾಡಕ್ಕಿಳಿಯುತ್ತಿರುವ ಮಲ್ಲಿಕಾಜು೯ನ ಖೂಬಾ ಅವರು, ಬಿಎಸ್್ಆರ್್ ನಿಂದ ಯಾವುದೇ ಹಾನಿಯಿಲ್ಲವೆಂಬ ಮನೋಭಾವ ಹೊಂದಿದಂತಿದೆ.

ಇನ್ನೂ ಕಾಂಗ್ರೆಸ್್ ಪಕ್ಷದಲ್ಲಿ ಅಭ್ಯಥಿ೯ಯ ಘೋಷಣೆ ಸ್ಪಷ್ಟವಿಲ್ಲ. ಕಾಂಗ್ರೆಸ್್ನೊಂದಿಗೆ ಬನ್ನಿ, ಬದಲಾವಣೆ ತನ್ನಿ ಕಾಯ೯ಕ್ರಮವೊಂದರಲ್ಲಿ ಅಧೀಕೖತ ಅಭ್ಯಥಿ೯ಯ ಹೆಸರು ಘೋಷಣೆ ಆದಂತಿದ್ದರೂ, ಅಡ್ಡಗೋಡೆ ಮೇಲೆ ದೀಪವಿಟ್ಟಂತಾಗಿದೆ. ಮಾಜಿ ಸಿಎಂ ಹಾಗೂ ಸಂಸದ ಧಮ೯ಸಿಂಗ್್ ಅವರ ಮಾತಿನಿಂದ ಬೆಕ್ಕಿಗೆ ಗಂಟೆ ಕಟ್ಟಿದಂತಾಗಿದ್ದು ನಿಜ.

ಇಷ್ಟಾದರೂ ತೆರೆಮರೆಯಲ್ಲಿ ಅನೇಕರು ಕಾಂಗ್ರೆಸ್್ ಪಕ್ಷದಿಂದ ಟಿಕೇಟ್್ ಪಡೆಯುವ ಅಕಾಂಕ್ಷಿಗಳಾಗಿದ್ದಾರೆ. ಕಾಂಗ್ರೆಸ್್ನ ವೀಕ್ಷಕರ ಸಭೆಯೊಂದರಲ್ಲಿ 16 ಜನ ಅಕಾಂಕ್ಷಿಗಳಾಗಿ ಅಜಿ೯ ಸಲ್ಲಿಸಿದರುವುದು ಅಪರೂಪವಾಗಿದೆ. ಮುಂದಿನ ದಿನಗಳಲ್ಲಿ ಅಭ್ಯಥಿ೯ಯ ಘೋಷಣೆಯಾದರೆ ಕಾಂಗ್ರೆಸ್್ನಲ್ಲೂ ಪ್ರತಿಸ್ಪಧಿ೯ಗಳು ಹೆಚ್ಚಾಗುವ ಸಂಭವ ಹೌದು. ಸ್ವತಂತ್ರ ಅಭ್ಯಥಿ೯ಗಳಾಗಿ ಚುನಾವಣೆ ಎದುರಿಸುವವರು ಇಲ್ಲಿದ್ದಾರೆ. ಹೈಕಮಾಂಡ ಮಾತ್ರ ಯಾರನ್ನು ಕಾಂಗ್ರೆಸ್್ ಟಿಕೇಟ್್ ನೀಡಿ ಆಶಿವ೯ದಿಸುತ್ತದೋ ಗೊತ್ತಿಲ್ಲದ ಗೊಂದಲ್ಲಿದೆ. ಏನೇ ಆದರೂ ಈ ಬಾರಿಯ ಚುನಾವಣೆಗೆ ರಂಗೇರಲಿದೆ.

ಬಿಜೆಯಿಂದ ಪ್ರಮುಖರೆಲ್ಲ ಶಾಸಕ ಬಸವರಾಜ ಪಾಟೀಲ ಅಟ್ಟೂರ್್ ಅವರ ಕೈ ಬಲಪಡಿಸಿದ್ದಾರೆ. ಬಿಜೆಪಿಗೆ ಗುಡ್್ಬೈ ಹೇಳಿ, ಕೆಜೆಪಿಗೆ ಕೈ ಜೋಡಿಸಿದ್ದಾರೆ. ಕೆಲ ಕಾಯ೯ಕತ೯ರು ಬಿಜೆಪಿಯಲ್ಲೇ ಉಳಿದುಕೊಂಡು ಅವರವರಲ್ಲಿಯೇ ಅನೇಕರು ಅಕಾಂಕ್ಷಿಗಳಾಗಿ ಉಳಿದಿರುವಂತೆ ಒಳಗೊಳಗೆ ಇರಿಸುಮುರುಸು ಕಂಡು ಬರುವಂತ್ತಿದೆ.

ಮತದಾರರ ಬಗ್ಗೆಯಾಗಲಿ, ಪಕ್ಷದ ಕಾಯ೯ಕತ೯ರುಗಳ ಬಗ್ಗೆ, ಅಭಿವೖದ್ಧಿ ಚಿಂತನೆಗಳು, ಜನಸಾಮಾನ್ಯರ ಕುಂದು ಕೊರತೆಗಳಿಗೆ ಸ್ಪಂಧಿಸುವಂಥ ಜನ ನಾಯಕರುಗಳಿಗೆ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಜನರು ಬಯಸಿದಂತಿದೆ. ಮತದಾರರು ಉತ್ತಮರನ್ನು ಬೆಂಬಲಿಸಲು ಮುಂದಾಗಿರುವುದು ಮಾತ್ರ ಸುಳ್ಳಲ್ಲ.

ಕೇವಲ ಕಾಲಹರಣದ ರಾಜಕಾರಣ ಮಾಡುತ್ತಿರುವವರಿಗೆ, ರೈತರ ಸಮಸ್ಯೆಗಳಿಗೆ ಸ್ಪಂಧಿಸದೇ, ಸಮಾಜದ ಅಭಿವೖದ್ಧಿಯಿಲ್ಲದವರ ಸೋಲು ಗ್ಯಾರಂಟಿ.  ವಿದ್ಯುತ್್ ಕೊರತೆ, ರಸ್ತೆಗಳ ದುರಸ್ಥಿ, ಶಾಲಾ ಕಾಲೇಜುಗಳಲ್ಲಿನ ಅನೇಕ ಮೂಲಭೂತ ಸಮಸ್ಯೆಗಳು, ಕುಗ್ರಾಮಗಳ ಜನರ ಪಾಡು, ನಗರ ಪ್ರದೇಶಗಳ ಜನರ ಸ್ಥಿತಿ ಸೌಲಭ್ಯ ವಂಚಿತರ ಸ್ಥಿತಿ ಚಿಂತಾಜನಕವಾಗಿದೆ.

ಶಾಸಕ ಅಟ್ಟೂರ್ ಅವರ ಬೆಂಬಲಿಗರಾಗಿ ಬಿಜೆಪಿಯಲ್ಲಿ ಪ್ರಾಮಾಣಿಕ ಕಾಯ೯ಕತ೯ರಾಗಿ ಕಾಯ೯ನಿವ೯ಹಿಸಿದ್ದ ಭಾಜಪ ತಾಲೂಕಾಧ್ಯಕ್ಷ ಸುಧೀರ ಕಾಡಾದಿ ಹಾಗೂ ನಗರ ಘಟಕದ ಅಧ್ಯಕ್ಷ ಸೂಯ೯ಕಾಂತ ಚಿಲ್ಲಾಬಟ್ಟೆ ಇಬ್ಬರೂ ಬಿಜೆಪಿ ಟಿಕೇಟ್ ಅಕಾಂಕ್ಷಿಗಳಾಗಿದ್ದಾರೆ. ಹೈಕಮಾಂಡ ಯಾರನ್ನು ಟಿಕೇಟ್್ ನೀಡಿ ಪ್ರೊತ್ಸಾಹಿಸುತ್ತದೇ ಎಂಬುದನ್ನು ಕಾದು ನೋಡಬೇಕಾಗಿದೆ. ಮತ್ತೆ ಬಿಜೆಪಿ ಪಕ್ಷದಲ್ಲಿಯೇ ಕೆಲವರು ಪ್ರತಿಸ್ಪಧಿ೯ಗಳಾದರೆ ಸಂಶಯವಿಲ್ಲ ಎಂಬಂತಾಗಿದೆ.

ಎಸ್ಸಿ, ಎಸ್ಟಿ ಪ್ರಮಾಣ ಪತ್ರಗಳಿಂದ ಹಿಡಿದು ಯಾವುದೇ ಸಕಾ೯ರಿ ಕಚೇರಿಗಳಲ್ಲಿ ಜನಗಳ ಮೂಲಸೌಲಭ್ಯಕ್ಕೆ ಮುಂದಾಗುವ ನಾಯಕರುಗಳು ಇಲ್ಲಿ ಬೇಕಾಗಿದ್ದಾರೆ. ಎಲ್ಲರ ಸಮಸ್ಯೆಗಳಿಗೆ ಪ್ರಾಮಾಣಿಕ ಪ್ರಯತ್ನದ ಚಿಂತನೆ ಮಾಡುವವರ ಪಾಲಿಗೆ ಜನ ಬೆಂಬಲ ಇದ್ದೇ ಇರುತ್ತದೆ ಎನ್ನುವ ಅನೇಕರು ತಾಲೂಕಾಡಳಿತ ಸುಲಭಾಗಿ ಅಭಿವೖದ್ಧಿ ಹೊಂದುವಂತಾಗಬೇಕು ಎಂಬ ಅಳಲನ್ನು ತೋಡಿಕೊಳ್ಳುತ್ತಾರೆ.

ಶಾಸಕ ಬಸವರಾಜ ಪಾಟೀಲ, ಇತ್ತೀಚಿಗೆ ಬಿಜೆಪಿಗೆ ರಾಜಿನಾಮೆ ನೀಡಿ ಕೆಜೆಪಿಗೆ ಹೋಗಿದ್ದಾರೆ.

 

ಶಾಸಕ ಅಟ್ಟೂರ್ ಅವರ ಬೆಂಬಲಿಗರಾಗಿ ಬಿಜೆಪಿಯಲ್ಲಿ ಕಾಯ೯ನಿವ೯ಹಿಸಿದ್ದ ಭಾಜಪ ತಾಲೂಕಾಧ್ಯಕ್ಷ ಸುಧೀರ ಕಾಡಾದಿ ಹಾಗೂ ನಗರ ಘಟಕದ ಅಧ್ಯಕ್ಷ ಸೂಯ೯ಕಾಂತ ಚಿಲ್ಲಾಬಟ್ಟೆ

 

ಹಿರಿಯ ರಾಜಕಾರಣಿ, ಮಾಜಿ ಶಾಸಕ ಎಂ.ಜಿ.ಮುಳೆ

 

ಮಾಜಿ ಶಾಸಕ ಹಾಗೂ ಜೆಡಿಎಸ್ ರಾಜ್ಯ ಯುವ ಕಾಯಾ೯ಧ್ಯಕ್ಷ ಮಲ್ಲಿಕಾಜು೯ನ ಖೂಬಾ

 

ಕಾಂಗ್ರೆಸ್್ ಮುಖಂಡ ಶಿವಶರಣ ಬಿರಾದಾರ್


ಭಾನುವಾರ, ಡಿಸೆಂಬರ್ 16, 2012

ಪಕ್ಷದಿಂದ ಪಕ್ಷಕ್ಕೆ ಜಿಗಿಯುವುದೇ ಮಹಾನ್ ಸಾಧನೆಃ ಖೂಬಾ ಆರೋಪ


ರಾಜ್ಯ ಯುವ ಜೆಡಿಎಸ್್ ಕಾಯಾ೯ಧ್ಯಕ್ಷ ಹಾಗೂ ಮಾಜಿ ಶಾಸಕ ಮಲ್ಲಿಕಾಜು೯ನ ಖೂಬಾ
ಮಾಜಿ ಶಾಸಕ ಎಂ.ಜಿ.ಮುಳೆ
ಶಾಸಕ ಬಸವರಾಜ ಪಾಟೀಲ ಅಟ್ಟೂರ್

ವಿಧಾನಸಭಾ ಚುನಾವಣೆಯಲ್ಲಿ ನಾನು ಜನಗಳ ಬೆಂಬಲ, ಆಶಿವಾ೯ದದಿಂದ ಗೆಲ್ಲುವುದು ಶತಸಿದ್ಧಃ ಖೂಬಾ ಅಭಿಮತ
ವೀರಣ್ಣ ಮಂಠಾಳಕರ್
---------------------
ಬಸವಕಲ್ಯಾಣ, ಡಿ.16ವಿಶ್ವಗುರು ಬಸವಣ್ಣನವರ ಬಗ್ಗೆ ಕಾಳಜಿ ಇಲ್ಲದ ಹಾಲಿ ಶಾಸಕ ಅಟ್ಟೂರ್್ ಮತ್ತು ಮಾಜಿ ಶಾಸಕ ಮುಳೆ ಅವರು, ಪಕ್ಷದಿಂದ ಪಕ್ಷಕ್ಕೆ ಜಿಗಿಯುವುದೇ ಮಹಾನ್್ ಸಾಧನೆ ಎಂಬುದನ್ನರಿತಿದ್ದಾರೆ. ತಾಲೂಕಾಭಿವೖದ್ಧಿಯ ಚಿಂತನೆ ಮಾಡದೇ ಸ್ವಾಥ೯ಕ್ಕಾಗಿ ತಮ್ಮದೇ ಕಲ್ಯಾಣವನ್ನು ಮಾಡಿಕೊಳ್ಳುತಿದ್ದಾರೆ ಎಂದು ರಾಜ್ಯ ಯುವ ಜೆಡಿಎಸ್್ ಕಾಯಾ೯ಧ್ಯಕ್ಷ ಹಾಗೂ ಮಾಜಿ ಶಾಸಕ ಮಲ್ಲಿಕಾಜು೯ನ ಖೂಬಾ ವಾಗ್ದಾಳಿ ನಡೆಸಿದರು.

ಭಾನುವಾರ ಖೂಬಾ ನಿವಾಸದ ಕಚೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಪತ್ರಕತ೯ರೊಂದಿಗೆ ಮಾತನಾಡಿದ ಅವರು, ಎಲ್ಲಾ ಜಾತಿ ಧಮ೯ದವರೊಂದಿಗೆ ಕೂಡಿಕೊಂಡು ಅಭಿವೖದ್ಧಿಯ ಕನಸು ಕಂಡಿರುವ ನನಗೆ ರಾಜಕೀಯದಲ್ಲಿ ಹಿರಿಯರಾದ ಮುಳೆ, ಅಟ್ಟೂರ್್ ಅವರಿಂದ ಏನು ಕಲಿಯಬೇಕು ಎಂಬುದೇ ಯಕ್ಷಪ್ರಶ್ನೆಯಾಗಿ ಕಾಡುತ್ತಿದೆ ಎಂದು ವ್ಯಂಗ್ಯವಾಡಿದರು.

ಇವರಿಗೆ ಮತದಾರರ ಬಗ್ಗೆಯಾಗಲಿ, ಪಕ್ಷದ ಕಾಯ೯ಕತ೯ರುಗಳ ಬಗ್ಗೆ, ಅಭಿವೖದ್ಧಿ ಚಿಂತನೆಗಳಿಲ್ಲ. ಕೇವಲ ಕಾಲಹರಣದ ರಾಜಕಾರಣ ಮಾಡುತಿದ್ದಾರೆ. ರೈತರ ಸಮಸ್ಯೆಗಳಿಗೆ ಸ್ಪಂಧಿಸದೇ, ಹಾಲಿ ಶಾಸಕರು ವಿಫಲ ಆಡಳಿತ ನಡೆಸುತ್ತಿದ್ದಾರೆ. ವಿದ್ಯುತ್್ ಕೊರತೆ, ಅಪೂಣ೯ ಕೆರೆಗಳು ನೆನೆಗುದಿಗೆ ಬಿದ್ದಿವೆ. ಎಸ್ಸಿ, ಎಸ್ಟಿ ಪ್ರಮಾಣ ಪತ್ರ ಸಿಗುತ್ತಿಲ್ಲ. ಪಿಯು ಕಾಲೇಜು ಸೇರಿದಂತೆ ಮುಂತಾದ ಕಾಮಗಾರಿಗಳು ಬೇಜವಾಬ್ದಾರಿಯಿಂದ ವಾಪಸ್್ ಹೋಗಿವೆ ಎಂದು ಕಿಡಿ ಕಾರಿದರು.

ಬಸವಕಲ್ಯಾಣ ಕ್ಷೇತ್ರದ ಆಡಳಿತ ಸೋಲಾರ್್ ಶಕ್ತಿ ಬೆಳಕಿನ ಹಾಗೆ ನಡೆಯುತಿದ್ದು, ವೖದ್ಧರ, ವಿಧವೆಯರ, ಅಂಗವಿಕಲರ ಮಾಸಿಕ ವೇತನಗಳು ಇವರ ಅಧಿಕಾರವಧಿಯಲ್ಲಿ ಕಡಿತಗೊಳಿಸಲಾಗಿದೆ. ಹತ್ತಾರು ಸಮಸ್ಯೆಗಳ ಆಗರವಾಗಿರುವ ಇಲ್ಲಿನ ಆಡಳಿತ ಸಂಪೂಣ೯ ಕುಸಿದಿದೆ ಎಂದು ಆರೋಪಿಸಿದರು.

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪಧಿ೯ಸಬೇಕೆಂಬ ಆಸೆಯಿಂದ ಅಭಿವೖದ್ದಿಯತ್ತ ಗಮನ ಹರಿಸುತ್ತಿಲ್ಲ. ಇದರಿಂದ ಜನ ಸಾಮಾನ್ಯರ ಕೆಲಸ ಕಾಯ೯ಗಳು ಆಗದೇ ಇರುವುದರಿಂದ ಕಚೇರಿಗಳಲ್ಲಿನ ಭ್ರಷ್ಟಾಚಾರದಿಂದ ಜನ ಪರದಾಡುವಂತಾಗಿದೆ. ಕ್ಷೇತ್ರದ ಮತದಾರರು ಇನ್ನಾದರೂ ಜಾಗೖತರಾಗಬೇಕು ಎಂದು ಕರೆ ನೀಡಿದರು.

ಬಸವಕಲ್ಯಾಣ ಅಭಿವೖದ್ಧಿ ಮಂಡಳಿಗೆ ಪ್ರಸ್ತುತ ಸಕಾ೯ರ ಕೇವಲ 16 ಕೋಟಿ ಮಂಜೂರು ಮಾಡಿದೆ. ನಮ್ಮ ಜೆಡಿಎಸ್್ ಸಕಾ೯ರದ ಅವಧಿಯಲ್ಲಿ ಒಂದೇ ಸಲಕ್ಕೆ 23 ಕೋಟಿ ರುಪಾಯಿ ಬಿಡುಗಡೆ ಮಾಡಿತ್ತು. ತ್ರಿಪುರಾಂತ ಕೆರೆ ಕಾಮಗಾರಿ ಅಧ೯ಕ್ಕೆ ನಿಂತಿದೆ. ಇಲ್ಲಿ ಮಂಜೂರಾದ ಆಟೋ ಪಾಕ೯ ಇವತ್ತಿಗೂ ಪ್ರಾರಂಭಗೊಂಡಿಲ್ಲ. ಸಕಾ೯ರಿ ಕಚೇರಿಗಳಲ್ಲಿ 254 ಹುದ್ದೆ ಭತಿ೯ ಮಾಡಿಕೊಳ್ಳದಿರುವುದು ದುರಾದೖಷ್ಟವಾಗಿದೆ ಎಂದು ವಿಷಾದಿಸಿದರು.

ನಾನು ಕಳೆದ ಚುನಾವಣೆಯಲ್ಲಿ ಸೋತಿರುವುದರಿಂದ ಮಾಡಿರುವ ತಪ್ಪುಗಳನ್ನು ತಿದ್ದಿಕೊಂಡು ಸುಧಾರಿಸಿದ್ದೇನೆ. ಸೋಲೆಂಬುದು ಮನುಷ್ಯನಿಗೆ ಬದುಕುವ ಪಾಠ ಕಲಿಸಿಕೊಟ್ಟು, ಜನರೊಂದಿಗೆ ಹೇಗೆ ಬೆರೆಯಬೇಕೆಂಬುದನ್ನು ಹೇಳಿ ಕೊಡುತ್ತದೆ. ಆದರೆ ಮುಳೆ ಅವರು 5 ಬಾರಿ ಸೋತರೂ ಇನ್ನೂ ಅವರಲ್ಲಿ ಸುಧಾರಣೆ ಕಂಡು ಬರುತ್ತಿಲ್ಲ. ಅಟ್ಟೂರ್್ ಅವರಿಗೆ ಅಭಿವೖದ್ಧಿಯ ಚಿಂತನೆಯೇ ಇಲ್ಲ ಎಂದು ನೇರ ಆರೋಪಿಸಿದರು.

ಮೊಟ್ಟ ಮೊದಲು ಜೆಡಿಎಸ್್ ಪಕ್ಷದಿಂದ ವಿಧಾನಸಭೆಗೆ ಆಯ್ಕೆಯಾದ ಮುಳೆ ನಂತರ ಸೇಪ೯ಡೆಗೊಂಡಿದ್ದು ಕಾಂಗ್ರೆಸ್್ ಪಕ್ಷಕ್ಕೆ, ಇದಾದ ನಂತರ ಕಾಂಗ್ರೆಸ್್ನಿಂದಲೇ ಚುನಾವಣೆಯಲ್ಲಿ ಸ್ಪಧಿ೯ಸಿ 32 ಸಾವಿರ ಮತಗಳನ್ನು ಪಡೆದು ವಯಕ್ತಿಕ ಸ್ವಾಥ೯ದಿಂದ ಕಾಂಗ್ರೆಸ್್ ಪಕ್ಷ ಬಿಟ್ಟು ಮಾಜಿ ಮುಖ್ಯಮಂತ್ರಿ ಮತ್ತು ಕೇಂದ್ರ ಸಚಿವರಾಗಿದ್ದ ದಿ.ವಿಲಾಸರಾವ ದೇಶಮುಖ, ವಿರೋಧ ಪಕ್ಷದ ನಾಯಕ ಸಿದ್ರಾಮಯ್ಯ, ಪಿ.ಜಿ.ಆರ್್ ಶಿಂಧ್ಯೆ, ಖಗೆ೯, ಧರ್ಮಸಿಂಗ್್ ಮುಂತಾದ ಹಿರಿಯ ನಾಯಕರುಗಳಿಗೆ ಕೈಕೊಟ್ಟು, ಇದೀಗ ಬಿಎಸ್್ಆರ್್ ಪಕ್ಷಕ್ಕೆ ಸೇಪ೯ಡೆಗೊಂಡಿದ್ದು ಸ್ವಹಿತಾಸಕ್ತಿಯ ಲಾಭಕ್ಕಾಗಿ ಹೊರತು ಅಭಿವೖದ್ಧಿಯ ದೖಷ್ಠಿಕೋನದಿಂದಲ್ಲ ಎಂದು ದೂರಿದರು.

ಆಡಳಿತದಲ್ಲಿದ್ದ ಬಿಜೆಪಿಗೆ ಸೇಪ೯ಡೆಗೊಂಡು 54 ತಿಂಗಳಲ್ಲಿ ಮೂರು ಪಕ್ಷ ಬದಲಾಯಿಸಿದ ಮಾಜಿ ಶಾಸಕ ಮುಳೆ ಅವರು, ಎಲ್ಲಾ ಪಕ್ಷದ ರಾಜಕೀಯ ಮುತ್ಸದ್ದಿಗಳನ್ನು ಮತ್ತು ಕುಮಾರಸ್ವಾಮಿ ಅವರನ್ನು ಕೂಡ ಮೋಸ ಮಾಡಿದವರಾಗಿದ್ದಾರೆ. ಇವರೇನು ಎಂಬುದು ಜನರೇ ವಿಧಾನಸಭಾ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಖಾರವಾಗಿ ನುಡಿದರು.

ಮಾಜಿ ಮುಖ್ಯಮಂತ್ರಿ ಬಿ.ಎಸ್್.ಯಡಿಯೂರಪ್ಪನವರು ಸ್ವಾಭಿಮಾನಕ್ಕಾಗಿ ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜಿನಾಮೆ ನೀಡಿ, ಕೆಜೆಪಿ ಪ್ರಾದೇಶಿಕ ಪಕ್ಷ ಹುಟ್ಟು ಹಾಕಿದರೆ, ಹಾಲಿ ಶಾಸಕ ಬಸವರಾಜ ಪಾಟೀಲ ಅಟ್ಟೂರ್್ ಅವರು ಹಿರಿಯ ರಾಜಕಾರಣಿಯಾಗಿ 7 ಸಲ ವಿಧಾನಸಭಾ ಚುನಾವಣೆ ಸ್ಪಧಿ೯ಸಿ, 5 ಸಲ ಗೆದ್ದು 2 ಸಲ ಸೋತ ಅನುಭವಿಗಳಾಗಿದ್ದರೂ ಬಿಜೆಪಿ ಸದಸ್ಯತ್ವಕ್ಕೆ ರಾಜಿನಾಮೆ ನೀಡದೇ ಕೆಜೆಪಿ ಸೇರಿರುವ ಬಗ್ಗೆ ಘೋಷಣೆ ಮಾಡಿರುವುದು ಸರಿಯೇ ಎಂದು ಪ್ರಶ್ನಿಸಿದರು.

ಬಸವಕಲ್ಯಾಣ ಕ್ಷೇತ್ರದಲ್ಲಿ ಸಕ್ಕರೆ ಕಾಖಾ೯ನೆ ಸ್ಥಾಪಿಸುವುದಾಗಿ ಇಲ್ಲಿನ ರೈತರುಗಳಿಗೆ ದ್ರೊಹ ಬಗೆದ ಮುಳೆ ಅವರು, ಅನುಭವ ಬ್ಯಾಂಕ್್ನಿಂದ ಬಡವರ ಹಣ ದೋಚಿಕೊಂಡಿದ್ದಾರೆ. ಅದೇ ರೀತಿ ಬಿಎಸ್್ಎಸ್್ಕೆ ಸಕ್ಕರೆ ಕಾಖಾ೯ನೆಯಿಂದ ಏನೆಲ್ಲಾ ಲಾಭ ಪಡೆದಿದ್ದಾರೆ ಎನ್ನುವ ಮಾಹಿತಿಯ ಪಟ್ಟಿ ಮುಂದಿನ ದಿನಗಳಲ್ಲಿ ಕೊಡುತ್ತೇನೆ ಎಂದರು.

ಹಾಲಿ ಮತ್ತು ಮಾಜಿ ಶಾಸಕರುಗಳು ನನಗಿಂತ ಹಿರಿಯರಾಗಿದ್ದು, ನಾನು ಇವರಿಂದ ಮಾಗ೯ದಶ೯ನ ಪಡೆದು ಕ್ಷೇತ್ರದ ಜನರ ಸೇವೆ ಮಾಡುವುದನ್ನು ಕಲಿಯಬೇಕಾಗಿತ್ತು. ಆದರೆ ಇಬ್ಬರೂ ವಯಕ್ತಿಕ ಲಾಭಕ್ಕಾಗಿ ಪಕ್ಷದಿಂದ ಪಕ್ಷಕ್ಕೆ ಹೋಗುವುದರಲ್ಲೇ ತಲ್ಲೀನರಾಗಿರುವುದು ನೋಡಿ ಇವರಿಂದ ಕಲಿಯಬೇಕಾದ್ದು ಏನಿದೆ ಎಂಬುದನ್ನು ತಿಳಿಯದಾಗಿದೆ ಎಂದು ಚಕಿತರಾದರು.

ಮುಂಬರುವ ಸಿಎಂಸಿ ಚುನಾವಣೆಗೆ ಸ್ಪಧಿ೯ಸಬೇಕೆಂಬ ಇಚ್ಚೆಯುಳ್ಳವರು ಸಂಬಂಧಪಟ್ಟ ವಾಡ೯ ಬಗ್ಗೆ ಸಂಪೂಣ೯ ಮಾಹಿತಿ, ಉತ್ತಮ ಸೇವಾ ಮನೋಭಾವನೆ, ನಗರಸಭೆಯ ಕುರಿತು ತಿಳುವಳಿಕೆ ಉಳ್ಳವರು ಬಂದರೆ ಜೆಡಿಎಸ್್ನಿಂದ ಸ್ಪಧಿ೯ಸುವ ಅಭ್ಯಥಿ೯ಯ ಅಧಿಕೖತ ಘೋಷಣೆ ಬರುವ ಜನವರಿ 26ಕ್ಕೆ ಮಾಡಲಾಗುವುದು ಎಂದು ಹೇಳಿದರು.

ರಾಜ್ಯದಲ್ಲಿ ಬಿಜೆಪಿಗೆ ಸೋಲಿಸಲು ಕೆಜೆಪಿ ಬಂದಿದೆ. ಕೆಜೆಪಿಗೆ ಸೋಲಿಸುವ ನಿಧಾ೯ರ ಜೆಡಿಎಸ್್ಗೆ ಇದ್ದಂತೆ ಈ ಕ್ಷೇತ್ರದಿಂದ ಅಟ್ಟೂರ್್, ಮುಳೆ ಅವರನ್ನು ಸೋಲಿಸುವ ಗುರಿ ನನ್ನದಾಗಿದೆ. ಕಾಂಗ್ರೆಸ್್ಗೆ ನೇರ ಸ್ಪಧಿ೯ಯಾಗಿ ವಿಧಾನಸಭಾ ಚುನಾವಣೆಯಲ್ಲಿ ನಾನು ಜನಗಳ ಬೆಂಬಲ, ಅವರ ಒಲವಿನಿಂದ ಗೆಲ್ಲುವುದು ಶತಸಿದ್ಧ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬುಧವಾರ, ಅಕ್ಟೋಬರ್ 3, 2012

ವಿಧಾನಸಭಾ ಚುನಾವಣೆಯಲ್ಲಿ ರಾಜಕೀಯ ಪಕ್ಷದವರ ಪೈಪೋಟಿಃ

Khuba mallikarjun
ವೀರಣ್ಣ ಮಂಠಾಳಕರ್
---------------------


ಬಸವಕಲ್ಯಾಣಃ ವಿಧಾನಸಭಾ ಚುನಾವಣೆಯಲ್ಲಿ ರಾಜಕೀಯ ಪಕ್ಷದವರ ಪೈಪೋಟಿಃ ಓಟು ನೋಟಿಗಾಗಿ ಎಲ್ಲವೂ

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನಿಲ್ಲಲು ಆಯಾ ಪಕ್ಷದ ಅಭ್ಯಥಿ೯ಗಳ ಅಧಿಕೖತ ಪಟ್ಟಿಯೇ ಇನ್ನೂ ಬಿಡುಗಡೆಯಾಗಿಲ್ಲ. ಆದರೂ ಬಸವಕಲ್ಯಾಣ ತಾಲೂಕಿನೆಲ್ಲೆಡೆ ರಾಜಕೀಯ ನಾಯಕರು, ಮಾಜಿ, ಹಾಜಿ ಹಾಗೂ ಪಕ್ಷಗಳ ಪ್ರಮುಖರು ಪ್ರಚಾರಕ್ಕಾಗಿ ಎಲ್ಲಿಲ್ಲದ ಕಸರತ್ತು ನಡೆಸುತ್ತಿರುವುದು ಕಂಡು ಬರುವಂತಾಗಿದೆ.

ಯಾವುದೋ ಹಬ್ಬ ಹರಿದಿನಗಳ ನೆಪದಲ್ಲಿ ಪಾಲ್ಗೊಳ್ಳುವುದು, ಧಾಮಿ೯ಕ ಕಾಯ೯ಕ್ರಮಗಳಲ್ಲಿ ವಿಶೇಷ ಪೂಜೆ ನೆರವೇರಿಸುವುದು ಸೇರಿದಂತೆ ವಿವಿಧ ಗ್ರಾಮಗಳಿಗೆ ತೆರಳಿ ಸಾವ೯ಜನಿಕರ ಕುಂದು ಕೊರತೆಗಳಿಗೆ ಸ್ಪಂಧಿಸುವ ಬೆಳವಣಿಗೆ ರಾಜಕೀಯ ಜನರಲ್ಲಿ ಚುನಾವಣೆಯ ಕಾವು ಮತ್ತಷ್ಟು ಏರತೊಡಗಿದೆ.

2013ರಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯ ಜಪವನ್ನೇ ಮಾಡುತ್ತಿರುವ ಅನೇಕರು ವಿಶೇಷ ದಿನಗಳ ಸಂದಭ೯ಕ್ಕೆ ವಿವಿಧ ಧಾಮಿ೯ಕ ಸಮಾರಂಭಗಳಲ್ಲಿ ಜನರನ್ನು ಶುಭಾಷಯ ಕೋರಿ ಕಟೌಟ್್, ಬ್ಯಾನರ್್ಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಅಧೀಕ ಸಂಖ್ಯೆಯ ಯುವನಾಯಕರಿಗೆ ಪ್ರಚಾರವೇ ಮೂಲ ಮಂತ್ರವಾಗಿದೆ.

ಇಲ್ಲಿಯವರೆಗೆ ಎಲ್ಲೋ ಇದ್ದವರು ಇದ್ದಕ್ಕಿದಂತೆ ಪ್ರತ್ಯಕ್ಷವಾಗಿ ಭಾರಿ ಪ್ರಚಾರದಲ್ಲಿ ಇರುವುದನ್ನು ನೋಡಿದರೆ ಕಾಂಗ್ರೇಸ್್ ಪಕ್ಷದಲ್ಲಿ ಅನೇಕರು ಆಕಾಂಕ್ಷಿಗಳಾಗಿದ್ದಾರೆ. ಇದರಿಂದ ಟಿಕೇಟ್್ ಮಾತ್ರ ಯಾರಿಗೆ ಸಿಗುತ್ತದೋ ನಿಖರವಾಗಿ ಹೇಳಲಾಗದಂತಾಗಿದೆ. ಹಲವರ ನಿರೀಕ್ಷೆ, ಕೆಲವರ ಲೆಕ್ಕಾಚಾರ ಕೂಡ ಏನಿದೆಯೋ ಎಂಬ ಅಪವಾದಗಳೂ ಬರುತ್ತಿವೆ.

ಜೆಡಿಎಸ್್ನಿಂದ ಮಾಜಿ ಶಾಸಕ ಮಲ್ಲಿಕಾಜು೯ನ ಖೂಬಾ ಮುಂಬರುವ ಚುನಾವಣೆಗೆ ನಿಲ್ಲುವುದು ಶತಸಿದ್ಧ ಎಂಬ ಮಾತುಗಳು ಕೇಳಿ ಬರುತಿದ್ದು, ಟಿಕೇಟ್್ ಸಿಗೋದು ಖಚಿತವೆಂಬಂತೆ ಅಬ್ಬರದ ಪ್ರಚಾರ ಮಾಡುತಿದ್ದಾರೆ. ಕಾಂಗ್ರೇಸ್್ ಪಕ್ಷದಲ್ಲಿ ಅನೇಕರು ಪೈಪೋಟಿ ನಡೆಸುವಂತೆ ಕಾಣಿಸಿಕೊಳ್ಳುತಿದ್ದಾರೆ.

ಹಾಲಿ ಶಾಸಕ ಬಸವರಾಜ ಪಾಟೀಲ ಅಟ್ಟೂರ್್ ಅವರು ಕಳೆದ ವಷ೯ ಕಾರು ಅಪಘಾತದಲ್ಲಿ ಗಾಯಗೊಂಡು ಇದೀಗ ಚೇತರಿಸಿಕೊಂಡಿದ್ದಾರೆ. ಆದ್ದರಿಂದ ಹೆಚ್ಚಿನ ಪ್ರಚಾರದಲ್ಲಿ ತೊಡಗಿಸಿಕೊಳ್ಳದೇ  ಮೌನವೇ ಸವ೯ ಲಕ್ಷಣ ಎನ್ನುವ ಹಾಗೆ ಅಟ್ಟೂರ್್ ಮತ್ತೆ ಚುನಾವಣಾ ಕಣಕ್ಕಿಳಿಯುವುದು ಖಚಿತವೆಂಬ ಮಾತು ಅವರ ಆಪ್ತ ವಲಯಗಳಿಂದ ಕೇಳಿ ಬರುತ್ತಿವೆ.

ಯೂಥ್್ ಕಾಂಗ್ರೇಸ್್ ಜಿಲ್ಲಾ ಯುವ ಘಟಕದ ಆನಂದ ದೇವಪ್ಪ, ಹಿಂದುಳಿದ ವಗ೯ಗಳ ಮುಖಂಡ ಬಿ.ನಾರಾಯಣರಾವ, ಶಿವಶರಣು ಬಿರಾದಾರ್್, ಶಿವರಾಜ ನರಶೆಟ್ಟಿ ಮುಂತಾದ ಪ್ರಮುಖರು ಒಂದೇ ಪಕ್ಷದಲ್ಲಿದ್ದರೂ ಚುನಾವಣೆ ವೇಳೆ ಪ್ರತಿಸ್ಫಧಿ೯ಗಳಂತೆ ಸಿದ್ಧತೆ ನಡೆಸುತ್ತಿರುವ ಲಕ್ಷಣಗಳು ಗೋಚರಿಸುತ್ತಿವೆ.

ಇನ್ನೋವ೯ ಮಾಜಿ ಶಾಸಕ ಮಾರುತಿರಾವ ಮೂಳೆಯವರು ಯಾವ ಪಕ್ಷದಿಂದ ಚುನಾವಣೆ ಎದುರಿಸುವುದೆಂಬ ಗೊಂದಲ ಇದ್ದಂತಿದೆ. ಹೊಸ ಪಕ್ಷದಿಂದ ಚುನಾವಣಾ ಕಣಕ್ಕೆ ಬರಲಿದ್ದಾರೆ ಎಂಬ ಸ್ವರಗಳು ಕೇಳಿ ಬರುತ್ತಿದೆ. ಸ್ವಾಭಿಮಾನಿ ಶ್ರೀರಾಮುಲು ಅವರ ಹೊಸ ಪಕ್ಷಕ್ಕೆ ಮೂಳೆ ಸೇರಿದಂತೆ ಇತರೆ ಯುವನಾಯಕರು ಸೇರಲಿದ್ದಾರೆ ಎಂಬ ಗಾಳಿ ಸುದ್ಧಿಯೂ ಕೂಡ ಇದೆ.

ಯಾವುದೇ ಗಾಳಿ ಸುದ್ಧಿಗೆ ಒಳಗಾಗದ ಅನೇಕ ರಾಜಕೀಯ ಮುಖಂಡರು ತೆರೆಮರೆಯಲ್ಲಿ ಕಸರತ್ತು ನಡೆಸುತ್ತಾ ವಿಧಾನಸಭಾ ಚುನಾವಣೆಯ ಸಿದ್ಧತೆಯಲ್ಲಿದ್ದಂತೆ, ಸಧ್ಯಕ್ಕೆ ಸಾವ೯ಜನಿಕರ ಮಧ್ಯೆದಲ್ಲಿ ಕಾಣಿಸಿಕೊಳ್ಳದೇ ಇದ್ದರೂ ಚುನಾವಣಾ ಅಖಾಡಕ್ಕಿಳಿಯುವ ಪೂವ೯ಯೋಜಿತ ಯೋಚನೆ ಹಲವರಿಗಿದೆ.

ಭಾನುವಾರ, ಜೂನ್ 10, 2012

ಮುಖ್ಯ ಶಿಕ್ಷರಿಲ್ಲದ ಬಟಗೇರಾ ಶಾಲೆ

  ಬಸವಕಲ್ಯಾಣ.

ತಾಲೂಕಿನ ಬಟಗೇರಾ ಸರಕಾರಿ ಪ್ರೌಢ ಶಾಲೆ
    ಮುಖ್ಯ ಶಿಕ್ಷರಿಲ್ಲದ ಬಟಗೇರಾ ಶಾಲೆಯಲ್ಲಿ ಶೈಕ್ಷಣಿಕ ಕೊರತೆಯಿಂದ ಉತ್ತಮ ಬೋಧನೆಗೆ ಹಿನ್ನಡೆ


ಬಸವಕಲ್ಯಾಣ. ಜೂ. 8

ತಾಲೂಕಿನ ಬಟಗೇರಾ ಸರಕಾರಿ ಪ್ರೌಢ ಶಾಲೆ ಪ್ರಾರಂಭದಿಂದ ಶಿಕ್ಷಕರ ಕೊರತೆಯನ್ನು ತೀವೖವಾಗಿ ಅನುಭವಿಸುತಿದ್ದು, ಸಂಬಂಧಪಟ್ಟ ಇಲಾಖೆ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ. ಬೇಡಿಕೆ ಒತ್ತಾಯಕ್ಕಾಗಿ ಕಳೆದ ವಷ೯ ಕ್ಷೇತ್ರ  ಶಿಕ್ಷಣಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರೂ ಶಿಕ್ಷಕರ ಕೊರತೆ ಇರುವ ಖಾಲಿ ಜಾಗ ಭತಿ೯ ಮಾಡಲಾಗಿಲ್ಲ ಎಂಬುದು ಗ್ರಾಮಸ್ಥರ  ಅಳಲಾಗಿದೆ.

ಮೂರೇ ಜನ ಶಿಕ್ಷಕರಿರುವ ಬಟಗೇರಾ ಸರಕಾರಿ ಪ್ರೌಢ ಶಾಲೆಗೆ ಶೌಚಾಲಯವಿಲ್ಲ. ನೀರು ಸರಬರಾಜಿಲ್ಲ, ವಿಜ್ಞಾನ, ಇಂಗ್ಲೀಷ ಶಿಕ್ಷಕರು ಸೇರಿದಂತೆ ಮುಖ್ಯೋಪಾಧ್ಯಯರಿಲ್ಲ. ಅನೇಕ ಮೂಲ ಸೌಲಭ್ಯಗಳ ಕೊರತೆಯಿಂದ ಮಕ್ಕಳ ಶೈಕ್ಷಣಿಕ ಪ್ರಗತಿಯಲ್ಲಿ ದುಸ್ಫರಿಣಾಮ ಬೀರುತಿದೆ. ಹೀಗೆ ಸಕಾ೯ರದ ಧೋರಣೆ ಮುಂದೊರೆದರೆ ಮತ್ತೆ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಶಿಕ್ಷಕರ ಕೊರತೆ ಬಗ್ಗೆ ಹಲವು ಬಾರಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಗಮನಕ್ಕೆ ತಂದರೂ ಕೂಡ ತಲೆ ಕೆಡಿಸಿಕೊಳ್ಳದ ಅಧಿಕಾರಿಗಳು ಇದ್ದಂಥ ಶಿಕ್ಷಕರನ್ನೆ ಮತ್ತೆ ವಗಾ೯ವಣೆ ಮಾಡಿದ್ದಾರೆ. ಗುಣಮಟ್ಟದ ಬೋಧನೆ ಇಲ್ಲದೇ ಮಕ್ಕಳ ಸವ೯ತೋಮುಖ ಬೆಳವಣಿಗೆಗಾಗಿ ಪಾಲಕರು ಪರಿತಪಿಸುವಂತಾಗಿದೆ.

ಹೀಗೆ ಪರಿಸ್ಥಿತಿ ಮುಂದೊರೆದರೆ ಮಕ್ಕಳು ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆಯುವುದಾದರೂ ಹೇಗೆ ಎಂದು ಪ್ರಶ್ನಿಸಿದ ಸರಕಾರಿ ಪ್ರೌಢ  ಶಾಲೆಯ ಎಸ್್.ಡಿ.ಎಂ.ಸಿ ಅಧ್ಯಕ್ಷ ಬಸವರಾಜ ಹಿರೇಮಠ ಕನ್ನಡಪ್ರಭದೊಂದಿಗೆ ಮಾತನಾಡಿ ಪ್ರತಿಕ್ರಿಯಿಸಿದರು.

ಶಾಲೆಗೆ ಸಮಪ೯ಕವಾದ ಅಡುಗೆ ಕೋಣೆಗಳಿಲ್ಲ. ನಂಜುಂಡಪ್ಪ ವರದಿ ಅನುಷ್ಠಾನದಲ್ಲಿ ಕಟ್ಟಲ್ಪಟ್ಟ ಶೌಚಾಲಯ ಕೆಲಸಕ್ಕೆ ಬಾರದಂತಾಗಿವೆ. ಶಾಲೆಗೆ ಹೆಚ್ಚುವರಿ ಶಿಕ್ಷಕರನ್ನು ನೇಮಿಸಬೇಕೆಂಬ ಒತ್ತಾಯಕ್ಕೆ ಮಣಿಯದೇ ಇರುವ ಅಧಿಕಾರಿಗಳ ವಿರುದ್ಧ ಮತ್ತೆ ಬೀದಿಗಿಳಿಯಬೇಕಾದ್ದು ಅನಿವಾಯ೯ವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಇದೇ ಜೂನ್್ ತಿಂಗಳ ಒಳಗಾಗಿ ಅವಶ್ಯವಿರುವ ಶಿಕ್ಷಕರ ಭತಿ೯ ಮಾಡದಿದ್ದರೆ ಉಗ್ರ ಸ್ವರೂಪದ ಹೋರಾಟ ಮತ್ತು ಪ್ರತಿಭಟನೆ, ರಸ್ತೆ ತಡೆ ನಡೆಸಲು ಮತ್ತೆ ಮುಂದಾಗಿದ್ದೇವೆ. ಗಡಿ ಗ್ರಾಮಗಳೆಂಬ ಕಾರಣಕ್ಕೆ ಹಲವು ವಷ೯ಗಳಿಂದ ಜನಪ್ರತಿನಿಧಿಗಳಿಂದ ಶೈಕ್ಷಣಿಕ ಪರಿಸರಕ್ಕೆ ಸೌಲಭ್ಯಗಳು ಸಿಗದೇ ವಂಚಿತರಾಗುತಿದ್ದೇವೆ ಎಂದು ಅವರು ಗುಡುಗಿದ್ದಾರೆ.

ಕಳೆದ ವಷ೯ದ ಪ್ರತಿಭಟನೆಯಲ್ಲಿ ಅನೇಕ ಶಾಲಾ ಮಕ್ಕಳು, ಪಾಲಕ, ಪೋಷಕರು ಪಾಲ್ಗೊಂಡು ಭಾರಿ ನಿರೀಕ್ಷೆಯನ್ನೇ ಹೊಂದಿದ್ದರು. ಆದರೆ ಇಂದಿಗೂ ಸಹ ಶೈಕ್ಷಣಿಕ ಕೊರತೆಯನ್ನು ಅನುಭವಿಸುತ್ತಾ  ಮಕ್ಕಳಲ್ಲಿ ನಿರಾಸೆಯನ್ನೇ ಮೂಡಿಸಿರುವುದಕ್ಕೆ ಇಲ್ಲಿನ ಆಡಳಿತ ವ್ಯವಸ್ಥೆಯಿಂದ ಹೇಸಿಗೆ ಉಂಟಾಗುತ್ತಿದೆ ಎಂಬುದು ಗ್ರಾಮದ ಪ್ರಮುಖರು ಕೂಡ ಆಕ್ರೋಷ ಪಡುವಂತಾಗಿದೆ.

ಸದರಿ ಶಾಲೆಗೆ ಕನಿಷ್ಠ ಐದಾರು ಶಿಕ್ಷಕರ ಅಗತ್ಯ ಇರುವುದರಿಂದ ಕೊರತೆ ಕೂಡಲೇ ನೀಗಿಸಬೇಕು. ಇದ್ದಂಥ ಮೂರು ಜನ ಶಿಕ್ಷಕರಲ್ಲಿ ಕೆಲವರು ಆಗಾಗ ಗೈರು ಹಾಜರಾಗುತ್ತಿರುವುದು ಸಹ ಕಂಡು ಬರುವಂತಿದ್ದರೂ ಯಾರೂ ಪ್ರಶ್ನಿಸದಂತಾಗಿದೆ.

ಅನುಮತಿ ಪಡೆಯದೇ ಯಾವುದೇ ಸಭೆ, ಸಮಾರಂಭ, ಸಂಘ ಸಂಸ್ಥೆಗಳಲ್ಲಿ ತೊಡಗಿಸಿಕೊಳ್ಳುವ ಶಿಕ್ಷಕರಿಗೆ ಮುಖ್ಯ ಗುರುಗಳಿಲ್ಲದ ಕಾರಣ ಕೇಳದಂತಾಗಿದೆ. ಶಾಲಾ ಮಕ್ಕಳಿಗೆ ನ್ಯಾಯಯುತವಾಗಿ ಬೋಧನೆ ಮಾಡುವವರ ಅಗತ್ಯವಿದೆ ಎಂಬುದು ಗ್ರಾಮಸ್ಥರ ಆರೋಪವಾಗಿದೆ.

ಮಕ್ಕಳ ವ್ಯಕ್ತಿತ್ವ ವಿಕಾಸದತ್ತ ಗಮನ ಹರಿಸಿ ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂಥ ವಾತಾವರಣ ಸೖಷ್ಟಿಯಾಗಬೇಕು.  ಹಿಂದುಳಿದ ಗ್ರಾಮಗಳೆಂಬ ಹಣೆಪಟ್ಟಿ ಅಂಟಿಕೊಂಡಿರುವ ಗ್ರಾಮಗಳಿಗೆ ಸಕಾ೯ರ ಮೊದಲ ಅಧ್ಯತೆಯನ್ನು ನೀಡಿ ಇಲ್ಲಿರುವ ಮೂಲಭೂತ ಸೌಲಭ್ಯಗಳನ್ನು ಒದಗಿಸಿಕೊಡುವಲ್ಲಿ ಆಸಕ್ತಿ ವಹಿಸಬೇಕು ಎಂಬ ಒತ್ತಾಯ ಕೇಳಿ ಬರುತ್ತಿವೆ.

ಚಿಗುರಿನಲ್ಲೇ ಅರಳಬೇಕಾದ ಮಕ್ಕಳ ಭವಿಷ್ಯಕ್ಕೆ ಕರಾಳ ದಿನಗಳನ್ನು ಎದುರಾಗದಂತೆ ಶಿಕ್ಷಣ ಇಲಾಖೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು, ಗಡಿ ಗ್ರಾಮಗಳಲ್ಲಿ ಮರಾಠಿ ಪ್ರಭಾವ ಹೆಚ್ಚಿರುವ ಕಾರಣ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಕನ್ನಡ ಶಿಕ್ಷಕರಿಲ್ಲದೇ ಪರದಾಡುವಂಥ ಚಿಂತಾಜನಕ ಸ್ಥಿತಿ ಗಂಭೀರವಾಗಿ ಪರಿಗಣಿಸಬೇಕು ಎಂಬುದ್ದಾಗಿದೆ.

ಗಡಿ ಗ್ರಾಮಗಳಾದ ಆಲಗೂಡ, ಭೋಸಗಾ, ಲಾಡವಂತಿ, ಉಜಳಂಬ, ಚಿಟ್ಟಾ, ಕೋಹಿನೂರು, ಎಕಂಬಾ, ಗಿಲಗಿಲಿ ಸೇರಿದಂತೆ ಮುಂತಾದ ಗ್ರಾಮಗಳಲ್ಲಿ ಮರಾಠಿ ಭಾಷಿಕರು ಕನ್ನಡ ಶಿಕ್ಷಣ ಕಲಿಯಬೇಕೆಂಬ ಮಹತ್ವಕಾಂಕ್ಷೆ ಹೊಂದಿದ್ದಾರೆ. ಅವರಿಗೆಲ್ಲ  ಶಿಕ್ಷಣ ಸಿಗದೇ ವಂಚಿತರಾಗುತ್ತಿದ್ದಾರೆ. ಉತ್ತಮ ಕನ್ನಡ ಬೋಧಕರಿಲ್ಲದೇ ಅನೇಕ ಶಾಲೆಗಳಲ್ಲಿ ಕನ್ನಡವೆಂಬುದು ಕನಸಿನ ಮಾತಾಗಿದೆ.

ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಎದುರು ಕಳೆದ ವಷ೯ ಶಾಲಾ ಮಕ್ಕಳು, ಪಾಲಕ, ಪೋಷಕರು, ಗ್ರಾಮಸ್ಥರಿಂದ ಶಿಕ್ಷಕರ ಕೊರತೆ ಸೇರಿದಂತೆ ಮೂಲಭೂತ ಸೌಲಭ್ಯಗಳಿಗಾಗಿ ಆಗ್ರಹಿಸಿ ರಸ್ತೆ ತಡೆ ನಡೆಸಿ, ಪ್ರತಿಭಟನೆ ಮಾಡಿದರೂ ಇಂದಿಗೂ ಇತ್ಯಥ೯ಗೊಳ್ಳದ ಸಮಸ್ಯೆ ಮತ್ತೆ ಭುಗಿಲೇಳುವ ಮುನ್ನ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಾಗಿದೆ.

ಕುಡಿಯುವ ನೀರಿಗಾಗಿ ಪರದಾಟ


 ಸರತಿಯಲ್ಲಿ ನೀರಿಗಾಗಿ ಖಾಲಿ ಕೊಡಗಳು

ಕುಡಿಯುವ ನೀರಿಗೆ ಎದ್ದಿರುವ ಭೀಕರ ಸಮಸ್ಯೆಗೆ ಹಿಡಿದ ಕನ್ನಡಿಯಂತಿರುವ ಖಾಲಿ ಕೊಡಗಳು.
 

ಕೋಹಿನೂರು ವಾಡಿಯಲ್ಲಿ ಕುಡಿಯುವ ನೀರಿಗಾಗಿ ಪರದಾಟ 

ಬಸವಕಲ್ಯಾಣ, ಜೂ. 9

ತಾಲೂಕಿನ ವಿವಿಧ ಗ್ರಾಮಗಳಲ್ಲಿ ಉದ್ಭವಿಸಿರುವ ಕುಡಿಯುವ ನೀರಿನ ಕೊರತೆಯಿಂದ ಜನಜೀವನ ಹಾಹಾಕಾರ ಎದುರಿಸುತಿದ್ದರೂ ಸಂಬಂಧಿಸಿದ ಗ್ರಾಮ ಪಂಚಾಯತ್್ ಅಧಿಕಾರಿಗಳು ಇತ್ತ ಗಮನ ಹರಿಸದೇ ಇರುವುದು ಜನ ಸಂಕಷ್ಟಕ್ಕೆ ಸಿಲುಕಿದಂತಾಗಿದೆ.

ಕೆಲವು ಗ್ರಾಮಗಳಲ್ಲಿ ಟ್ಯಾಂಕರ್್ಗಳಿಂದ ನೀರು ತರಿಸಿದರೂ ನೀರು ಸರಬರಾಜಿಗೆ ಸರಿಯಾದ ಸಮಯಕ್ಕೆ ಕರೆಂಟ್್ ಇರುವುದಿಲ್ಲ. ಕೋಹಿನೂರು ವಾಡಿಗಳಂಥ ಗ್ರಾಮಗಳಲ್ಲಿ ವಿದ್ಯುತ್್ ಸಂಪಕ೯ ಕಡಿತವಾಗಿರುವುದರಿಂದ ಸಮಪ೯ಕವಾದ ವಿದ್ಯುತ್್ ಇಲ್ಲದೇ ಪರದಾಡುವಂಥ ಸ್ಥಿತಿ ಎದುರಾಗಿದೆ.

ಇನ್ನೂ ಕೆಲವು ಗ್ರಾಮಗಳಲ್ಲಿ ಬೋರವೆಲ್್ಗಳಿದ್ದರೂ ಕೆಟ್ಟು ಹೋಗಿವೆ. ಕೊಳವೆ ಬಾವಿಗಳಲ್ಲಿನ ನೀರು ಬತ್ತಿ ಹೋಗಿರುವುದರಿಂದ ಟ್ಯಾಂಕರ್್ಗಳಿಂದ ತರಿಸುವ ನೀರಿಗಾಗಿ ನೂಕುನುಗ್ಗಲು ಶುರುವಾಗುತ್ತದೆ. ಸರದಿಯ ಪ್ರಕಾರ ನಾಲ್ಕಾರು ಕೊಡ ನೀರು ಸಿಗುವುದೇ ದುಸ್ಥರವೆನ್ನುವಂತಾಗಿದೆ ಎನ್ನುವ ಮಹಿಳೆಯರು ತಮ್ಮ ಅಳಲನ್ನು ತೋಡಿಕೊಳ್ಳುವಂತಾಗಿದೆ.

ರಾಮತೀಥ೯ವಾಡಿ, ಲಾಡವಂತಿ, ಅಲಗೂಡ, ಭೋಸಗಾ, ಗುತ್ತಿ, ಮಿರಕಲ್, ಮಂಠಾಳ, ಸೇರಿದಂತೆ ಹಲವು ಗ್ರಾಮಗಳಲ್ಲಿ ಸಹ ಕುಡಿಯುವ ನೀರಿನ ತಾತ್ಸಾರ ಎದುರಿಸುತ್ತಿರುವದಕ್ಕೆ ಸಂಬಂಧಪಟ್ಟ ತಾಲೂಕಾ ಪಂಚಾಯತ್್ ಇಲಾಖೆ ಅಧಿಕಾರಿಗಳು ಸಮಸ್ಯೆಗಳಿರುವ ಆಯಾ ಗ್ರಾಮಗಳಿಗೆ ಭೇಟಿ ನೀಡಿ, ಸಮಸ್ಯೆ ಇತ್ಯಥ೯ಗೊಳಿಸಲು ಸೂಚಿಸಬೇಕೆಂಬ ಒತ್ತಾಯ ಗ್ರಾಮಸ್ಥರದ್ದಾಗಿದೆ.

ತಮ್ಮ ಮನಸ್ಸಿಗೆ ಬಂದಂತೆ ನಡೆದುಕೊಳ್ಳುತ್ತಿರುವ ಹಲವು ಗ್ರಾಮ ಪಂಚಾಯತ್್ ಸಿಬ್ಬಂದಿಗಳು ನೀರು ಬಿಡಲು ತಾರತಮ್ಯ ಧೋರಣೆಯನ್ನು ಅನುಸರಿಸುತ್ತಿದ್ದಾರೆ. ಪಂಚಾಯತ್್ ಸದಸ್ಯರಿರುವ ಮನೆಗಳಿಗೆ ಮಾತ್ರ ಹೆಚ್ಚಿನ ನೀರು ಸರಬರಾಜಿಗೆ ಪ್ರತ್ಯೇಕ ಪೈಪ್್ಲೈನ್ ಮಾಡಲಾಗಿದೆ ಎಂಬ ದೂರುಗಳು ಕೇಳಿ ಬರುವಂತಾಗಿದೆ.

ಜನ ಸಾಮಾನ್ಯರಿಗೆ ಸಿಗದ ಸೌಲಭ್ಯ ಅವರಿಗೆ ಮಾತ್ರ ಸಿಗುತ್ತಿರುವುದು ಇದ್ಯಾವ ನ್ಯಾಯ ಎನ್ನುವಂತಾಗಿದ್ದು, ಅವರಿಗೊಂದು ನ್ಯಾಯ ನಮಗೊಂದು ನ್ಯಾಯ ಯಾಕೆ ಎನ್ನುವ ಜನಸಾಮಾನ್ಯರ ಮಾತಿಗೆ ಬೆಲೆ ಕೊಡದ ಗ್ರಾಪಂ ಅಧ್ಯಕ್ಷರು, ಸದಸ್ಯರು ತಾವೇ ಎಲ್ಲದಕ್ಕೂ ಸವಾ೯ಧಿಕಾರಿಯೆನ್ನುವಂತೆ ವತಿ೯ಸುತ್ತಿದ್ದಾರೆ.

ಬಸವಕಲ್ಯಾಣ ತಾಲೂಕಿನ ಅನೇಕ ಗ್ರಾಮಗಳ ಸಮಸ್ಯೆ ಇದೇ ಆಗಿರುವುದರಿಂದ ಕೂಡಲೇ ಮೇಲಧಿಕಾರಿಗಳು ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕಾದ್ದು ಕೂಡ ಅಷ್ಟೇ ಅವಶ್ಯವಾಗಿದೆ. ತಾಲೂಕು ಕೇಂದ್ರದಿಂದ ಹತ್ತಾರು ಕಿ.ಮೀ ದೂರವಿರುವ ಗ್ರಾಮಗಳಲ್ಲಿನ ಕುಡಿಯುವ ನೀರಿನ ಸಮಸ್ಯೆ ಬಗೆ ಹರಿಸಬೇಕೆಂದು ಅನೇಕ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಮಂಗಳವಾರ, ಜೂನ್ 5, 2012

ಬಸವಕಲ್ಯಾಣಃ ಬಸ್ ನಿಲ್ದಾಣದಲ್ಲಿ ಅವ್ಯವಸ್ಥೆಯ ಆಗರ


ಬಸವಕಲ್ಯಾಣ ಪಟ್ಟಣದ ಪ್ರಮುಕ ಬಸ್್ ನಿಲ್ದಾಣ ದಲ್ಲಿ ಈಶಾನ್ಯ ಸಾರಿಗೆ ಸಂಸ್ಥೆಯ ಬಸ್ ಗಳು ಮುಖ್ಯರಸ್ತೆಯಿಂದಲೇ ತಿರುವು ಪಡೆದು ಬಂದು ನಿಲ್ದಾಣದಲ್ಲಿ ಆಶ್ರಯ ಪಡೆಯಬೇಕಾದ ಅನಿವಾಯ೯ತೆ.

ವೀರಣ್ಣ ಮಂಠಾಳಕರ್

ಬಸವಕಲ್ಯಾಣಃ  ನಗರದ ಹೊರವಲಯದಲ್ಲಿರುವ ಪ್ರಮುಖ ಬಸ್ ನಿಲ್ದಾಣದಿಂದ ಮುಚಳಂಬ, ಗೋಟಾ೯ ಹಾಗೂ ಹುಲಸೂರು ಮಾಗ೯ದಿಂದ ಭಾಲ್ಕಿ ಕಡೆ ಸಾಗುವ ಈಶಾನ್ಯ ಸಾರಿಗೆ ಸಂಸ್ಥೆ ವಾಹನಗಳಿಗೆ ಸೂಕ್ತ ನಿಲ್ದಾಣವಿಲ್ಲದೇ ಪರದಾಡುವಂತಿದ್ದರೂ ಸಂಬಂಧಪಟ್ಟವರು ಪಯಾ೯ಯ ವ್ಯವಸ್ಥೆಯನ್ನು ಮಾಡದೇ ಕಣ್ಮುಚ್ಚಿ ಕುಳಿತಿರುವುದು ವಿಪಯಾ೯ಸವಾಗಿದೆ.

ಮುಖ್ಯ ರಸ್ತೆಗೆ ಅಂಟಿಕೊಂಡಿರುವ ಸಂಬಂಧಿಸಿದ ಮಾಗ೯ಗಳಿಗೆ ಸಾಗಬೇಕಾದ ಸಕಾ೯ರಿ ವಾಹನಗಳು ಜನದಟ್ಟಣೆಯ ರಸ್ತೆಯ ಮೇಲಿಂದಲೇ ತಿರುವು ಪಡೆಯಬೇಕಾಗುತ್ತಿದೆ. ಇದರಿಂದ ಪ್ರಯಾಣಿಕರು ರಸ್ತೆ ದಾಟುವಾಗ ಪ್ರಾಣ ಭಯದಿಂದ ನಡೆದಾಡುವ ಸ್ಥಿತಿ ಯಾರೂ ಕೇಳದಂತಾಗಿದೆ.

ಹುಲಸೂರು ಮಾಗ೯ದ ಈ ಮುಖ್ಯರಸ್ತೆಯು ಎರಡೂ ಬದಿಯಿಂದ ಬರುವ ವಾಹನಗಳಿಗೆ ನಿಲ್ದಾಣಕ್ಕೆ ಬರುವ ಸಾರಿಗೆ ಸಂಸ್ಥೆಯ ಬಸ್್ಗಳಿಂದ ತೊದರೆಯುಂಟು ಮಾಡುವುದಲ್ಲದೇ ಇಲ್ಲಿಂದ ಓಡಾಡುವ ಪ್ರಯಾಣಿಕರು ಜೀವಭಯದಿಂದ ಚಲಿಸಬೇಕಾದ ಪರಿಸ್ಥಿತಿ ಸಂಬಂಧಪಟ್ಟ ಇಲಾಖೆಯವರು ಗಮನಿಸಿದಂತಿಲ್ಲ.

ಸುಸಜ್ಜಿತವಾದ ಬಸ್್ ನಿಲ್ದಾಣ ನಗರದಲ್ಲಿ ಇದೆ ಎಂಬ ನೆಮ್ಮದಿ ಒಂದೆಡೆ ಇದ್ದರೆ, ಇದೇ ಬಸ್ ನಿಲ್ದಾಣದ ಹಿಂದೆ ಹುಲಸೂರು ಮುಖ್ಯ ರಸ್ತೆಗೆ ಅಂಟಿಕೊಂಡಿರುವ ನಿಲ್ದಾಣದಲ್ಲಿ ಗೋಟಾ೯, ಮುಚಳಂಬ, ಹಾಗೂ ಹುಲಸೂರು ಮಾಗ೯ದ ಭಾಲ್ಕಿ ಕಡೆ ಸಾಗುವ ಸಾರಿಗೆ ವಾಹನಗಳು ಕಿಕ್ಕಿರಿದ ಪ್ರಯಾಣಿಕರನ್ನು ತುಂಬಿಕೊಂಡೇ ವಿಶ್ರಾಂತಿ ಪಡೆಯಲು ಆಗಮಿಸುತ್ತವೆ.

ಅಧೀಕವಾದ ವಾಹನ ಸಂಚಾರವಿರುವ ಈ ಮುಖ್ಯ ರಸ್ತೆಯ ಮೇಲೆ ಬಸ್ ನಿಲ್ದಾಣಕ್ಕೆ ಬಂದು ಹೋಗುವ ವಾಹನಗಳಿಗೆ ಬೇರೆ ಸುರಕ್ಷಿತವಾಗಿ ನಿಲ್ಲಲು ಸ್ಥಳವೇ ಇಲ್ಲದಂತಾಗಿ ಪರದಾಡಬೇಕಾಗಿದೆ. ಇಲ್ಲಿ ಇಲಾಖೆಯ ನಿಲ೯ಕ್ಷತನವೂ ಗೋಚರಿಸುವುದರಿಂದ ಪಯಾ೯ಯ ವ್ಯವಸ್ಥೆಗಾಗಿ ಸಂಬಂಧಪಟ್ಟವರಿಗೆ ಮನವಿ ಮಾಡುವುದಕ್ಕೂ ಮೀನಾಮೇಷ ಏಣಿಸುವಂತಾಗಿದೆ.

ಯಾವುದೇ ಸಂದಭ೯ದಲ್ಲಿ ಮುಖ್ಯರಸ್ತೆ ಮೇಲೆ ಓಡಾಡುವ ಹುಮನಾಬಾದ ಮಾಗ೯ದ ವಾಹನಗಳು ಮತ್ತು ಭಾಲ್ಕಿ ಕಡೆಯಿಂದ ಬರುವ ವಾಹನಗಳು ವೇಗದ ನಿಯಂತ್ರಣವನ್ನು ತಪ್ಪಿದರೆ ಮುಗಿಯಿತು. ಪ್ರಾಣಪಾಯ ಕಟ್ಟಿಟ್ಟಂತಾಗಿದೆ ಎನ್ನುತ್ತಾರೆ ವಿವಿಧೆಡೆ ಗ್ರಾಮಗಳಿಗೆ ಹೋಗುವ ಅನೇಕ ಪ್ರಯಾಣಿಕರು.

ಈಶಾನ್ಯ ಸಾರಿಗೆ ಸಂಸ್ಥೆಯ ಬಸ್ ಚಾಲಕರ ನಿಯಂತ್ರಣ ತಪ್ಪಿದರಂತೂ ಭಾರಿ ಪ್ರಮಾಣದ ಅಪಘಾತವಾಗುವುದರಲ್ಲಿ ಸಂಧೇಹವಿಲ್ಲ. ನಿತ್ಯವೂ ಇಲ್ಲಿಂದ ಪ್ರಯಾಣಿಸುವ ಪ್ರಯಾಣಿಕರ ಅಳಲನ್ನು ಯಾರೂ ಕೇಳಿಸಿಕೊಳ್ಳದಂತಾಗಿದೆ. ಸಂಬಂಧಪಟ್ಟ ಜನಪ್ರತಿನಿಧಿಗಳಿಗೆ ಕೇಳಿಸುತ್ತಿಲ್ಲ ಎಂಬ ಆರೋಪಗಳು ಕೇಳಿ ಬರುತ್ತವೆ.

ನಿಲ೯ಕ್ಷತನಕ್ಕೆ ಒಳಗಾಗಿರುವ ಕಾರಣ ಸಣ್ಣಪುಟ್ಟ ಅಪಘಾತಗಳು ಸಂಭವಿಸಿರುವುದಂತೂ ಮರೆಯಲಾಗದು. ಇದೇ ಬಸ್ ನಿಲ್ದಾಣದ ಹತ್ತಿರವೇ ಖಾಸಗಿ ವಾಹನಗಳ ಸಂಖ್ಯೆ ಕಡಿಮೆಯೇನು ಇಲ್ಲವೆಂಬಂತೆ ರಾಜಾರೋಷವಾಗಿ ಓಡಾಡುತ್ತವೆ. ಆದ್ದರಿಂದ ಪೊಲೀಸ್್ ಇಲಾಖೆ ಸಹ ಇತ್ತ ಗಮನ ಹರಿಸಬೇಕಾಗಿದೆ ಎನ್ನುತ್ತಾರೆ ಪ್ರಮುಖರು.

ಜನದಟ್ಟಣೆಯ ಪ್ರದೇಶದಲ್ಲಿ ಕೂಡಿರುವ ಪ್ರಮುಖ ಬಸ್್ ನಿಲ್ದಾಣದಲ್ಲಿ  ಆಟೋಗಳ ಕಿರಿಕಿರಿಯಂತೂ ಕೇಳುವವರೇ ಇಲ್ಲ. ಸಾರಿಗೆ ವಾಹನಗಳು ಬಂದು ನಿಲ್ಲುತಿದ್ದಂತೆ ಪ್ರಯಾಣಿಕರನ್ನು ಇಳಿಯುವಾಗಲೇ ಬಾಗಿಲಲ್ಲೇ ಬಂದು ನಿಲ್ಲುವ ಆಟೋಗಳಿಂದ ಅಪಾಯ ಖಚಿತ ಎನ್ನುವಂತಾಗಿದೆ.

ಸಾರಿಗೆ ಸಂಸ್ಥೆಯ ಅಧಿಕಾರಿಗಳು ದಿವ್ಯ ನಿಲ೯ಕ್ಷತನದಿಂದ ಕಾಲ ಕಳೆಯದೇ, ಪ್ರಯಾಣಿಕರು ತಮ್ಮ ಜೀವ ಮುಷ್ಠಿಯಲ್ಲಿ ಹಿಡಿದುಕೊಂಡು ಓಡಾಡುವಂಥ ಪರಿಸ್ಥಿತಿ ಎದುರಾಗಿರುವುದನ್ನು ಮನಗಾಣಬೇಕು ಎಂಬುದು ಸಾವ೯ಜನಿಕರ ಅಭಿಪ್ರಾಯವಾಗಿದೆ.

ಸಂಬಂಧಪಟ್ಟವರಲ್ಲಿ ಈ ಸಮಸ್ಯೆ ಕುರಿತು ಕೂಡಲೇ ಮನವಿಸಬೇಕಾದ್ದು ಇಲಾಖೆಯ ಕತ೯ವ್ಯ ಹೌದು.  ಮೇಲಿಂದ ಮೇಲೆ ನಗರ ಅಭಿವೖದ್ಧಿಯಲ್ಲಿ ಸಾಗುತ್ತಿದೆ ಎಂದು ಬೀಗಿಕೊಳ್ಳುವ  ಜನಪ್ರತಿನಿಧಿಗಳು ಇಂತಹ ಸಮಸ್ಯೆಗಳತ್ತ ಗಮನ ಹರಿಸಿ ಎಲ್ಲಾ ಜನಸಾಮಾನ್ಯರ ಕುಂದು ಕೊರತೆಗಳ ಆಶಯದಂತೆ ಸ್ಪಂಧಿಸುವಂತಾಗಲಿ ಎಂಬ ನಿರೀಕ್ಷೆಯಲ್ಲಿ ಪ್ರಯಾಣಿಕರಿದ್ದಾರೆ.

ಹಾಳು ಕೊಂಪೆಯಾಗಿರುವ ಹುಲಸೂರು ಬಸ್ ನಿಲ್ದಾಣ

 , ಕೆಲವು ವಷ೯ಗಳ ಹಿಂದೆ ಹುಲುಸೂರು ಮತಕ್ಷೇತ್ರವಾಗಿದ್ದ ಸಂದಭ೯ದಲ್ಲಿ ಗ್ರಾಮದ ಹೊರ ವಲಯದಲ್ಲಿ ಕಟ್ಟಲ್ಪಟ್ಟ ಬಸ್್ ನಿಲ್ದಾಣ ಬಳಕೆಗೆ ಬಾರದೇ ಹಾಳು ಕೊಂಪೆಯಾಗಿರುವುದು.

  ಬಸವಕಲ್ಯಾಣ ತಾಲೂಕಿನ ಹುಲಸೂರು ಗ್ರಾಮದಲ್ಲಿ ಎದುರಿಸುತ್ತಿರು ಪ್ರಯಾಣಿಕರಿಗೆ ಬಸ್್ ನಿಲ್ದಾಣದ ಕೊರತೆಯಿಂದಾಗಿ ಯಾವುದೇ ಕಟ್ಟಡವಿಲ್ಲದ ಮುಖ್ಯ ರಸ್ತೆಯ ಪಕ್ಕದ ಜಾಗದಲ್ಲಿ, ಪೊಲೀಸ್್ ಠಾಣೆ ಎದುರು ವಾಹನಗಳಿಗಾಗಿ ಕಾದು ನಿಂತಿರುವವರು ಹಾಗೂ ಖಾಸಗೀ ವಾಹನಗಳನ್ನು ಕಾಣಬಹುದು.

ವೀರಣ್ಣ ಮಂಠಾಳಕರ್

ಬಸವಕಲ್ಯಾಣ, ಜೂ. 3

ಬಸವಕಲ್ಯಾಣಃ ತಾಲೂಕಿನ ಹುಲಸೂರಿನಿಂದ ತಾಲೂಕಾ ಕೇಂದ್ರಗಳಿಗಾಗಲಿ ಇನ್ಯಾವುದೇ ಗ್ರಾಮಗಳಿಗೆ ತೆರಳಬೇಕಾದ ಪ್ರಯಾಣಿಕರಿಗೆ ಕನಿಷ್ಠ ಪಕ್ಷ ಕುಳಿತುಕೊಳ್ಳಲು ಆಸರೆ ಇಲ್ಲ. ಬಸ್್ ನಿಲ್ದಾಣವಿಲ್ಲದೇ ಪರದಾಡುವಂಥ ಸ್ಥಿತಿ ಹಲವು ವಷ೯ಗಳಿಂದ ಸಹ ಪ್ರಯಾಣಿಕರು ಎದುರಿಸುತಿದ್ದರೂ ಯಾರೂ ಕೇಳದಂತಾಗಿದೆ.

ಬಸ್್ ನಿಲ್ದಾಣದ ಸಮಸ್ಯೆ ಅನುಭವಿಸುತ್ತಿರುವ ಪ್ರಯಾಣಿಕರು ಜನಪ್ರತಿನಿಧಿಗಳ ಅರಿವಿಗೆ ಬರದೇ ಇರುವುದಕ್ಕೆ ಕಾರಣ ಗೊತ್ತಾಗುತ್ತಿಲ್ಲ. ಗ್ರಾಮದ ಹೊರವಲಯದಲ್ಲಿ ಹುಲಸೂರು ಮತಕ್ಷೇತ್ರವಾಗಿದ್ದ ಸಂದಭ೯ದಲ್ಲಿ ಕಟ್ಟಲ್ಪಟ್ಟ ಬಸ್್ ನಿಲ್ದಾಣವೊಂದು ಕೆಲಸಕ್ಕೆ ಬರದಂತಾಗಿದೆ. ಇದೀಗ ಅದು ಹಾಳು ಕೊಂಪೆಯಾಗಿ ರಾತ್ರಿ ಸಮಯದಲ್ಲಿ ಇಲ್ಲಿ ಏನೆಲ್ಲಾ ನಡೆಯುತ್ತದೆ ಎನ್ನಲು ಕಲ್ಪಿಸಿಕೊಳ್ಳಲು ಸಹ ಸಾಧ್ಯವಿಲ್ಲ ಎನ್ನಬಹುದು.

ಕೆಲವೇ ವಷ೯ಗಳ ಹಿಂದೆ ಕಟ್ಟಲ್ಪಟ್ಟ ಬಸ್್ ನಿಲ್ದಾಣ ಹಾಳು ಕೊಂಪೆಯಾಗಿರುವುದು ಶಾಸಕರ ಗಮನಕ್ಕೆ ಬರದಿರುವುದಕ್ಕೆ ದುರಾದೖಷ್ವವೇ ಸರಿ. ಆದರೆ ಜನಪಯೋಗಿ ಕಾಯ೯ಕ್ಕೆ ಬಳಕೆಯಾಗುತ್ತಿಲ್ಲ ಎಂಬುದಕ್ಕೆ ನಿತ್ಯವೂ ಬಿಸಿಲಿರಲಿ, ಮಳೆ, ಗಾಳಿಗೆ ಮೈಯೊಡ್ಡಿ ನಿಲ್ಲುವಂಥ ವಾತಾವರಣ, ನೆರಳಿಗಾಗಿ ಪರಿತಪಿಸುವ ಮಕ್ಕಳು ಮಹಿಳೆಯರೇ ಇದಕ್ಕೆ ಸಾಕ್ಷಿಯಾಗಬಲ್ಲರು.

ಮುಖ್ಯ ರಸ್ತೆಯಲ್ಲಿರುವ ಪೊಲೀಸ್್ ಠಾಣೆಯ ಮುಂಭಾಗದಲ್ಲೇ ಜನ ನಿಂತುಕೊಳ್ಳಬೇಕಾಗಿದೆ. ಇಂತಹ ಸಂಕಷ್ಟದಲ್ಲಿರುವವರು ಅಕ್ಕಪಕ್ಕದಲ್ಲಿರುವ ಹೊಟೇಲ್್ಗಳಿಗೆ ನುಗ್ಗಿ ಒಂದಿಷ್ಟು ದಣಿವಾರಿಸಿಕೊಳ್ಳಲು ಸಹ ಹಣ ತೆತ್ತಬೇಕಾದ್ದು ನಿಜ. ತಾವು ಹೋಗಬೇಕಾದ ವಾಹನಗಳಿಗೆ ಬಸ್್ ನಿಲ್ದಾಣವಿಲ್ಲದೇ ಕಾದು ನಿಲ್ಲಬೇಕಾದ ಸ್ಥಿತಿ ಚಿಂತಾಜನಕವಾಗಿದೆ.

ಇಲ್ಲಿ ಬಂದು ಹೋಗುವ ಪ್ರಯಾಣಿಕರೆಲ್ಲಾ ಬೆವರಳಿಸಿಕೊಂಡೇ ಬಸ್್ ಹತ್ತಬೇಕು. ಯಾಕೆಂದರೆ ಯಾವುದೇ ನೆರಳಿನಾಸರೆ ಇಲ್ಲದೇ ಪ್ರಯಾಣಿಕರ ಗೋಳು ಯಾರೂ ಕೇಳದಂತಾಗಿದೆ. ಜನಪ್ರತಿನಿಧಿಗಳು ಈ ಸಮಸ್ಯೆ ಕುರಿತು ಗಂಭೀರವಾಗಿ ತೆಗೆದುಕೊಳ್ಳದೇ ಇರುವುದಕ್ಕೆ ಅನೇಕ ಹಿರಿಯ ಜೀವಿಗಳು ಆಕ್ರೋಷವನ್ನು ವ್ಯಕ್ತಪಡಿಸುತ್ತಾರೆ.

ಬಸವಕಲ್ಯಾಣ ಹಾಗೂ ಭಾಲ್ಕಿ ತಾಲೂಕು ಕೇಂದ್ರಗಳಿಂದ ಬಂದು ಹೋಗುವ ಈಶಾನ್ಯ ಸಾರಿಗೆ ಸಂಸ್ಥೆಯ ವಾಹನಗಳು ಮತ್ತು ಖಾಸಗೀ ವಾಹನಗಳು ಇದೇ ಹುಲಸೂರಿನ ಪೊಲೀಸ್್ ಠಾಣೆ ಎದುರಿನ ಬಸ್್ ನಿಲ್ದಾಣದಲ್ಲಿ ಅಂದರೆ, ಅಧಿಕೖತವಾಗಿ ಕಟ್ಟಡವಿಲ್ಲದಂಥ ಮುಖ್ಯ ರಸ್ತೆಯ ಪಕ್ಕದ ಬಸ್್ ನಿಲ್ದಾಣದಲ್ಲಿ ವಾಹನಗಳೆಲ್ಲ ಬಂದು ಸೇರುತ್ತವೆ.

ಜನಸಾಮಾನ್ಯರ ಮೂಲ ಸೌಲಭ್ಯಗಳತ್ತ ಚಿಂತನೆ ನಡೆಸುವ ನಾಯಕರುಗಳ ಕೊರತೆ ಬಸವಕಲ್ಯಾಣ ತಾಲೂಕಿನಲ್ಲಿ ಪ್ರಮುಖವಾಗಿ ಎದ್ದು ಕಾಣುತ್ತಿರುವುದಕ್ಕೆ ಮೇಲಿಂದ ಮೇಲೆ ಕೇಳಿ ಬರುತ್ತಲೇ ಇರುವ ಸಾವ೯ಜನಿಕರ ಅಳಲು ಇದಾಗಿದೆ. ಮಾಧ್ಯಮಗಳ ಮೂಲಕವಾದರೂ ಹೇಳಿಕೊಳ್ಳುವಂಥ ಅನಿವಾಯ೯ತೆ ಎದುರಾಗಿದೆ ಎಂದು ಗ್ರಾಮದ ಪ್ರಮುಖರು ದೂರುತ್ತಾರೆ.

ಪ್ರಯಾಣಿಕರಿಗೆ ಅನುಕೂಲವಾಗುವಂಥ ಬಸ್್ ನಿಲ್ದಾಣದ ನಿಮಾ೯ಣ ಸಾಧ್ಯವಾಗುವುದೆ ಎಂದು ಕಾದು ನೋಡುವಂತಾಗಿದೆ. ಚುನಾವಣೆಗಳು ಬಂದಾಗಲಷ್ಟೇ ನೆನಪಾಗುವ ನಾವು ಸಾವ೯ಜನಿಕರ ಮೂಲ ಸೌಲಭ್ಯಗಳ ಕೊರತೆಗಳಿಗೆ ಸ್ಪಂಧಿಸುವ ನಾಯಕರುಗಳ ಸ್ಪಂಧನೆಗೆ ಎದುರು ನೋಡುವಂತಾಗಿದೆ ಎನ್ನುತ್ತಾರೆ ಸಮಾಜ ಚಿಂತಕರು.

ಇನ್ನೊಂದು ಪ್ರಮುಖವಾದ ಸಂಗತಿಯೆಂದರೆ, ಹುಲಸೂರು ಗ್ರಾಮದಲ್ಲಿ ಪ್ರತಿ ವಷ೯ ನಡೆಯುವ ಗುರು ಬಸವೇಶ್ವರ ಸಂಸ್ಥಾನ ಮಠದ ಜಾತ್ರಾ ಮಹೋತ್ಸವದಲ್ಲಿ ಹೆಚ್ಚಿನ ಸಕಾ೯ರಿ ವಾಹನಗಳು ಬಿಟ್ಟರೆ ಬೇರೆ ದಿನಗಳಲ್ಲಿ ಖಾಸಗೀ ವಾಹನಗಳ ದಬಾ೯ರಿನಲ್ಲೇ ನಿತ್ಯವೂ ಪ್ರಯಾಣಿಸಬೇಕಾದ ಅನಿವಾಯ೯ತೆ ಇಲ್ಲಿನ ಜನಸಾಮಾನ್ಯರದ್ದಾಗಿದೆ

ಹುಲಸೂರಿನಿಂದ ಬೇರೆ ಮಾಗ೯ಗಳಿಗೆ ನಿಗ೯ಮಿಸಲು ಖಾಸಗೀ ವಾಹನಗಳ ಮೊರೆ ಹೊಕ್ಕದೇ ಬೇರೆ ಗತಿ ಇಲ್ಲ. ಒಂದೆರಡು ಸಕಾ೯ರಿ ಬಸ್್ ಹೊರತುಪಡಿಸಿ ಮ್ಯಾಕ್ಸಿಕ್ಯಾಬ್್ ಖಾಸಗೀ ವಾಹನಗಳೇ ಇಲ್ಲಿಂದ ಸಂಚರಿಸುತ್ತವೆ ಎಂಬ ದೂರುಗಳಿದ್ದರೂ ಸಕಾ೯ರಿ ವಾಹನಗಳ ಸೌಲಭ್ಯ ಅಷ್ಟಕಷ್ಟೇ ಎನ್ನಬಹುದು.

ಗ್ರಾಮಕ್ಕೆ ಸಕಾ೯ರಿ ವಾಹನಗಳಿಲ್ಲ ಎಂಬ ಕಾರಣಕ್ಕೇನಾದರೂ ಬಸ್್ ನಿಲ್ದಾಣದ ಅವಶ್ಯಕತೆಗೆ ಕಣ್ಮುಚ್ಚಿ ಕುಳಿತ್ತಿದ್ದಾರೆಯೇ ಎಂಬ ಅನುಮಾನಗಳು ಕಾಡುತ್ತವೆ. ಸಂಬಂಧಪಟ್ಟವರು ಇದಕ್ಕೇನಂತಾರೆ ಎಂಬುದು ಸಹ ಕಾದು ನೋಡಬೇಕಾಗಿದೆ. ಅನೇಕ ಅನುಮಾನಗಳಿಗೆ ಎಡೆಮಾಡಿಕೊಡುತ್ತಿರುವ ಇಲ್ಲಿನ ಮೂಲ ಬಸ್್ ನಿಲ್ದಾಣದ ಸಮಸ್ಯೆ ಬಗೆಹರಿಸುವವರೇ ಎಂದುನಿರೀಕ್ಷಿಸೋಣ.


 ರಸ್ತೆ ಅಗಲೀಕರಣ ನಡೆಯುತ್ತಿರುವುದನ್ನು ಕುತೂಹಲದಿಂದ ವೀಕ್ಷಿಸುತ್ತಿರು ಜನ



 ದಕ್ಷ ಅಧಿಕಾರಿಗಳ ಕೊರತೆ-ಮಂದಗತಿಯಲ್ಲಿ ಸಾಗುತ್ತಿರುವ ರಸ್ತೆ ಅಗಲೀಕರಣ


ಬಸವಕಲ್ಯಾಣ, ಜೂ. 2

ನಗರದೆಲ್ಲೆಡೆ ರಸ್ತೆ ಅಗಲೀಕರಣ ಹಾಗೂ ಸೌಂದಯೀ೯ಕರಣಕ್ಕಾಗಿ ಕಳೆದ ಮೂರು ದಿನಗಳಿಂದ ಕೇಳಿ ಬರುತ್ತಿರುವ ಬುಲ್ಡೋಜರ್್ ಶಬ್ಧಗಳು ಕೇಳಿಯೇ ಕೆಲವರು ಬೆಚ್ಚಿ ಬಿದ್ದಿದ್ದಾರೆ. ಇನ್ನೂ ಕೆಲವರಿಗೆ ಕಟ್ಟಡಗಳು ಉರುಳಿ ಬೀಳುತ್ತಿರುವುದನ್ನು ನೋಡಿ ದುಸ್ವಪ್ನವಾಗಿ ಕಾಡುತ್ತಿರುವುದರಿಂದ ಸ್ಥಳೀಯ ಅಧಿಕಾರಿಗಳು ಎಚ್ಚೆತ್ತುಕೊಂಡು ಚುರುಕಾದ ಕಾಮಗಾರಿ ನಡೆಸುತ್ತಿರುವುದು ಕಂಡು ಬರುತ್ತಿದೆ.

ಬಸವಕಲ್ಯಾಣ ನಗರಕ್ಕೆ ದಕ್ಷ ಆಡಳಿತದ ಅಧಿಕಾರಿಯೊಬ್ಬರ ಅವಶ್ಯಕತೆ ಇದ್ದು, ಅಂಥವರನ್ನು ಬರಮಾಡಿಕೊಳ್ಳುವ ನಿರೀಕ್ಷೆಯಲ್ಲಿದಂತೆ ಅಭಿವೖದ್ಧಿ ಬಯಸುವವರು ಖುಷಿಯಲ್ಲಿದ್ದರೆ, ಇನ್ನೂ ಕೆಲವರಿಗೆ ದಕ್ಷ ಆಡಳಿತಾಧಿಕಾರಿಯ ಆಗಮನದಿಂದ ಇರಿಸುಮುರುಸಾಗಿದೆ. ಅನಧಿಕೖತ ಕಟ್ಟಡ ವ್ಯಾಪಾರಿಗಳಿಗೆ ದಿಕ್ಕೆ ತೋಚದಂತಾಗಿದೆ ಎನ್ನುತ್ತಾರೆ ಸ್ಥಳೀಯರು.

12 ನೇ ಶತಮಾನದ ಶರಣರ ನೆಲೆಬೀಡಾದ ಕಲ್ಯಾಣದಲ್ಲಿ ಕಾಯ೯ಕ್ಷೇತ್ರವಾಗಿಸಿಕೊಂಡಿದ್ದ ಎಲ್ಲಾ ಶರಣರ ಸ್ಮಾರಕಗಳ ಜೀಣೋ೯ದ್ಧಾರ ಕಾಯ೯ ಭರದಿಂದಲೇ ನಡೆಯುತ್ತಿವೆ ಎನ್ನುವಂತಿದ್ದರೂ ಸಹ  ಕೆಲವು ಕಾಮಗಾರಿಗಳು ಮಂದಗತಿಯಲ್ಲಿ ಸಾಗುತ್ತಿವೆ. ಇನ್ನೂ ಕೆಲವು ಅಭಿವೖದ್ಧಿ ಪ್ರಾಧಿಕಾರದ ಕಾಮಗಾರಿಗಳಿಗೆ ಗ್ರಹಣ ಹಿಡಿದಂತಾಗಿರುವುದಂತೂ ನಿಜ.

ಯಾಕೆಂದರೆ ಕಳೆದ ವಷ೯ದಿಂದ ಬಸವಕಲ್ಯಾಣ ಅಭಿವೖದ್ಧಿ ಪ್ರಾಧಿಕಾರದ ಸಹಾಯಕ ಆಯುಕ್ತರ ಹುದ್ದೆ ಖಾಲಿಯೇ ಇರುವುದರಿಂದ ಇಲ್ಲಿ ಇದೀಗ ಕೆಲವು ತಿಂಗಳಿಂದ ತಹಸೀಲ್್ ಕಚೇರಿಯ ಸಹಾಯಕ ಆಯುಕ್ತ ಎಚ್್. ಪ್ರಸನ್ನ ಅವರೇ ಕಾಯ೯ಭಾರ ವಹಿಸಿಕೊಂಡಿದ್ದಾರೆ.

ನಗರಸಭೆಯ ಜವಾಬ್ದಾರಿಯೂ ಅವರ ತಲೆಯ ಮೇಲೆ ಇರುವುದರಿಂದ ಯಾವುದೇ ಕೆಲಸಗಳು ಮಂದಗತಿಯಲ್ಲಿ ಸಾಗುತ್ತಿರುವುದಕ್ಕೆ ಪ್ರಮುಖ ಕಾರಣವಾಗಿದೆ. ಒಬ್ಬರಿಂದಲೇ ಇಷ್ಟೆಲ್ಲಾ ಕಾಯ೯ಭಾರ ನಿಭಾಯಿಸಿಕೊಂಡು ಹೋಗುವುದು ಮತ್ತು ಎಲ್ಲಾ ಇಲಾಖೆಗಳ ಕಾಮಗಾರಿಗಳು ಚುರುಕಾಗಿ ನಡೆಸಲು ಸ್ವಲ್ಪ ಕಷ್ಟವಾಗುತ್ತದೆ ಎನ್ನುವಂತಾಗಿದೆ.

ಹೀಗಾಗಿ ಜನರ ಕನಸಿನ ಕಲ್ಪನೆಯಾದ ಐತಿಹಾಸಿಕ ಬಸವಕಲ್ಯಾಣ ಪಟ್ಟಣವನ್ನು ಪ್ರವಾಸಿ ತಾಣವಾಗಿ ರೂಪುಗೊಳ್ಳುವುದು ಯಾವಾಗ ಎನ್ನುವಂತೆ ಜನ ಭಾರಿ ನಿರೀಕ್ಷೆಯಲ್ಲಿದ್ದಾರೆ. ಆದರೆ ಕೆಲವರಿಗದು ಬೇಕೇ ಇಲ್ಲ ಎನ್ನುವಂಥ ಮಾತುಗಳು ಎಲ್ಲೆಡೆ ಕೇಳಿ ಬರುತ್ತಿರುವುದು ವಿಷಾದದ ಸಂಗತಿಯೆಂದು ಅಭಿವೖದ್ಧಿ ಚಿಂತಕರು ಖೇದವನ್ನು ವ್ಯಕ್ತಪಡಿಸುತ್ತಾರೆ.

ಹಾಗೊಂದು ವೇಳೆ ಬಸವಕಲ್ಯಾಣ ಪಟ್ಟಣ ರಸ್ತೆ ಅಗಲೀಕರಣಗೊಂಡು ಅಭಿವೖದ್ದಿ ಸಾಧ್ಯವಾದರೆ ದೈನಂದಿನ ವ್ಯವಹಾರ, ವ್ಯಾಪಾರಗಳು, ಪ್ರಮುಖ ಅಂಗಡಿ ಮಾಲೀಕರುಗಳಿಗೆ ನಷ್ಟವಾಗುತ್ತದೆಂಬ ಭ್ರಮೆ ಹಾಗೂ ಕೆಲ ಪ್ರಮುಖ ಸಂಸ್ಥೆಯ ಚಟುವಟಿಕೆಗಳು ನಿಂತು ಬಿಡುತ್ತವೆ ಎನ್ನಬಹುದು.

ಬಸವಕಲ್ಯಾಣಕ್ಕೆ ಹಷ೯ಗುಪ್ತ ಅವರಂಥ ದಕ್ಷ ಆಡಳಿತಧಿಕಾರಿ ಯಾಕಾದರೂ ಬರುತ್ತಾರೆ ಎಂಬ ಪ್ರಶ್ನೆ ಒಳಗೊಳಗೆ ಕೇಳಿ ಬರುವಂತಿದ್ದರೂ ಅಭಿವೖದ್ಧಿಪರವಾಗಿ ಚಿಂತಿಸುವವರ ಆಶಯ ಬಹುತೇಕ ನಿಜವಾಗಲಿದೆ ಎನ್ನಲು ಪ್ರಮುಖ ಕಾರಣವೆಂದರೆ ಬಿಕೆಡಿಬಿ ವಿಶೇಷಧಿಕಾರಿಯಾಗಿದ್ದ ಡಾ. ಎಸ್್.ಎಂ. ಜಾಮದಾರ್್ ಅವರ ನಿವೖತ್ತಿಯ ನಂತರ ಹಷ೯ಗುಪ್ತ ಅವರೇ ವಿಶೇಷಧಿಕಾರಿಯಾಗಿ ಬರಲೆಂಬುದು ಅನೇಕರು ಒತ್ತಾಯಿಸಿದ್ದಾರೆ ಎನ್ನಲಾಗುತ್ತಿದೆ.

ಬೀದರ ಜಿಲ್ಲಾಧಿಕಾರಿಯಾಗಿ ಜಿಲ್ಲೆಯ ಚಿತ್ರಣವನ್ನೇ ಬದಲಾಯಿಸಿರುವ ಹಷ೯ಗುಪ್ತ ಅವರು ಒಂದು ವೇಳೆ ಬಸವಕಲ್ಯಾಣಕ್ಕೆ ಬಂದರೆ ಅಭಿವೖದ್ಧಿ ತಾಣವಾಗಿ, ಪ್ರವಾಸಿಗರಿಗೆ 12 ನೇ ಶತಮಾನದ ಶರಣರನ್ನು, ಐತಿಹಾಸಿಕ ಪಳೆಯುಳಿಕೆಗಳನ್ನು ಅಳಿದುಳಿದಿರುವುದನ್ನು ಜೀವಂತ ನೋಡಲು ಸಿಗುವುದರಲ್ಲಿ ಸಂದೇಹವಿಲ್ಲ.

ಪ್ರವಾಸಿಗರಿಗೆ ಬಸವಕಲ್ಯಾಣ ಪಟ್ಟಣ ಕೈಬೀಸಿ ಕರೆಯುವಲ್ಲಿ ಹಷ೯ಗುಪ್ತ ಅವರಂಥ ಅಧಿಕಾರಿಗಳು ಬಂದರೆ ಮಾತ್ರ ಬಹುತೇಕ ನಿಜವಾಗಲಿದೆ ಎಂಬುದು ಜನಮನದಲ್ಲಿ ಖಚಿತವಾಗಿದೆ. ಆದ್ದರಿಂದಲೇ ಹಷ೯ಗುಪ್ತ ಅವರಿದ್ದಾಗಲೇ ಆಗಬೇಕಾದ ಅನೇಕ ಕಾಮಗಾರಿಗಳು ಇಷ್ಟೊಂದು ಭರದಲ್ಲಿ ಸಾಗುತ್ತಿರುವುದಕ್ಕೆ ಬುಲ್ಡೋಜರ್್ ಶಬ್ಧಗಳು ಕೇಳಿ ಬರುತ್ತಿರುವುದಕ್ಕೆ ಸಾಕ್ಷಿಯೆನ್ನುತ್ತಾರೆ ಅನೇಕ ಸಂಘಟನಾ ಪ್ರಮುಖರು.

ಬುಧವಾರ, ಮೇ 30, 2012

ಬಿಜೆಪಿ ಸರಕಾರ ಬಂದಾಗಿನಿಂದ ಆಡಳಿತ ಸಂಪೂಣ೯ ಕುಸಿತಃ ಮಾಜಿ. ಸಿಎಂ, ಎಚ್.ಡಿ ಕುಮಾರಸ್ವಾಮಿ

 ಚಿತ್ರ ವಿವರಃ  ಬಸವಕಲ್ಯಾಣ ತಾಲೂಕಿನ ಸಸ್ತಾಪೂರ ಬಂಗ್ಲಾ ರಾಷ್ಟ್ರೀಯ ಹೆದ್ದಾರಿ ಹತ್ತಿರ ಆಳಂದ ತಾಲೂಕಿನಲ್ಲಿ ನಡೆಯಲಿರುವ  ಸಾಮೂಹಿಕ ವಿವಾಹದಲ್ಲಿ ಪಾಲ್ಗೊಳ್ಳುವ ನಿಮಿತ್ಯ ಆಗಮಿಸುತಿದ್ದ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್್ ರಾಜ್ಯಾಧ್ಯಕ್ಷ ಎಚ್್. ಡಿ. ಕುಮಾರಸ್ವಾಮಿ ಅವರಿಗೆ ತಾಲೂಕಿನ ಜೆಡಿಎಸ್್ ಪಕ್ಷದ ಕಾಯಂಕತ೯ರಿಂದ ಸ್ವಾಗತ, ಸನ್ಮಾನ ಸ್ವೀಕರಿಸಿ ಮಾತನಾಡುತ್ತಿರುವುದು. ಈ ಸಂದಭ೯ದಲ್ಲಿ ಬೀದರ ಶಾಸದ ಬಂಡೆಪ್ಪ ಖಾಶೆಂಪೂರ, ಬಸವಕಲ್ಯಾಣ ಜೆಡಿಎಸ್ ತಾಲೂಕಾಧ್ಯಕ್ಷ ಶಬ್ಬೀರ ಪಾಶಾ ಮುಜಾವರ್, ಜಿ.ಪಂ, ಸದಸ್ಯ ಸಂಜು ಕಾಳೇಕರ್, ಕೇಶಪ್ಪ ಬಿರಾದಾರ್ ಮುಂತಾದವರಿದ್ದರು.

  ಬಿಜೆಪಿ ಸಕಾ೯ರದ ಆಡಳಿತ ಹಿನ್ನಡೆಃ ಮಾಜಿ ಸಿಎಂ ಕುಮಾರಸ್ವಾಮಿ ಆರೋಪ


 ಬಸವಕಲ್ಯಾಣ, ಮೇ. 29

ರಾಜ್ಯದಲ್ಲಿ ಬಿಜೆಪಿ ಸರಕಾರ ಬಂದಾಗಿನಿಂದ ಆಡಳಿತ ಸಂಪೂಣ೯ ಕುಸಿದು ಬಿದ್ದು ಅಭಿವೖದ್ಧಿಗೆ ಹಿನ್ನೆಡೆಯಾಗಿದೆ. ಬಿಜೆಪಿ ಸಕಾ೯ರದ ಭ್ರಷ್ಟಾಚಾರದಿಂದ ಜನ ಬೇಸತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್್ ರಾಜ್ಯಾಧ್ಯಕ್ಷ ಎಚ್್. ಡಿ. ಕುಮಾರಸ್ವಾಮಿ ಆರೋಪಿಸಿದರು.

ಆಳಂದ ತಾಲೂಕಿನಲ್ಲಿ ನಡೆಯಲಿರುವ  ಸಾಮೂಹಿಕ ವಿವಾಹದಲ್ಲಿ ಪಾಲ್ಗೊಳ್ಳುವ ನಿಮಿತ್ಯ ಆಗಮಿಸುತಿದ್ದ ಸಂದಭ೯ದಲ್ಲಿ ತಾಲೂಕಿನ ಜೆಡಿಎಸ್್ ಪಕ್ಷದ ಕಾಯ೯ಕತ೯ರಿಂದ ಸ್ವಾಗತ, ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಕಾಂಗ್ರೇಸ್್ ಹಾಗೂ ಬಿಜೆಪಿಯವರು ರಾಜ್ಯದ ಜನತೆಗೆ ದ್ರೋಹವನ್ನು ಎಸಗಿದ್ದಾರೆ. ರೈತರ ಸಾಲ ಮನ್ನಾ ಮಾಡದೇ ರೈತರ ಆತ್ಮ ಹತ್ಯೆಗೆ ಕಾರಣವಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದ ಅವರು, ನಾನು ಮುಖ್ಯಮಂತ್ರಿ ಆಗಿದ್ದಾಗ ಜೆಡಿಎಸ್್ ಪಕ್ಷದಿಂದ ರೈತರ ಸಮಸ್ಯೆಗಳಿಗೆ ಸ್ಪಂಧಿಸಿದ್ದೇನೆ. ಜನರಿಗೆ ಉತ್ತಮ ಆಡಳಿತ ಸೇವೆಯನ್ನು ನಿಸ್ಪಕ್ಷಪಾತದಿಂದ ನೀಡಿದ್ದೇನೆ ಎಂದರು.

ಜೆಡಿಎಸ್್ ಪಕ್ಷದಿಂದ ರೈತರ ಸಾಲ ಮನ್ನಾ ಮಾಡಿರುವ ನಾವು ಬಡವರಿಗಾಗಿ ಒಳ್ಳೆಯ ನ್ಯಾಯವನ್ನು ಒದಗಿಸಿ ಕೊಟ್ಟಿದ್ದೇವೆ. ಅದರಂತೆ ಬಸವಕಲ್ಯಾಣ ಅಭಿವೖದ್ಧಿ ಮಂಡಳಿ ಮಂಜೂರಿ ಮಾಡಿಸಿ  ಅನೇಕ ಶರಣರ ಸ್ಮಾರಕಗಳ ಜೀಣೋದ್ಧಾರಕ್ಕೆ ಅನುದಾನ ಬಿಡುಗಡೆ ಮಾಡಿ ಶ್ರಮಿಸಿದ ಪಕ್ಷ ಜೆಡಿಎಸ್್ ಆಗಿದೆ ಎಂದು ನುಡಿದರು.

ಮುಂದೊರೆದು ಮಾತನಾಡಿದ ಅವರು, ರಾಜ್ಯದಲ್ಲಿ ಅನೇಕ ರೈತರು ಸಂಕಷ್ಟದಲ್ಲಿದ್ದಾರೆ. ಆದರೆ ಬಿಜೆಪಿ ಸಕಾ೯ರ ಕಣ್ಮುಚ್ಚಿ ಕುಳಿತಿರುವುದು ಜನಪರ ಕಾಳಜಿ ಅವರಿಗಿಲ್ಲ ಎಂಬಂತಾಗಿದೆ. ಬಿಜೆಪಿ ಪಕ್ಷದಲ್ಲಿರುವ ಅನೇಕ ನಾಯಕರು ಭ್ರಷ್ಟಾಚಾರದಲ್ಲಿ ನಿರತರಾಗಿದ್ದಾರೆ ಎಂದು ಹೇಳಿದರು.

ಜೆಡಿಎಸ್್ ಪಕ್ಷದಿಂದ ಯುವ ಉತ್ಸಾಹಿ ನವ ತರುಣ ಖೂಬಾ ಅವರಿಗೆ ಟಿಕೇಟ್್ ನೀಡಿದ್ದಕ್ಕೆ ಬಸವಕಲ್ಯಾಣ ತಾಲೂಕಿನ ಜನತೆ ಮತ್ತು ಪಕ್ಷದ ಕಾಯ೯ಕತ೯ರು ಪಕ್ಷದ ಮೇಲಿನ ವಿಶ್ವಾಸದಿಂದ ಮಲ್ಲಿಕಾಜು೯ನ ಖೂಬಾ ಅವರನ್ನು ಗೆಲ್ಲಿಸಿ ತಂದಿರುವುದಕ್ಕೆ ಬಸವಕಲ್ಯಾಣದಲ್ಲಿ ಜೆಡಿಎಸ್್ ಭ್ರದ್ರ ಕೋಟೆ ಸ್ಥಾಪಿಸಿದೆ ಎಂದು ಅಭಿಪ್ರಾಯಪಟ್ಟರು.

ಹಾಗೆಯೇ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಖೂಬಾ ಅವರಿಗೆ ಗೆಲ್ಲಿಸಲು ಮನವಿಸಿದರು. ಇದೇ ಸಂದಭ೯ದಲ್ಲಿ ರಾಜೇಶ್ವರಿ ಸೂಯ೯ವಂಶಿ ಜೆಡಿಎಸ್್ ಪಕ್ಷಕ್ಕೆ ಸೇಪ೯ಡೆಯಾದರು. ಜಿಲ್ಲಾ ಜೆಡಿಎಸ್್ ಪಕ್ಷದ ಅಧ್ಯಕ್ಷ ನಸೀಮೋದ್ದೀನ್್ ಪಟೇಲ್್, ಕುಮಾರ ಬಂಗಾರಪ್ಪ, ಜಿಪಂ. ಸದಸ್ಯ ಸಂಜು ಕಾಳೇಕರ್್, ದೇವಿಶೀಲಾ ಮದನೆ, ಪುಷ್ಪಾ ಹಾರಕೂಡೆ ಮುಂತಾದವರಿದ್ದರು.

ಪ್ರಮುಖರಾದ ತಾಪಂ ಸದಸ್ಯ ದೀಪಕ ನಾಗದೆ, ಕೇಶಪ್ಪ ಬಿರಾದಾರ್್, ಕಾಳೀದಾಸ್ ಜಾಧವ, ಸಿದ್ರಾಮ ಗುದಗೆ, ಜ್ಞಾನೇಶ್ವರ ಮೂಳೆ, ಗೌತಮ ಕಾಂಬಳೆ, ರವಿ ಗುಂಗೆ, ಗುರುರಾಜ ಸಾಶೆಟ್ಟೆ, ದಿಲೀಪಗೀರ ಗೋಸ್ವಾಮಿ, ರಾಜು ವಾಡೇಕರ್್, ತಾತ್ಯಾರಾವ ಪಾಟೀಲ, ಇಸ್ಮಾಯಿಲ್್ ಬೆಳಕುಣಿ, ರಶೀದ ಖುರೇಶಿ, ಸೈಯದ ಅಖ್ತರ, ಶಿವಕುಮಾರ ಬಿರಾದಾರ್್ ಸೇರಿದಂತೆ ಮುಂತಾದ ಕಾಯ೯ಕತ೯ರಿದ್ದರು.




                                                                              
       

                                                                              
       

ಮಂಗಳವಾರ, ಮೇ 8, 2012

ಉತ್ತಮ ಸಾಹಿತ್ಯಾಸಕ್ತರನ್ನೇ ಆಯ್ಕೆ ಮಾಡಬೇಕು

 ಕನ್ನಡ ಸಾಹಿತ್ಯ ಪರಿಷತ್ತಿನ ಚಿಹ್ನೆ

  ಬಸವಕಲ್ಯಾಣ, ಮೇ. 6


ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಅಧ್ಯಕ್ಷರನ್ನಾಗಿ ಸೂಕ್ತ ವ್ಯಕ್ತಿಯನ್ನು ನೇಮಿಸಿ ಸಾಹಿತ್ಯಿಕ ವಾತಾವರಣ ಹುಟ್ಟು ಹಾಕಬೇಕು. ಸ್ಥಳೀಯ ಕಸಾಪ ಸದಸ್ಯರ ಗಮನಕ್ಕೆ ತರದೇ ಈ ಸಂಬಂಧ ಯಾವುದೇ ನಿಣ೯ಯಗಳನ್ನು ಕೈಗೊಳ್ಳಬಾರದು ಎಂದು ತಾಲೂಕಿನ ಕಸಾಪ ಸದಸ್ಯರು ಆಗ್ರಹಿಸಿದ್ದಾರೆ.

ಈ ಕುರಿತು 25 ಕ್ಕೂ ಹೆಚ್ಚು ಸದಸ್ಯರ ಸಹಿ ಇರುವ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, 12 ನೇ ಶತಮಾನದ ಕಲ್ಯಾಣ ಸಾಮಾಜಿಕ ಕ್ರಾಂತಿ ನಡೆಸಿದ ವಿಶ್ವಗುರು ಬಸವಣ್ಣನವರ ಕಾಯ೯ ಕ್ಷೇತ್ರವಾಗಿದೆ. ಇಂತಹ ಪುಣ್ಯ ಕ್ಷೇತ್ರವಾದ ಬಸವಕಲ್ಯಾಣ ಕಸಾಪ ಅಧ್ಯಕ್ಷರನ್ನಾಗಲಿ, ಪದಾದಿಕಾರಿಗಳನ್ನಾಗಲಿ ಉತ್ತಮ ಸಾಹಿತ್ಯಾಸಕ್ತರನ್ನೇ ಆಯ್ಕೆ ಮಾಡಬೇಕು ಎಂದಿದ್ದಾರೆ.

ಕಲ್ಯಾಣವೆಂಬ ಪವಿತ್ರ ನಾಡಿನಿಂದ ಅನೇಕ ಶರಣರು ವಚನಗಳು ರಚಿಸಿ ಜನಜಾಗೖತಿ ಕಾಯ೯ವನ್ನು ಮಾಡಿದ್ದಾರೆ. ನಂತರದಲ್ಲಿ ಕೆಲಕಾಲ ಸಾಹಿತ್ಯಿಕ ಚಟುವಟಿಕೆ ನಿಂತು ಹೋಗಿದ್ದರೂ ಸಹ ಇಚೆಗೆ ಸಾಹಿತ್ಯ ಕ್ಷೇತ್ರದಲ್ಲಿ ಸಾಕಷ್ಟು ಪ್ರತಿಭಾವಂತ ಜನರು ಬೆಳಕಿಗೆ ಬರುತಿದ್ದಾರೆ ಎಂದು ತಿಳಿಸಿದ್ದಾರೆ.

ಕಾವ್ಯ, ಕಥೆ, ಲೇಖನ, ಅಂಕಣ ಬರಹ, ಕಾದಂಬರಿ, ಪ್ರಬಂಧ ಮುಂತಾದ ಪ್ರಕಾರಗಳಲ್ಲಿ ಕೆಲವರು ಮಹತ್ತರ ಸಾಧನೆಯನ್ನು ಮಾಡಿ ಗಮನ ಸೆಳೆಯುತಿದ್ದಾರೆ. ಹಲವರ ಪುಸ್ತಕಗಳು ಅಧಿಕ ಸಂಖ್ಯೆಯಲ್ಲಿ ಪ್ರಕಟಗೊಂಡಿವೆ. ಆದರೂ ಪರಿಷತ್ತಿನಿಂದ ಇವರನ್ನೆಲ್ಲಾ ಕಡೆಗಣಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಕೆಲವರು ಹಣಬಲ ಮತ್ತು ಶಿಫಾರಸ್ಸಿನೊಂದಿಗೆ ಪ್ರತಿಸಲ ಸ್ಥಾನಗಳನ್ನು ಪಡೆದುಕೊಳ್ಳುತಿದ್ದಾರೆ. ಈ ಸಲವೂ ಅದೇ ರೀತಿಯಾದರೆ ನಾವು ಸುಮ್ಮನಿರುವುದಿಲ್ಲ ಎಂದು ಎಚ್ಚಿರಿಸಿದ ಅವರು, ಪದೇ ಪದೇ ಕಸಾಪ ಪದಾಧಿಕಾರಿ ಆಗುವವರನ್ನು ಬದಿಗಿಟ್ಟು ಸಂಪೂಣ೯ವಾಗಿ ಹೊಸಬರಿಗೆ ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದ್ದಾರೆ.

ಸಾಹಿತಿಗಳಲ್ಲದವರು ಸಾಹಿತಿಗಳೆಂಬಂತೆ ನೈಜ ಪ್ರತಿಭಾವಂತ ಸಾಹಿತಿಗಳನ್ನು ಕಡೆಗಣಿಸುತ್ತಾ ಬರುತ್ತಿರುವುದು ಹೆಚ್ಚಾಗಿದೆ. ಸಾಹಿತ್ಯದ ಗಂಧ ಗಾಳಿಯೂ ಗೊತ್ತಿಲ್ಲದ ಕೆಲವರು ಇದ್ದಕಿದ್ದಂತೆ ದಿಢೀರ ಸಾಹಿತಿಗಳಾಗಿ ಹುಟ್ಟಿಕೊಳ್ಳುವ ಆತಂಕಗಳು ಹೆಚ್ಚುತ್ತಿವೆ. ಒಂದು ಸಾಲು ಸಹ ಬರೆಯದವರು ನಾನು ಪುಸ್ತಕ ಬರೆದಿದ್ದೇನೆ ಎನ್ನುವಂಥ ವಾತಾವರಣ ಸೖಷ್ಟಿಸುತಿದ್ದಾರೆ.

ಪುಟಗಟ್ಟಲೆ ಸುಳ್ಳಿನಿಂದಲೇ ಕೂಡಿದ ಪರಿಚಯ ಪತ್ರ ಸಿದ್ಧಪಡಿಸುವ ಕೆಲವರು ಯಾವುದೇ ದಾಖಲೆಗಳಿಲ್ಲದೇ ಸಮ್ಮೇಳನಾಧ್ಯಕ್ಷರಾಗುವ ಪಟ್ಟಿಯಲ್ಲಿ ಸೇರಿಕೊಂಡು ಪೈಪೋಟಿಗೆ ನಿಲ್ಲುವಂತಾಗಿದೆ. ಒಟ್ಟಿನಲ್ಲಿ ಸಾವ೯ಜನಿಕರ ಕಣ್ಣಲ್ಲಿ ಮಣ್ಣೆರಚುವ ಕಾಯ೯ ನಡೆಯುತ್ತಿದೆ ಎಂದು ಕಸಾಪ ಸದಸ್ಯರಾದ ರುದ್ರಮಣಿ ಮಠಪತಿ, ರುದ್ರೇಶ್ವರ ಸ್ವಾಮಿ , ನಾಗೇಂದ್ರ ಬಿರಾದಾರ್್, ಭೀಮಾಶಂಕರ ಬಿರಾದಾರ್್, ಚನ್ನವೀರ ಜಮಾದಾರ್್ ಸೇರಿದಂತೆ ಮುಂತಾದವರು ಪ್ರಕಟಣೆಯಲ್ಲಿ ಆರೋಪಿಸಿದ್ದಾರೆ.

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾಗಿ ಆಯ್ಕೆ ಆಗಿರುವ ಪ್ರೊ. ಸಿದ್ರಾಮಪ್ಪ ಮಾಸಿಮಾಡೆ ಅವರು ಯಾವುದೇ ಭೇದಭಾವ ಮಾಡದೇ ಸೂಕ್ತ ವ್ಯಕ್ತಿಗಳಿಗೆ ತಾಲೂಕಾ ಕಸಾಪ ಅಧ್ಯಕ್ಷರನ್ನಾಗಿ ಹಾಗೂ ಇತರೆ ಪದಾಧಿಕಾರಿಗಳನ್ನಾಗಿ ನ್ಯಾಯಯುತವಾಗಿ ನೇಮಕ ಮಾಡಬೇಕು ಎಂದು ಮನವಿಸಿದ್ದಾರೆ.

ಯಾವುದೇ ಜಾತಿ, ಜನಾಂಗ, ಧಮ೯ದವರನ್ನು ಪ್ರಾತಿನಿಧ್ಯ ಸಿಗುವಂತೆ ಆಯ್ಕೆ ಮಾಡುವುದು ಸೇರಿದಂತೆ ತಾಲೂಕಾ ಅಥವಾ ಇತರೆ ಸಮ್ಮೇಳನಗಳಲ್ಲಿ ಸಮ್ಮೇಳನಾಧ್ಯಕ್ಷರ ನೇಮಕಾತಿಯಲ್ಲಿ ಪಾರದಶ೯ಕತೆ ಹೊಂದಿರಬೇಕು. ಸಾಹಿತಿಗಳಲ್ಲದವರನ್ನು ಸಮ್ಮೇಳನಾಧ್ಯಕ್ಷ ಸ್ಥಾನಕ್ಕೆ ನೇಮಿಸುವುದು ಸರಿಯಲ್ಲ ಎಂದು ತಿಳಿಸಿದ್ದಾರೆ.

ತಾಲೂಕಾ ಮತ್ತು ಜಿಲ್ಲಾ ಮಟ್ಟದ ಕಾಯ೯ಕ್ರಮಗಳಲ್ಲಿ ಕೆಲ ವಷ೯ಗಳಿಂದ ಸತ್ಕಾರ ಮಾಡಿಕೊಂಡವರನ್ನೇ ಪದೇ ಪದೇ ಸನ್ಮಾನಿಸಲಾಗುತ್ತಿದೆ. ಪ್ರತಿ ಕಾಯ೯ಕ್ರಮಗಳಲ್ಲಿ ಹೊಸಬರನ್ನು ಅವಕಾಶ ಮಾಡಿಕೊಟ್ಟು ಅವರಲ್ಲಿ ಹುಮ್ಮಸ್ಸು ಬರುವಂತೆ ಪ್ರೊತ್ಸಾಹಿಸಬೇಕು. ಇದುವರೆಗೆ ನಾವೆಲ್ಲ ಸುಮ್ಮನೆ ಕುಳಿತಿದ್ದೇವು ಆದರೆ ಇನ್ನೂ ಮುಂದೆ ಅನ್ಯಾಯಕ್ಕಾಗಿ ಹೋರಾಡಲು ಹಿಂಜರಿಯುವುದಿಲ್ಲ ಎಂದು ಎಚ್ಚರಿಸಿದ್ದಾರೆ.

ಈ ಎಲ್ಲಾ ವಿಷಯಗಳನ್ನು ಕಸಾಪ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದ ಪ್ರೊ. ಸಿದ್ರಾಮಪ್ಪ ಮಾಸಿಮಾಡೆ ಅವರ ಗಮನಕ್ಕೆ ತರಲು ಬಯಸುತಿದ್ದೇವೆ ಎಂದು ಕಸಾಪ ಸದಸ್ಯರಾದ ಶಿವಕುಮಾರ ವಕಾರೆ, ಶಾಂತಲಿಂಗ ಮಠಪತಿ, ಡಾ. ಬಸವರಾಜ ಸ್ವಾಮಿ, ಬಕ್ಕಯ್ಯ ಸ್ವಾಮಿ, ಉಮಾಕಾಂತ ದದಾಪೂರೆ, ಪಿ.ಜಿ.ಹಿರೇಮಠ, ಅಣ್ಣಾರೆಡ್ಡಿ ಬೋಗಲೆ, ಶಿವರಾಜ ಬಾಲಕಿಲೆ, ಮಹಾದಪ್ಪ ಖಂಡಾಳೆ,  ದೇವಿಂದ್ರ ಬರಗಾಲೆ, ಶಿವಾನಂದ ಶೀಲವಂತ ಸೇರಿದಂತೆ ಮುಂತಾದವರು ಪ್ರಕಟಣೆಯಲ್ಲಿ ಕೋರಿದ್ದಾರೆ.

ಸೋಮವಾರ, ಏಪ್ರಿಲ್ 23, 2012

ಬಸವಕಲ್ಯಾಣ, ಏ. 23

ಹಿಂದೂ ಸಾಮ್ರಾಜ್ಜವನ್ನು ಕಟ್ಟಲು ಪ್ರಯತ್ನಿಸಿದ ಛತ್ರಪತಿ ಶಿವಾಜಿ ಮಹಾರಾಜರು ಅತೀ ಚಾಣಕ್ಷ ಮಹಾಪುರುಷರಾಗಿದ್ದರು. ಅವರ ಜೀವನ ಸಾಧನೆಯನ್ನು ನೋಡಿದರೆ ರೋಮಾಂಚನಗೊಳ್ಳುತ್ತೇವೆ ಎಂದು ಸಹಾಯಕ ಆಯುಕ್ತ ಎಚ್್. ಪ್ರಸನ್ನ ಅಭಿಪ್ರಾಯಪಟ್ಟರು.

ನಗರದ ಹಳೇ ತಹಸೀಲ್್ ಕಚೇರಿ ಆವರಣದಲ್ಲಿ ಸೋಮವಾರ ತಾಲೂಕಾಡಳಿತ ವತಿಯಿಂದ ಹಮ್ಮಿಕೊಂಡಿದ್ದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಉತ್ಸವದ ಭವ್ಯ ಮೆರವಣಿಗೆಯಲ್ಲಿ ಪಾಲ್ಗೊಂಡ ನಂತರ ಕಾಯ೯ಕ್ರಮ ಉದ್ಘಾಟಿಸಿ ಮಾತನಾಡಿದರು.

ಇಡೀ ರಾಜ್ಯದಲ್ಲಿ ಸಕಾ೯ರದ ಆದೇಶದಂತೆ ಇದೇ ಪ್ರಥಮ ಬಾರಿಗೆ ಆಚರಿಸಲಾಗುತ್ತಿರುವ ಶಿವಾಜಿ ಮಹಾರಾಜರ ಜಯಂತಿ ಆಚರಣೆಯಿಂದ ಜೀವಮಾನವಿಡೀ ಪ್ರತಿಬಿಂಬಿಸಿದ ಅವರ ಶಕ್ತಿ ಸಾಮಥ್ಯ೯ಕ್ಕೆ ಕೊಡುವ ಗೌರವ ಇದಾಗಿದೆ ಎಂದರು.

ತಾಯಿ ಜೀಜಾಬಾಯಿ ಆಶ್ರಯದಲ್ಲಿ ಬೆಳೆದ ಶಿವಾಜಿ ವೀರ ಪುರುಷರಾಗಿದ್ದರು. ಯುದ್ಧದಲ್ಲಿ ನೌಪುಣ್ಯತೆ ಹೊಂದಿದ್ದ ಅವರು ಧಾಮಿ೯ಕ ನೆಲೆಗಟ್ಟಿನಲ್ಲಿ ಬೆಳೆದವರಾಗಿದ್ದರು. ಮೊಗಲ ರಾಜರಿಗೂ ಸಹ ಶಿವಾಜಿ ಮಹಾರಾಜರ ಯುದ್ಧ ಕಲೆ ಅರಿತುಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಹೇಳಿದರು.

ಮಹಾನ್್ ಪುರುಷರನ್ನು ಇತಿತಹಾಸವನ್ನಾಳಿದ ಶಿವಾಜಿ ಮಹಾರಾಜರಿಗೆ ಸ್ಮರಿಸುವ ಗೌರವ ಭಾವನೆ ಪ್ರತಿಯೊಬ್ಬರಲ್ಲೂ ಇರಬೇಕು. ಮನಸ್ತಾಪಗಳನ್ನು ಮರೆತು ಸೌಹಾಧ೯ಯುತವಾಗಿ ಜಯಂತಿ ಆಚರಣೆ ಪ್ರತಿ ವಷ೯ ಮಾಡುವುದರಿಂದ ಅದಕ್ಕೆ ಮಹತ್ವವನ್ನು ಬರುವಂತಾಗಬೇಕು ಎಂದು ಕರೆ ನೀಡಿದರು.

ನಗರಸಭೆ ಅಧ್ಯಕ್ಷೆ ಮಂಗಲಾಬಾಯಿ ಉದರೆ, ಉಪಾಧ್ಯಕ್ಷೆ ಗೀತಾ ಅಂಬಾದಾಸ, ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ರವಿ ಚಂದನಕೇರೆ, ಎಪಿಎಂಸಿ ಅಧ್ಯಕ್ಷ ಪ್ರಕಾಶ ಮೆಂಡೋಳೆ, ಪಾಶಾಮಿಯ್ಯಾ ರೆಹಮಾನ ಸಾಬ ವೇದಿಕೆಯಲ್ಲಿದ್ದರು. ವಿಶೇಷ ಉಪನ್ಯಾಸಕರಾಗಿ  ಡಾ. ಶಾಮ ಮೋರೆ ಹಾಗೂ ದೇವಾ ಚಹ್ವಾಣ್್ ಉಪಸ್ಥಿತರಿದ್ದರು.

ನಗರದ ಕೋಟೆಯಿಂದ ಪ್ರಾರಂಭವಾದ ಛತ್ರಪತಿ ಶಿವಾಜಿ ಭಾವಚಿತ್ರದ ಮೆರವಣಿಗೆ ಪ್ರಮುಖ ಬೀದಿಗಳಿಂದ ಆಗಮಿಸಿ ಶಿವಾಜಿ ಮಹಾರಾಜರ ಪುತ್ಥಳಿಗೆ ಪೂಜೆ ಸಲ್ಲಿಸಲಾಯಿತು. ಈ ಸಂದಭ೯ದಲ್ಲಿ ಅನೇಕ ರಾಜಕೀಯ ಗಣ್ಯರು, ವಿವಿಧ ಸಂಘಟಕರು ಪಾಲ್ಗೊಂಡಿದ್ದರು.

ಮಂಗಳವಾರ, ಏಪ್ರಿಲ್ 17, 2012

ಬಸವಕಲ್ಯಾಣಃ ಅಬ್ಬರದ ಕಸಾಪ ಪ್ರಚಾರದಲ್ಲಿ ಯುವ ಉತ್ಸಾಹಿ ಸುರೇಶ ಚನಶೆಟ್ಟಿ

 ಚಿತ್ರ ವಿವರಃ ಬಸವಕಲ್ಯಾಣ ತಾಲೂಕಿನ ಹಾರಕೂಡ ಚೆನ್ನವೀರ ಶಿವಾಚಾಯ೯ರಿಂದ ಜಿಲ್ಲಾ ಕಸಾಪ ಚುನಾವಣೆ ಪ್ರಚಾರಕ್ಕೆ ಮಂಗಳವಾರ ಆಶಿವಾ೯ದ ಪಡೆದು ತಾಲೂಕಿನಲ್ಲೆಡೆ ಅಭ್ಯಥಿ೯ ಸುರೇಶ ಚನಶೆಟ್ಟಿ ಮತಯಾಚಿಸಿದರು. ಈ ಸಂದಭ೯ದಲ್ಲಿ ಶ್ರೀಗಳು ಸನ್ಮಾನಿಸಿದರು. ಅವರೊಂದಿಗೆ ಅವರ ಬೆಂಬಲಿಗರು ಉಪಸ್ಥಿತರಿದ್ದರು.


 ಬಸವಕಲ್ಯಾಣ, ಏ. 17


ಬೀದರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರ ಚುನಾವಣೆ ಇದೇ ಏ. 29 ರಂದು ನಡೆಯಲಿರುವ ಹಿನ್ನೆಯಲ್ಲಿ ಬಸವಕಲ್ಯಾಣ ತಾಲೂಕಿನ ಸುಕ್ಷೇತ್ರ ಹಾರಕೂಡದಿಂದ ಕಸಾಪ ಚುನಾವಣಾ ಸ್ಪಧಿ೯ ಸುರೇಶ ಚನಶೆಟ್ಟಿ ಅವರು ತಮ್ಮ ಬೆಂಬಲಿಗರೊಂದಿಗೆ ಚೆನ್ನವೀರ ಶಿವಾಚಾಯ೯ರ ಆಶೀವಾ೯ದ ಪಡೆದು ಮಂಗಳವಾರದ ದಿನವಿಡೀ ಮತದಾರರ ಮನೆ ಬಾಗಿಲಿಗೆ ಹೋಗಿ ಮತಯಾಚಿಸಿದರು.

ಸಾಹಿತ್ಯಿಕ, ಸಾಂಸ್ಕೖತಿಕ ವಾತಾವರಣ ಹುಟ್ಟು ಹಾಕುವ ಉದ್ದೇಶದಿಂದ ಕನ್ನಡಕ್ಕಾಗಿ ಏನೆಲ್ಲಾ ಯೋಚನೆ ಕನಸುಗಳನ್ನಿಟ್ಟುಕೊಂಡಿರುವ ಸುರೇಶ ಚನಶೆಟ್ಟಿ ಅವರು ಮತದಾರರ ಮೇಲೆ ಭಾರಿ ನಿರೀಕ್ಷೆಯನ್ನಿಟ್ಟುಕೊಂಡಂತೆ ಅಬ್ಬರದ ಪ್ರಚಾರವನ್ನು ಕೈಗೊಂಡಿದ್ದರು. ಅವರ ಮುಖಭಾವದಲ್ಲಿ ಸದಾ ನಗುವನ್ನು ತುಂಬಿಕೊಂಡು ಸಾಂಸ್ಕೖತಿಕ ಬದಲಾವಣೆ ಬಯಸುವ ಜನರತ್ತ ಧಾವಿಸಿದರು.

ಮತದಾರರ ಒತ್ತಾಸೆಗೆ ಮಣಿದು ನಾನು ಜಿಲ್ಲಾ ಕಸಾಪ ಚುನಾವಣಾ ಕಣಕ್ಕಿಳಿದಿದ್ದೇನೆ. ನಾಡು ನುಡಿಗಾಗಿ ಸೂಕ್ತ ವೇದಿಕೆ ನಿಮಾ೯ಣ ಮಾಡಲು ಹತ್ತು ಹಲವು ಕನಸುಗಳಿವೆ. ಅಂತಹ ಮಹತ್ವದ ಯೋಜನೆಗಳು ಕಾಯ೯ರೂಪಕ್ಕೆ ಬರಲು ಒಂದು ಬಾರಿ ಸುವಣ೯ವಕಾಶ ಮಾಡಿಕೊಡಬೇಕು ಎಂದು ಹಲವು ಮತದಾರರಲ್ಲಿ ಮನವಿಸಿರುವುದನ್ನು ಕಂಡು ಬಂದಿತ್ತು.

ಕನ್ನಡ ಸಾಹಿತ್ಯ ಪರಿಷತ್ತು ನೂರು ವಷ೯ ಪೂರೈಸಿ ಶತಮಾನೋತ್ಸವ ಸಂಭ್ರಮ ಹತ್ತಿರದಲ್ಲಿ ಬರುತ್ತಿದೆ. ಹಿರಿಯರ ಹಾಗೂ ವಿದ್ವಾಂಸರ ಮಾಗ೯ದಶ೯ನದಲ್ಲಿ ಅಥ೯ಪೂಣ೯ವಾಗಿ ಆಚರಿಸಲು ವಿನೂತನವಾದ ಕಾಯ೯ಕ್ರಮಗಳು, ವಿಭಿನ್ನ ಸಾಹಿತ್ಯಕ ಸಾಂಸ್ಕೖತಿಕ ಸಮ್ಮೇಳನಗಳು, ಸಮಾಜಮುಖಿ ಚಟುವಟಿಕೆಗಳು ಹಮ್ಮಿಕೊಳ್ಳಲು ನಿಧ೯ರಿಸಿದ್ದೇನೆ ಎಂದು ಹೇಳಿದರು.

ಪ್ರಚಾರದ ನಿಮಿತ್ಯ ಚನಶೆಟ್ಟಿ ಅವರೊಂದಿಗೆ ಡಾ. ಬಸವರಾಜ ಬಲ್ಲೂರ್್, ಶಾಂತಲಿಂಗ ಮಠಪತಿ, ರುದ್ರೇಶ ಮಠಪತಿ, ಪ್ರೇಮಸಾಗರ ಪಾಟೀಲ, ಡಾ. ಬಸವರಾಜ ಸ್ವಾಮಿ, ಕಾಶಪ್ಪ ಬಾಲಕಿಲೆ, ದೇವಿಂದ್ರ ಬರಗಾಲೆ, ರುದ್ರಮುನಿ ಮಠಪತಿ, ಧನರಾಜ ಭಾತಂಬ್ರೆ, ಡಾ. ರಾಜಕುಮಾರ ಅಲ್ಲೂರೆ, ಜೈಶೇನ್್ ಪ್ರಸಾದ್್ ಸೇರಿದಂತೆ ಮುಂತಾದವರು ಪಾಲ್ಗೊಂಡಿದ್ದರು.




ಕಸಾಪ ಮತದಾರರ ದಾರಿ ತಪ್ಪಿಸುವ ಉದ್ದೇಶ

ಬಸವಕಲ್ಯಾಣ, ಏ. 13

ರಾಜ್ಯ ಮತ್ತು ಜಿಲ್ಲೆಗಳಲ್ಲಿ ಏಕಕಾಲಕ್ಕೆ ನಡೆಯಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆ ಇದೇ ಏ. 29 ರಂದು ಜರುಗಲಿದ್ದು, ಆ ಹಿನ್ನೆಲೆಯಲ್ಲಿ ಸ್ಪಧಾ೯ ಕಣದಲ್ಲಿರುವ ಜಿಲ್ಲಾ ಕಸಾಪ ಅಭ್ಯಥಿ೯ಗಳಲ್ಲಿ ಕೆಲವರು ಸುಳ್ಳಿನ ಸರಮಾಲೆಯನ್ನೇ ಪೋಣಿಸಿ ತಮ್ಮ ವಯಕ್ತಿಕ ಸಾಧನೆಗಳ ಪಟ್ಟಿಯಲ್ಲಿ ಸುಳ್ಳಿನ ಕಂತೆಗಳನ್ನು ಸೇರಿಸಿ ಭಾರಿ ಪ್ರಚಾರದಲ್ಲಿ ತೊಡಗಿದ್ದಾರೆ.

ಕಸಾಪ ಮತದಾರರ ದಾರಿ ತಪ್ಪಿಸುವ ಉದ್ದೇಶದಿಂದ ಸ್ಪಧಾ೯ ಕಣದಲ್ಲಿರುವ ಅಭ್ಯಥಿ೯ಯೊಬ್ಬರು ಬೆಂಬಲವನ್ನು ಕೋರಿ ಪ್ರಕಟಿಸಿದ ಪ್ರಣಾಳಿಕೆಯ ಪರಿಚಯ ಪತ್ರದಲ್ಲಿ ಅನೇಕ ಸುಳ್ಳುಗಳನ್ನೇ ಬರೆದುಕೊಂಡಿದ್ದಾರೆ. ಇಂತಹ ಒಂದು ಅಚಾತುಯ೯ ಮಾಡುವ ಮೂಲಕ ಜನಸಾಮಾನ್ಯರ ಕಣ್ಣಿಗೆ ಮಣ್ಣೆರೆಚುವ ಕಾಯ೯ದಲ್ಲಿ ನಿರತರಾಗಿದ್ದಾರೆ ಎಂಬ ಆರೋಪ ಸ್ಪಷ್ಟವಾಗಿ ಕೇಳಿ ಬರುತ್ತಿವೆ.

ಜಿಲ್ಲಾ ಕಸಾಪ ಸದಸ್ಯರಿಗೂ, ಸಾಹಿತ್ಯಾಸಕ್ತರಿಗೂ ಮುಗ್ಧ ಜನತೆಯ ದಾರಿ ತಪ್ಪಿಸಲು ಹೊರಟಿರುವ ಜಿಲ್ಲಾ ಕಸಾಪ ಚುನಾವಣಾ ಅಭ್ಯಥಿ೯ ಕಣದಲ್ಲಿರುವ ಪ್ರೊ. ವಿಜಯಲಕ್ಷ್ಮೀ ಗಡ್ಡೆ ಅವರು ವಿವಿಧ ಸಂಘ ಸಂಸ್ಥೆಯಲ್ಲಿ ಕಾಯ೯ ನಿವ೯ಹಿಸಿರುವ ಬಗ್ಗೆ ಚುನಾವಣಾ ಪ್ರಚಾರದ ನಿಮಿತ್ಯ ಪ್ರಕಟಿಸಿರುವ ಪರಿಚಯ ಪತ್ರ ಮತದಾರರ ಮನೆ ಮನೆಗೂ ತಲುಪಿಸಿದ್ದಾರೆ. ಅನೇಕ ಕನ್ನಡಪರ ಸಂಘ ಸಂಸ್ಥೆಗಳಲ್ಲಿ ಇರುವುದಾಗಿಯೂ ಸುಳ್ಳು ಸಾಧನೆಗಳು ಪ್ರತಿಬಿಂಬಿಸಿದ್ದಾರೆ.

ಕನ್ನಡ ಅಭಿವೖದ್ಧಿ ಪ್ರಾಧಿಕಾರದ ಸದಸ್ಯರಾಗಿ ಸೇವೆ ಸಲ್ಲಿಸುತ್ತಿರುವ ಬಗ್ಗೆ ಹೇಳಿಕೊಂಡಿರುವ ಅವರು, ಆ ಮೂಲಕ ಭಾರಿ ಪ್ರಮಾದವನ್ನೇ ಎಸಗಿದ್ದಾರೆ. ಈ ಕುರಿತು ಕ.ಅ.ಪ್ರಾಧಿಕಾರದ ರಾಜ್ಯಾಧ್ಯಕ್ಷರಾದ ಮುಖ್ಯಮಂತ್ರಿ ಚಂದ್ರು ಅವರು ಕನ್ನಡಪ್ರಭದೊಂದಿಗೆ ಮಾತನಾಡಿ, ಬೀದರ ಜಿಲ್ಲೆಗೆ ಯಾರನ್ನೂ ಕೂಡ ಕನ್ನಡ ಅಭಿವೖದ್ಧಿ ಪ್ರಾಧಿಕಾರದ ಸದಸ್ಯರನ್ನಾಗಿ ನಾವು ನೇಮಕ ಮಾಡಿಲ್ಲ. ಇಲ್ಲದ ಜಂಭ ಕೊಚ್ಚಿಕೊಳ್ಳುವುದಕ್ಕಾಗಿ ಈ ರೀತಿ ಮಾಡುವುದು ಸರಿಯಲ್ಲ. ಗೌಣ ಸಾಧನೆಯವರಲ್ಲಿ ಇಂತಹ ಗುಣಗಳು ವಿಶೇಷವಾಗಿ ಕಂಡು ಬರುತ್ತವೆ ಎಂದು ಅವರು ಖಾರವಾಗಿಯೇ ನುಡಿದಿದ್ದಾರೆ.

ಅದೇ ರೀತಿ ಗಡಿ ಅಭಿವೖದ್ಧಿ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಡಾ. ಜಗನ್ನಾಥ ಹೆಬ್ಬಾಳೆ  ಕನ್ನಡಪ್ರಭದೊಂದಿಗೆ ಮಾತನಾಡಿ, ತಮ್ಮ ಸ್ವಪ್ರತಿಷ್ಠೆಗಾಗಿ ಅಥವಾ ಕಸಾಪ ಚುನಾವಣಾ ಪ್ರಚಾರದಲ್ಲಿ ಮತದಾರರನ್ನು ದಾರಿ ತಪ್ಪಿಸುವ ಹುನ್ನಾರ ಇದಾಗಿದೆ. ಪವಿತ್ರವಾಗಿರುವ ಕನ್ನಡಿಗರ ಸಂಸ್ಥೆ ಕಸಾಪ ಅಧ್ಯಕ್ಷರುಗಳಾಗಿ ಇಂಥವರು ಬಂದರೆ ಕನ್ನಡವನ್ನೇ ಕುಲಗೆಡಿಸುತ್ತಾರೆ. ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆ ತರುತ್ತಾರೆ ಎಂದು ಬೀದರ ಜಿಲ್ಲಾ ಗಡಿ ಅಭಿವೖದ್ಧಿ ಪ್ರಾಧಿಕಾರದ ಹೆಬ್ಬಾಳೆ ಸ್ಪಷ್ಟಪಡಿಸಿದ್ದಾರೆ.

ಅನೇಕ ಸಂಘ ಸಂಸ್ಥೆಗಳಲ್ಲಿ ಗೌರವಾನ್ವಿತ ಸೇವೆಯಲ್ಲಿರುವಂತೆ ಬೆಂಬಲವನ್ನು ಕೋರಿ ಪ್ರಣಾಳಿಕೆಯ ಹಿಂಬದಿ ಪುಟ (ವಿಜಿಟಿಂಗ್್ ಕಾಡ೯)ನಲ್ಲಿ ಪ್ರೊ. ವಿಜಯಲಕ್ಷ್ಮೀ ಗಡ್ಡೆ ಅವರು ಪ್ರಕಟಿಸಿರುವುದು ಅವರಿಗವರೇ ಆತ್ಮಾವಲೇಕನ ಮಾಡಿಕೊಳ್ಳಲಿ. ಇದು ನಾಚಿಗೇಡಿನ ಸಂಗತಿಯಾಗಿದೆ ಎಂದು ಕಸಾಪ ಸದಸ್ಯರು, ಬುದ್ಧಿಜೀವಿಗಳು ಕಿಡಿ ಕಾರಿದ್ದಾರೆ.

ಪ್ರೊ. ವಿಜಯಲಕ್ಷ್ಮೀ ಗಡ್ಡೆಯವರು ವಿವಿಧ ಸಂಘ ಸಂಸ್ಥೆಗಳಲ್ಲಿ ಸೇವೆ ಮಾಡಿರುವುದನ್ನು ಪರಿಶೀಲಿಸಿ ನೋಡಿದಾಗ ಅನೇಕ ಸುಳ್ಳು ಸಾಧನೆಗಳ ಪಟ್ಟಿ ಬೆಳಕಿಗೆ ಬಂದಿದೆ.  ಈಗಲೇ ಈ ರೀತಿ ಮತದಾರರನ್ನು ತಪ್ಪು ದಾರಿಗೆಳೆಯುತ್ತಿರುವುದನ್ನು ನೋಡಿದರೆ ಇವರಲ್ಲಿ ನಿಜವಾದ ಕನ್ನಡಭಿಮಾನ, ಸಾಹಿತ್ಯಾಸಕ್ತಿ ಇಲ್ಲ ಎಂಬುದು ಸಾಬೀತಾಗುತ್ತದೆ. ಅಧಿಕಾರದ ಗದ್ದುಗೆಯನ್ನೇರಿ ಇವರು ಮಾಡುವುದೇನು ಎಂದು ಪ್ರಶ್ನಿಸುವಂತಾಗಿದೆ.

ಈ ಕುರಿತು ಅನೇಕ ಸಾಹಿತಿ, ಕವಿ, ಕಲಾವಿದರು, ಸದಸ್ಯರುಗಳು ಬೇಸರ ವ್ಯಕ್ತಪಡಿಸಿದ್ದಾರೆ. ಸತ್ಯವನ್ನು ಮರೆಮಾಚಲು ಸಾಧ್ಯವಿಲ್ಲ ಎನ್ನುವುದಕ್ಕೆ ಇದೊಂದು ಜ್ವಲ್ಲಂತ ಉದಾಹರಣೆ ಅಷ್ಟೇ.  ಸುಳ್ಳು ಸಾಧನೆಯ ಪಟ್ಟಿಯಲ್ಲಿ ಸುಳ್ಳಿನ ಕಂತೆಗಳು ಸೇರಿರುವುದು ನಿಜವಾದ ಸಾಧಕರನ್ನೇ ನಾಚಿಸುವಂತೆ ಮಾಡಿರುವುದು ಹಾಸ್ಯಾಸ್ಪದವಾಗಿದೆ ಎನ್ನುತ್ತಾರೆ ಅನೇಕರು.

ಅದೇ ರೀತಿ ಬೀದರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಹಿಳಾ ಘಟಕ ಪ್ರತಿನಿಧಿಯಾಗಿ ಸೇವೆ ಸಲ್ಲಿಸುತ್ತಿರುವುದಾಗಿಯೂ ಹೇಳಿದ್ದಾರೆ. ಹಾಗೂ ಕನಾ೯ಟಕ ರಕ್ಷಣಾ ವೇದಿಕೆ ಮಹಿಳಾ ಘಟಕದ ಜಿಲ್ಲಾಧ್ಯಕ್ಷರೆಂದು ಕೂಡ ಬರೆದುಕೊಂಡಿರುತ್ತಾರೆ.

ಕರವೇ ಸಂಘಟನೆಗೂ ಗಡ್ಡೆ ಅವರಿಗೂ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ಕರವೇ(ಪ್ರವೀಣಶೆಟ್ಟಿ ಬಣ) ಜಿಲ್ಲಾಧ್ಯಕ್ಷ ಶಶಿಧರ ಕೋಸಂಬೆ ಪ್ರತಿಕ್ರಿಯಿಸಿದ್ದಾರೆ. ಅದೇ ರೀತಿ ಒಟ್ಟು 11 ವಿವರಗಳಲ್ಲಿನ 4ನೇಯ ಸಾಲಿನಲ್ಲಿ ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾಧ್ಯಕ್ಷರೆಂದು ಸಹ ಪ್ರಕಟಿಸಿದ್ದಾರೆ.

ಈ ಕುರಿತು ಜನವಾದಿ ಮಹಿಳಾ ಸಂಘಟನೆಯ ರಾಜ್ಯಾಧ್ಯಕ್ಷೆ ಕೆ. ನೀಲಾ ಅವರು ಮಾತನಾಡಿ, ಬೀದರ ಜಿಲ್ಲಾ ಅಧ್ಯಕ್ಷರಾಗಿ ಸಧ್ಯಕ್ಕೆ ಅಂಬುಬಾಯಿ ಮಾಳಗೆ ಎನ್ನುವವರು ಕಾಯ೯ ನಿವ೯ಹಿಸುತ್ತಿದ್ದಾರೆ. ಪ್ರೊ. ವಿಜಯಲಕ್ಷ್ಮೀ ಗಡ್ಡೆ ಅವರು ನಮ್ಮ ಸಂಘಟನೆಯ ಉಪಾಧ್ಯಕ್ಷರಾಗಿ ಮತ್ತು ಕಾಯ೯ದಶಿ೯ಗಳಾಗಿ ಹಿಂದಿನ ಅವಧಿಗಳಲ್ಲಿ ಮಾತ್ರ ಇದ್ದರು ಎಂದು ಸ್ಪಷ್ಟ ಪಡಿಸಿದ್ದಾರೆ.

ವಿಜಯಲಕ್ಷ್ಮೀ ಗಡ್ಡೆ ಅವರು ತಮ್ಮ ಪರಿಚಯ ಪತ್ರದಲ್ಲಿ ದಾಖಲಿಸಿರುವಂತೆ ಗಮನಿಸುತ್ತಾ ಹೋದಂತೆ ಇಂತಹ ಸಾಕಷ್ಟು ತಪ್ಪುಗಳು ಕಂಡು ಬರುವಂತಿವೆ. ನಮ್ಮೂರ್ನಾಗ ನಾನೊಬ್ನೇ ಜಾಣ ಎನ್ನುವ ಹಾಗೆ ಶುನ್ಯ ಸಾಧನೆಯಲ್ಲೂ ಅಪಾರ ಸಾಧನೆಗೈದಂತೆ ಎಲ್ಲೆಂದರಲ್ಲಿ ಪ್ರಚಾರ ಕೈಗೊಂಡಿರುವುದಕ್ಕೆ ಕಡಿವಾಣ ಹಾಕಬೇಕು ಎಂಬುದು ಜನಸಾಮಾನ್ಯರ ಗೋಳಾಗಿದೆ.

ಅನೇಕ ಕನ್ನಡಪರ ಸಂಘಟನೆಗಳ ಅಧ್ಯಕ್ಷರಾಗಿ ಕಾಯ೯ ನಿವ೯ಹಿಸಿರುವ ಬಗ್ಗೆ ಸಾಕಷ್ಟು ವಿವರಗಳನ್ನು ಬಹಿರಂಗವಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆಯ ನಿಮಿತ್ಯ ಬಿರುಸಿನ ಪ್ರಚಾರದಲ್ಲಿ ತೊಡಗಿರುವ ಪ್ರೊ. ವಿಜಯಲಕ್ಷ್ಮೀ ಗಡ್ಡೆ ಅವರು ಬಹಿರಂಗ ಸುದ್ಧಿ ಪತ್ರಿಕೆಯ ಗೌರವ ಸಂಪಾದಕರೆಂದು ಸಹ ಹೇಳಿಕೊಂಡಿರುವುದು ಅವರಿಗವರೇ ಆತ್ಮ ವಿಮಶೆ೯ ಮಾಡಿಕೊಳ್ಳಬೇಕಾಗಿದೆ.

ಬೀದರ ಜಿಲ್ಲೆಯಲ್ಲಿ ಒಂದು ಸಾವಿರಕ್ಕೂ ಹೆಚ್ಚು ಉಪನ್ಯಾಸ ಮಂಡಿಸಿರುವುದಾಗಿ ಸಹ ಉಲ್ಲೇಖಿಸಿದ್ದಾರೆ. ಹೊರ ರಾಜ್ಯಗಳಲ್ಲಿ ಪ್ರಬಂಧ ಮಂಡನೆ ಮಾಡಿರುವುದು ಸೇರಿದಂತೆ ಬಸವ ಕೇಂದ್ರ, ಅ.ಭಾ.ವೀ. ಮಹಾಸಭಾ, ಅನುಭವ ಮಂಟಪ, ಕನ್ನಡ ಶಕ್ತಿ ಕೇಂದ್ರದ ಸದಸ್ಯರಾಗಿರುವುದು ಅದೇಷ್ಟು ಸತ್ಯವೋ ಎನ್ನುವುದು ಅನುಮಾನಿಸುವಂತೆ ಮಾಡಿದೆ ಎನ್ನುತ್ತಾರೆ ಸ್ಥಳೀಯರನೇಕರು.

ಈ ಸಾಹಿತ್ಯೀಕ, ಸಾಂಸ್ಕೖತಿಕ ವಲಯಗಳ ರಾಯಭಾರಿಗಳಾಗಬೇಕೆನ್ನುವರು ಇಂತಹ ಸುಳ್ಳುಗಳ ಸಂತೆ ನಿಮಾ೯ಣ ಮಾಡಿದರೆ. ನಿಜವಾದ ಪ್ರತಿಭಾವಂತರು ಮೂಲೆಗುಂಪಾಗಿ ಸೇರಬೇಕಾಗುತ್ತದೆ. ಕನ್ನಡ ಸಾಹಿತ್ಯ ಪರಿಷತ್ತು ಎನ್ನುವುದು ಕಸದ ತೊಟ್ಟಿಯನ್ನಾಗಿ ಮಾಡಿಬಿಡುವ ಭೀತಿ ಈ ರೀತಿಯ ಸಂಗತಿಗಳಿಂದ ಕಂಡು ಬರುತ್ತವೆ ಎನ್ನುತ್ತಾರೆ ಬಲ್ಲವರು.